Pawan Kalyan: ಪವನ್ ಕಲ್ಯಾಣ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ಆರೋಗ್ಯ ಶಿಬಿರ

ಪುನೀತ್ ರಾಜ್‌ಕುಮಾರ್ ನಿಧನರಾದ ಮೇಲೆ ಅವರು ಮಾಡಿರುವ ಸಮಾಜ ಸೇವೆಗಳು ಒಂದೊಂದೇ ಹೊರಗೆ ಬರುತ್ತಿವೆ. ಅಭಿಮಾನಿಗಳು ಕೂಡ ಅವರ ಸೇವಾ ಮಾರ್ಗದಲ್ಲಿ ನಡೆಯುವ ಮೂಲಕ ಪುನೀತ್ ಅವರನ್ನು ಚಿರಸ್ಥಾಯಿಯನ್ನಾಗಿ ಮಾಡುತ್ತಿದ್ದಾರೆ. ಇಷ್ಟು ದಿನ ಕೇವಲ ಪುನೀತ್ ಹಾಗೂ ಕನ್ನಡ ಅಭಿಮಾನಿಗಳು ಮಾತ್ರ ಈ ಕೆಲಸ ಮಾಡುತ್ತಿದ್ದರು.

ಈಗ ತೆಲುಗಿನ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಕಲ್ಯಾಣ್ ಅಭಿಮಾನಿಗಳು ಪುನೀತ್ ಅವರ ಹೆಸರಲ್ಲಿ ನೇತ್ರದಾನ, ರಕ್ತದಾನ ಶಿಬಿರ ಆಯೋಜನೆ ಮಾಡಿದ್ದಾರೆ.

ಡಿಸೆಂಬರ್ 6ರಂದು ಚಿಂತಾಮಣಿಯ ವಿದ್ಯಾಗಣಪತಿ ರಂಗಮಂದಿರದಲ್ಲಿ ಈ ಶಿಬಿರ ಆಯೋಜನೆಯಾಗಿದೆ. ಪುನೀತ್ ರಾಜ್‌ಕುಮಾರ್, ಪವನ್ ಕಲ್ಯಾಣ್ ಆತ್ಮೀಯ ಸ್ನೇಹಿತರು. ಅವರ ಅನುಬಂಧ ಬಹಳ ದೊಡ್ಡದು. ಹೇಗೆಂದರೆ, ತೆಲುಗಿನಲ್ಲಿ ಅಪ್ಪು ಅವರ ಯುವರತ್ನ ಚಿತ್ರ ಬಿಡಗಡೆಯಾದಾಗ, ತಮ್ಮ ಹೆಸರಿನ ಜೊತೆ ಇರುವ ಪವರ್ ಸ್ಟಾರ್ ಬಿರುದನ್ನು ಹಾಕಿಕೊಳ್ಳಲಿಲ್ಲ. ಕಾರಣ, ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್. ಅವರಿಗೆ ಗೌರವ ಸೂಚಿಸುವುದಕ್ಕೋಸ್ಕರ ಈ ರೀತಿ ಮಾಡಿದ್ದರು ಪುನೀತ್.

ಈಗ ಪವನ್ ಕಲ್ಯಾಣ್ ಅಭಿಮಾನಿಗಳು ಪುನೀತ್ ಅವರ ಹೆಸರಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಅಗಲಿದ ನಟನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಇದನ್ನೂ ಓದಿ: Puneeth Raj kumar : ಪುನೀತ್‌ ರಾಜ್‌ ಕುಮಾರ್‌ ಮನೆಗೆ ನಿರ್ಮಲಾನಂದ ಶ್ರೀ ಭೇಟಿ

(Pawan Kalyan fans arranges Health camp in the name of Puneeth Rajkumar)

Comments are closed.