“ತಲೆಕೆಡಿಸಿಕೊಳ್ಳಬೇಡಿ ಸಾಕಷ್ಟು ಕಲಾವಿದರನ್ನು ಲಾಂಚ್ ಮಾಡಿದ್ದೇವೆ : ರಶ್ಮಿಕಾಗೆ ತಿರುಗೇಟುಕೊಟ್ಟ ನಟ ರಿಷಬ್‌ ಶೆಟ್ಟಿ

ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಸಿನಿರಂಗದ ಬಗ್ಗೆ ನೀಡಿರುವ ಒಂದಷ್ಟು ಹೇಳಿಕೆಗಳು ಕನ್ನಡಿಗರ ಕೋಪ ಕೆರಳಿಸುವಂತೆ ಮಾಡಿದೆ. ಹೀಗಾಗಿ ರಶ್ಮಿಕಾಗೆ “ಕೃತಜ್ಞತೆ ಇಲ್ಲ, ಹತ್ತಿದ ಏಣಿ ಒದ್ದು ಬಿಟ್ರು, ಅವಕಾಶ ಕೊಟ್ಟ ಕನ್ನಡ ಸಿನಿರಂಗವನ್ನು ಮರೆತು ಬಿಟ್ರು” ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಇದೇ ಕಾರಣಕ್ಕೆ ಕೊಡಗಿನ ಕುವರಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಕೆಲ ದಿನಗಳ ಹಿಂದೆ ರಶ್ಮಿಕಾ ಕೈ ಸನ್ನೆ ಮಾಡಿ ಮಾತನಾಡಿದ್ದ ರೀತಿ ನೋಡಿ ರಿಷಬ್ ಶೆಟ್ಟಿ (Rishabh Shetty – Rashmika Mandanna) ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

ಹತ್ತು ಹಲವು ಕಾರಣಗಳಿಗೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇದ್ದರು. ಆಕೆ ಏನೇ ಹೇಳಿಕೆ ಕೊಟ್ಟರು ಅದು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿತ್ತು. ಕಿಚ್ಚ ಸುದೀಪ್ ಕೂಡ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು. ಇನ್ನು ರಶ್ಮಿಕಾ ಕೂಡ ಟ್ರೋಲ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. “ಪದೇ ಪದೇ ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ. ನೆಗೆಟಿವಿಟಿಗೆ ನಾನು ಪಂಜಿಂಗ್​ ಬ್ಯಾಗ್​ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ನಾನು ಹೇಳದೇ ಇರುವ ವಿಚಾರಕ್ಕೂ ಟ್ರೋಲ್ ಮಾಡುವುದು ಬೇಸರ ತಂದಿದೆ” ಎಂದು ಬರೆದುಕೊಂಡಿದ್ದರು. ಅಷ್ಟಾದರೂ ರಶ್ಮಿಕಾ ವಿರುದ್ಧ ಕೆಲವರು ಟ್ರೋಲ್ ನಿಲ್ಲಿಸಿಲ್ಲ.

ರಶ್ಮಿಕಾ ಮಂದಣ್ಣ ಕುರಿತು ಇದೀಗ ಮತ್ತೊಮ್ಮೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಪರೋಕ್ಷವಾಗಿ ಟಾಂಗ್ ಕೂಡ ಕೊಟ್ಟಿದ್ದಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ಮಾತಿನ ದಾಟಿ ಕೂಡ ಬದಲಾಗಿದೆ. ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ನಟ ರಿಷಬ್ ಶೆಟ್ಟಿ ಮಾಡತನಾಡಿದ್ದರು. ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಕುರಿತಾದ ಪ್ರಶ್ನೆಗೆ ರಿಷಬ್ ಶೆಟ್ಟಿ, ‘ಅಯ್ಯೋ ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಾವು ಸಾಕಷ್ಟು ಕಲಾವಿದರನ್ನು ಲಾಂಚ್ ಮಾಡಿದ್ದೇವೆ. ನಮಗೂ ಸಾಕಷ್ಟು ಜನ ನಿರ್ಮಾಪಕರು ಮತ್ತು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಅಂತಹ ದೊಡ್ಡ ಜನರ ಲಿಸ್ಟ್ ನಮ್ಮ ಬಳಿ ಇದೆ. ಮತ್ತೇನು ಹೇಳುವುದಕ್ಕೆ ಇಲ್ಲ’ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಕೂಡ ತೆಲುಗು ಸಂದರ್ಶನವೊಂದರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ನನಗೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಂಡಸ್ಟ್ರಿಗೆ ದಾರಿ ತೋರಿಸಿದ್ರು, ಅವ್ರು ಈ ಅವಕಾಶ ಕೊಟ್ರು, ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಒಳ್ಳೆಯ ಜನರ ಜೊತೆ ಕೆಲಸ ಮಾಡಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಬಿಟ್ಟು ಹೋದ ಮೇಲೆ ‘ಕಿರಿಕ್ ಪಾರ್ಟಿ’ ಸಿನಿಮಾ ಹಾಗೂ ರಕ್ಷಿತ್, ರಿಷಬ್ ಬಗ್ಗೆ ಮಾತನಾಡಿದ್ದ ರೀತಿಯೇ ಬೇರೆ. ಈ ಬಾರಿ ಮಾತನಾಡಿರುವ ರೀತಿಯೇ ಬೇರೆ ತರ ಇದೆ ಎಂದು ಕೆಲವರು ಹೇಳುತ್ತಿದ್ದಾರೆ.

ಇದನ್ನೂ ಓದಿ : Young actor Dhanush : ಸ್ಯಾಂಡಲ್‌ವುಡ್‌ ಯುವ ನಟ ಧನುಷ್‌ ವಿಧಿವಶ

ಇದನ್ನೂ ಓದಿ : ಪಠಾಣ್ ಸಿನಿಮಾ ವಿವಾದ :”ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ” ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

ಇದನ್ನೂ ಓದಿ : KLRahul – Athiya Shetty Marriage : ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ ರಾಹುಲ್-ಆತಿಯಾ ಶೆಟ್ಟಿ ಮದುವೆ

ಮತ್ತೊಂದೆಡೆ, ಶೆಟ್ಟರ ಬಳಗದ ಪ್ರಮೋದ್‌ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿ, ಯಾರೇ ಆದರೂ ಹತ್ತಿದ ಏಣಿ ಒದೆಯಬಾರದು ಎಂದಿದ್ದರು. ಸದ್ಯ ರಶ್ಮಿಕಾ ಮಂದಣ್ಣ ನಟನೆಯ ತಮಿಳು ಸಿನಿಮಾ “ವಾರಿಸು” ಸಿನಿಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಮುಂದೆ ಬಾಲಿವುಡ್‌ನಲ್ಲಿ “ಅನಿಮಲ್”‌, ತೆಲುಗಿನ “ಪುಷ್ಪ 2” ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ರಶ್ಮಿಕಾ ನಟಿಸಿದ್ದಾರೆ.

Rishabh Shetty – Rashmika Mandanna : “Don’t worry we have launched a lot of artistes” : Actor Rishabh Shetty on Rashmika Mandanna

Comments are closed.