ನಟ ದರ್ಶನ್‌ ತೂಗುದೀಪ್ ಫ್ಯಾನ್‌ ಗೆ ಫಿದಾ ಆದ ಆರ್‌ಜೆ ಮಯೂರ ರಾಘವೇಂದ್ರ‌

ಸ್ಯಾಂಡಲ್‌ವುಡ್‌ನ ನಟ ದರ್ಶನ್‌ ಅಭಿನಯದ ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಿನಿಮಾ ಸಲುವಾಗಿ ನಟ ದರ್ಶನ್‌ ಸಾಕಷ್ಟು ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ. ಸದ್ಯ ಆರ್‌ಜೆ ಮಯೂರ ರಾಘವೇಂದ್ರ (RJ Mayura Raghavendra) ಅವರ ಯೂಟ್ಯೂಬ್‌ ಚಾನೆಲ್‌ಗೆ ನಟ ದರ್ಶನ್‌ ಸಂದರ್ಶನ ನೀಡಿದ್ದಾರೆ. ಆ ಎಪಿಸೋಡ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಅಭಿಮಾನಿಗಳು ಮುಗಿಬಿದ್ದು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಖುಷಿ ವಿಚಾರವನ್ನು ಮಯೂರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆರ್‌ಜೆ ಮಯೂರ ರಾಘವೇಂದ್ರ ರಾಘ ರಾಘಂ ಸ್ಟೋರಿ ಹೆಸರಿನಲ್ಲಿ ಯೂಟ್ಯೂಬ್‌ ಚಾನಲ್‌ ಹೊಂದಿದ್ದಾರೆ. ಈ ಯೂಟ್ಯೂಬ್‌ ಚಾನೆಲ್‌ನಲ್ಲಿ ಗೋಲ್ಡ್‌ ಕ್ಲಾಸ್‌ ಹೆಸರಿನಲ್ಲಿ ಸಂದರಶನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಸದ್ಯ ಕ್ರಾಂತಿ ಸಿನಿಮಾ ರಿಲೀಸ್‌ ಹೊಸ್ತಿಲಿನಲ್ಲಿ ನಟ ದರ್ಶನ್‌ ಅವರನ್ನು ಅತಿಥಿಯಾಗಿ ವಿಶೇಷ ಸಂದರ್ಶನ ಮಾಡಿದ್ದರು. ಅದಕ್ಕೆ ನಟಿ ರಚಿತಾ ರಾಮ್‌ ಕೂಡ ಭಾಗಿ ಆಗಿದ್ದರು. ಈ ಸಂದರ್ಶನದಲ್ಲಿ ನಟ ದರ್ಶನ್‌ ಕ್ರಾಂತಿ ಸಿನಿಮಾ ಸೇರಿದಂತೆ ವೈಯಕ್ತಿಕ ಹಾಗೂ ವೃತ್ತಿ ಜೀವನದ ಏಳುಬೀಳಿನ ಬಗ್ಗೆ ಮಾತನಾಡಿದ್ದರು. ಎಪಿಸೋಡ್‌ಗೂ ಮೊದಲು ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಸಖತ್‌ ವೈರಲ್‌ ಆಗಿತ್ತು. ಹೀಗಾಗಿ ದರ್ಶನ್‌ ಅಭಿಮಾನಿಗಳು ಕಂಪ್ಲೀಟ್‌ ಎಪಿಸೋಡ್‌ಗಾಗಿ ಕಾದು ಕೂತಿದ್ದರು.

ಈ ವಿಶೇಷ ಸಂದರ್ಶನಕ್ಕೆ ಸಿಕ್ಕಿದ ಪ್ರತಿಕ್ರಿಯೆ ಬಗ್ಗೆ ಮಯೂರ ರಾಘವೇಂದ್ರ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ,”ನಿನ್ನೆ ಸಂಜೆ ನನ್ನ ಫೋನ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದು ಬರುತ್ತಿರುವ ಮೆಸೇಜ್‌ನಿಂದ ತಿಳಿದು ಬಂತು ಈ ವ್ಯಕ್ತಿಗೆ ಇರುವ ಅಭಿಮಾನಿಗಳ ಸಂಖ್ಯೆ. ಇಂದಿನ ದಿನಗಳಲ್ಲಿ ನಟರು, ಸಂದರ್ಶನ ಮಾಡುವವರ ಯೂಟ್ಯೂಬ್‌ನಲ್ಲಿ ಎಷ್ಟು ಜನ ಫಾಲೋವರ್ಸ್‌ ಇದ್ದಾರೆ ಎಂದು ನೋಡೋ ಕಾಲದಲ್ಲಿ, ಈ ಚಿನ್ನದಂತ ಮನುಷ್ಯ ಇದೆಲ್ಲ ಲೆಕ್ಕಿಸದೆ ಸಂದರ್ಶನ ಕೊಟ್ಟು ಹಾಗೂ ಎಲ್ಲ ರೀತಿಯ ಸಹಕಾರ ನೀಡಿದರು” ಎಂದು ಬರೆದುಕೊಂಡಿದ್ದಾರೆ.

