Raj B Shetty : ಸೇಡಿನ ಜ್ವಾಲೆಯ ಸಿನಿಮಾಕ್ಕೆ ರಾಜ್‌ ಬಿ ಶೆಟ್ಟಿ ನಾಯಕ !

ನಟ ರಾಜ್‌ ಬಿ ಶೆಟ್ಟಿ (Raj B Shetty) ಮೊದಲ ಸಿನಿಮಾ ಒಂದು ಮೊಟ್ಟೆ ಕಥೆಯಲ್ಲಿ ತುಸು ತಮಾಷೆಯಾಗಿ, ತುಸು ಗಂಭೀರವಾಗಿ ಬಾಂಡ್ಲಿ ತಲೆಗಳ ಸಮಸ್ಯೆಯನ್ನು ಹೇಳಿ ಗೆದ್ದು ಮೊಟ್ಟೆ ಸ್ಟಾರ್ ಎನಿಸಿಕೊಂಡಿದ್ದರು. ಅಲ್ಲಿಂದ ಇವತ್ತಿನವರೆಗೂ ಜನ ಅವರನ್ನು ಗುರುತಿಸೋದು ಮೊಟ್ಟೆ ಸ್ಟಾರ್ ಎಂದೇ. ಆ ನಂತರ ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಇಂಡಸ್ಟ್ರಿಗೇ ಶಾಕ್ ಕೊಟ್ಟವರು ಅಂದರೆ ಅದೇ ರಾಜ್ ಬಿ.ಶೆಟ್ಟಿ. ಅದೊಂದು ವಿಚಿತ್ರ ವಿಕ್ಷಿಪ್ತ ಥ್ರಿಲ್ಲರ್ ಸಿನಿಮಾವಾಗಿತು. ಇದೀಗ ರಾಜ್‌ ಬಿ ಶೆಟ್ಟಿ ಹೊಸದೊಂದು ಸೇಡಿನ ಕಥೆಯ ಮೂಲಕ ಬೆಳ್ಳಿ ತೆರೆಗೆ ಬರುತ್ತಿದ್ದಾರೆ. ಹೌದು, ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಹನಿಯೇ ಶೂಟಿಂಗ್ ಮುಗಿಸಿ ಸಿನಿತಂಡ ಪೋಸ್ಟ್ ಪ್ರೊಡಕ್ಷನ್‍ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

ಆದರೆ ಸಿನಿತಂಡ ಇದೂವರೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಕಥೆಯ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ರಮ್ಯಾ ಸಿನಿರಂಗಕ್ಕೆ ನಿರ್ಮಾಪಕಿ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲಿಗೆ ಈ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದ ರಮ್ಯಾ, ನಂತರ ನಾಯಕಿಯ ಪಟ್ಟದಿಂದ ಹಿಂದೆಟ್ಟು ಹಾಕಿದ್ದರು. ನಂತರ ರಮ್ಯಾ ತಮ್ಮ ಪಾತ್ರಕ್ಕೆ ಸಿರಿ ರವಿಕುಮಾರ್ ಅವರನ್ನು ಆಯ್ಕೆ ಮಾಡಿದರು. ಸದ್ಯಕ್ಕೆ ಸಿನಿಮಾದ ಬಗ್ಗೆ ಹೊರಬಿದ್ದಿರೋ ಪೋಸ್ಟರ್ ಬಿಟ್ಟರೆ ಮತ್ತೇ ಯಾವ ಮಾಹಿತಿಗಳೂ ಲಭ್ಯವಿಲ್ಲ. ಇದರ ನಡುವೆಯೇ ಇನ್ನೊಂದು ಸಿನಿಮಾಕ್ಕೆ ಯೆಸ್ ಎಂದಿರೋ ರಾಜ್ ಬಿ.ಶೆಟ್ಟಿ ಸೇಡಿನ ಕಥೆಯೊಂದಕ್ಕೆ ಜೈ ಎಂದಿದ್ದಾರೆ.

ಇದನ್ನೂ ಓದಿ : Raj B Shetty – Siri Ravikumar : ವರ್ಷದ ಕೊನೆಯಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

ಇದನ್ನೂ ಓದಿ : Actor Siddharth: ಏರ್ ಪೋರ್ಟ್ ನಲ್ಲಿ ನಟ ಸಿದ್ದಾರ್ಥ್ ಹೆತ್ತವರು ಪಟ್ಟ ಪಾಡೇನು..?; ಹಿಂದಿ ಹೇರಿಕೆ ಬಗ್ಗೆ ಗುಡುಗಿದ ತಮಿಳು ನಟ

ಇದನ್ನೂ ಓದಿ : Avatar The Way of Water : ಬಾಕ್ಸ್‌ ಆಫೀಸ್‌ನಲ್ಲಿ 8200 ಕೋಟಿ ರೂ.. ಬಾಚಿಕೊಂಡ ಅವತಾರ್ ದಿ ವೇ ಆಫ್ ವಾಟರ್

ಇದನ್ನೂ ಓದಿ : Dash Song Release : ಹೊಸವರ್ಷಕ್ಕೆ ಚಂದನ್‌ ಶೆಟ್ಟಿ ಅಭಿನಯನದ ಸೂತ್ರಧಾರ ಸಿನಿಮಾದ ಡ್ಯಾಶ್‌ ಸಾಂಗ್‌ ರಿಲೀಸ್‌

ಈ ಹೊಸ ಸಿನಿಮಾಕ್ಕೂ ರಾಜ್‌ ಬಿ ಶೆಟ್ಟಿ ಕಥೆ ನೀಡಲಿದ್ದಾರೆ. ಆ ಡೈರೆಕ್ಟರ್ ಅವರ ಜೊತೆಯಲ್ಲೇ ಇದ್ದ ಬಾಸಿಲ್ ಅಲ್ಚಲಕ್ಕರ್ ಆಗಿದ್ದಾರೆ. ಮೊದಲ ಸಿನಿಮಾದಿಂದಲೂ ರಾಜ್ ಬಿ.ಶೆಟ್ಟಿ ಜೊತೆಯಲ್ಲಿರುವ ಬಾಸಿಲ್, ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಆಗುತ್ತಿದ್ದಾರೆ. ಮತ್ತೊಂದೆಡೆ ರಾಜ್, ಮಲಯಾಳಂ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಅಪರ್ಣಾ ಬಾಲಮುರಳಿ ಅಭಿನಯಿಸುತ್ತಿರುವ ಹೊಸ ಸಿನಿಮಾ ರುಧಿರಾಮ್‍ದಲ್ಲಿ ರಾಜ್ ಬಿ.ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ.

Raj B Shetty is the hero of the film of the flame of vengeance!

Comments are closed.