Ramya Comeback : ‘ನಿಮಗೆ ಶುಭಸುದ್ದಿ ತಿಳಿಸುವೆ ‘ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂತೆ ಮಾಡಿದ ಮೋಹಕತಾರೆ ರಮ್ಯಾ

Sandalwood Queen Ramya Comeback : ‘ನಾನು ಬಹಳ ಆಸಕ್ತಿ ಹುಟ್ಟಿಸೋ ಸ್ಕ್ರಿಪ್ಟ್ ಓದಿದ್ದೇನೆ. ಎಲ್ಲಾ ಸರಿಹೋದರೆ ನಿಮಗೆ ಶುಭಸುದ್ದಿ ತಿಳಿಸುತ್ತೇನೆ’ ಎಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ ಕನ್ನಡದ ಹಿರಿಯ ನಟಿ, ಮಾಗಿದ ರಾಜಕಾರಣಿ ಮೋಹಕ ತಾರೆ, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Sandalwood Queen Ramya) ಹಾಗಿದ್ದರೆ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಬರ್ತಾರಾ, ರಕ್ಷಿತ್ ಶೆಟ್ಟಿಯನ್ನು (Rakshit Shetty) ಮದುವೆ ಆಗ್ತಾರಾ? ಅನ್ನೋ ಗಾಳಿಸುದ್ದಿಗೆ ಇದೀಗ ತೆರೆಬಿದ್ದಿದೆ.

ರಮ್ಯಾ ತಮ್ಮ ಸ್ಟೇಟಸ್ ನಲ್ಲಿ, ‘ನನಗೆ ಹಲವು ಆಸಕ್ತಿದಾಯಕ ಸಿನಿಮಾ ಸ್ಕ್ಪಿಪ್ಟ್ ಗಳನ್ನು ಓದುತ್ತಿದ್ದೇನೆ. ಅದರಲ್ಲಿ ಒಂದಷ್ಟು ತುಂಬಾನೇ ಇಂಟರೆಸ್ಟಿಂಗ್ ಆಗಿವೆ. ಮತ್ತೆ ಸಿನಿಮಾಗೆ ಕಂಬ್ಯಾಕ್ ಯಾವಾಗ ಅಂತ ಕೇಳುತ್ತಿದ್ದೀರಲ್ಲ, ಎಲ್ಲವೂ ಅಂದುಕೊಂಡಂತೆ ಆದರೆ ಅತಿ ಶೀಘ್ರದಲ್ಲಿ ಶುಭ ಸುದ್ದಿ ಕೊಡ್ತೀನಿ. ಪ್ಲೀಸ್ ಕಂಟ್ಯೂನ್ಯು ಯುವರ್ಸ್ ಕ್ಯೂರಿಯಾಸಿಟಿ’ ಅಂತ ಬರೆದುಕೊಳ್ಳುವ ಮೂಲಕ ರಕ್ಷಿತ್ ಮತ್ತು ರಮ್ಯಾ ಮದುವೆ ಬಗೆಗಿನ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ರಕ್ಷಿತ್ ಶೆಟ್ಟಿಗೆ ಏಪ್ರಿಲ್ ನಿಂದ ಗುರುಬಲ ಆರಂಭಗೊಳ್ಳುತ್ತದೆ ಅಂತ ಜ್ಯೋತಿಷಿಗಳು ಹೇಳಿದ್ದರು. ಅದೇ ಸಮಯಕ್ಕೆ ರಮ್ಯಾ ಗುಡ್ ನ್ಯೂಸ್ ಹೇಳ್ತೀನಿ ಅಂತ ಹೇಳಿದ್ದರಿಂದ ಇಬ್ಬರೂ ಹೇಳಿಕೆಗಳೂ ಸೇರಿ ಅನೇಕ ಗಾಳಿಸುದ್ದಿಗೆ ಕಾರಣವಾಯಿತು. ರಮ್ಯಾ, ರಾಜಕೀಯ ರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಬಹಳ ವರ್ಷಗಳೇ ಆಗಿವೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಲ್ಲೂಕೂಡ ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಇತ್ತ ಸಿನಿಮಾ ರಂಗದ ಕಡೆಯೂ ಮುಖಮಾಡಿರಲಿಲ್ಲ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಈ ಮಧ್ಯೆ, ರಮ್ಯಾ-ರಾಹುಲ್ ಗಾಂಧಿ ನಡುವೆ ಕುಚುಕುಚು ನಡೆಯುತ್ತಿದೆ ಅನ್ನೋ ಸುದ್ದಿಯೂ ಕೂಡ ದಟ್ಟವಾಗಿ ಹಬ್ಬಿತ್ತು. ಆದರೆ ರಮ್ಯಾ ಮಾತ್ರ ಯಾರಿಗೂ ಸಿಗದೇ, ಎಲ್ಲೂ ಕಾಣಿಸಿಕೊಳ್ಳದೇ ನಿಗೂಢವಾಗಿದ್ದರು. ಈಗ ಮತ್ತೆ ಚಲನಚಿತ್ರ ಮಾಡುವ ಕುರಿತು ಮಾತನಾಡುತ್ತಿರುವುದುರಮ್ಯಾ ಸ್ಯಾಂಡಲ್ ವುಡ್ ಗೆ ವಾಪಸು ಬರುವ ಸೂಚನೆ ನೀಡಿದ್ದಾರೆ. ಈಗಲೂ ಕೂಡ ಸ್ಯಾಂಡಲ್ ವುಡ್ ನಲ್ಲಿ ರಮ್ಯಾಗೆ ಒಳ್ಳೆ ಮಾರ್ಕೆಟ್ ಅಂತೂ ಇದೆ.

ಇದೇ ರಮ್ಯಾ, ಸಿನಿಮಾ ಮುಳುಗುವ ಹಡಗು ಅಂತೆಲ್ಲ ಹೇಳಿಕೆ ನೀಡಿದ್ದವರು ಒಂದೆರಡು ವರ್ಷಗಳ ಕಾಲ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಕೂಡ ಇರಲಿಲ್ಲ. ಪುನೀತ್ ರಾಜ್ ಕುಮಾರ್ ನಿಧನರಾದಾಗ ಮೊದಲು ಬಾರಿಗೆ ಬೆಂಗಳೂರಲ್ಲಿ ಕಾಣಿಸಿಕೊಂಡರು, ನಂತರ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗುವ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತಿದ್ದರು. ನಟಿ ಅಮೂಲ್ಯ ಅವರ ಶ್ರೀಮಂತನ ಕಾರ್ಯಕ್ರಮದಲ್ಲಿ ರಮ್ಯಾಕಾಣಿಸಿಕೊಂಡದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು.

ಇದನ್ನೂ ಓದಿ: Rakesh Jhunjhunwala Investment Opportunity: ಭವಿಷ್ಯದಲ್ಲಿ ಮಧ್ಯಮ ವರ್ಗದ ನಾಗರಿಕರು ಹೂಡಿಕೆ ಮಾಡಲು ಯಾವ ಕ್ಷೇತ್ರ ಉತ್ತಮ? ದಿಗ್ಗಜ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಉತ್ತರವಿದು

(Ramya Comeback Divya Spandana says will give a good news soon Comebacks about rumors)

Comments are closed.