ಹಾಗೆ ಮುಂದುವರೆಸಿದ ಮಯೂರ ರಾಘವೇಂದ್ರ ಅವರು”ನನ್ನ ವಯಕ್ತಿಕ ಅನುಭವದಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ಸಂದರ್ಶನ ಮಾಡುತ್ತಿರುವೆ. ಇದರಲ್ಲಿ ನಮ್ಮನ್ನು ತಿರಸ್ಕರಿಸಿದವರ ಜೊತೆಗೆ ನಮ್ಮನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದವರನ್ನು ನೋಡಿದ್ದೇನೆ …ಆದರೆ ಈ ಒಂದು ನಟ, ನಿನ್ನೆಯ ವಿಡಿಯೋ ಬಿಡುಗಡೆಯಾದ ನಂತರ ಕೇವಲ ಒಂದು ದಿನದಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರೆ… ಇದೆ ತಿಳಿಸುತ್ತೆ ಜನರು ದರ್ಶನ್ ಅವರ ಮೇಲೆ ಇಟ್ಟಿರುವ ಪ್ರೀತಿ ! ಇದಕ್ಕಿಂತ್ತಾ ಇನ್ನೇನು ಬೇಕು … ಜನರ ಪ್ರೀತಿ ಹಾಗೂ ಗೌರವ ಇಷ್ಟು ವರ್ಷದ ಪರಿಶ್ರಮದಲ್ಲಿ ಈ ವ್ಯಕ್ತಿಯ ಗಳಿಕೆಗಳು!ಧನ್ಯವಾದಗಳು ದರ್ಶನ್ ಸರ್!

ಇದನ್ನೂ ಓದಿ : “ತಲೆಕೆಡಿಸಿಕೊಳ್ಳಬೇಡಿ ಸಾಕಷ್ಟು ಕಲಾವಿದರನ್ನು ಲಾಂಚ್ ಮಾಡಿದ್ದೇವೆ : ರಶ್ಮಿಕಾಗೆ ತಿರುಗೇಟುಕೊಟ್ಟ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : ರಿಲೀಸ್‌ಗೆ ರೆಡಿ ಆಯ್ತು ನಟ ತುನುಷ್‌ ಶಿವಣ್ಣ ಅಭಿನಯದ ಶ್ರೀ ನಟವರ್‌ಲಾಲ್‌

ಇದನ್ನೂ ಓದಿ : Breaking : ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಅರೆಸ್ಟ್

ಇದರ ಜೊತೆಗೆ ಇನ್ನೊಬರು ಈ ಯಶಸ್ಸಿಗೆ ಕಾರಣ. ನನ್ನ ಮೆಚ್ಚಿನ ಸ್ನೇಹಿತೆ ರಚಿತಾ ರಾಮ್! ಈ ಯೋಚನೆಯನ್ನು ಅವರೊಂದಿಗೆ ಹಂಚಿಕೊಂಡಾಗ, ಅವರೇ ನಂಗೆ ಪ್ರೋತ್ಸಾಹ ಕೊಟ್ಟು, ಈ ಯೋಚನೆಯನ್ನು ನಿರ್ಮಾಣ ಕೂಡ ಮಾಡಿದರು.ರಿಷಭಪ್ರಿಯದ ನಂತರ ಈ ಸಹಯೋಗ ಇಷ್ಟೊಂದು ಮಟ್ಟಿಗೆ ಯಶಸ್ಸು ಕಂಡಿರುವುದು ನಮಗಿಬ್ಬರಿಗೂ ಇನ್ನಷ್ಟು ಒಟ್ಟಾಗಿ ಕೆಲಸ ಮಾಡುವ ನಂಬಿಕೆ ಹಾಗು ಹುರುಪು ತುಂಬಿಸಿದೆ. ಧನ್ಯವಾದಗಳು ರಚಿತಾ” ಎಂದು ಬರೆದು ಹಂಚಿಕೊಂಡಿದ್ದಾರೆ.

RJ Mayura Raghavendra falls in love with actor Darshan Thoogudeep’s fan

Comments are closed.