ಕನ್ನಡ ಚಿತ್ರರಂಗದಲ್ಲಿ 24 ವರ್ಷಗಳು ಪೊರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರೋ ನಟ ದರ್ಶನ್ ಗೆ ಸ್ಪೆಶಲ್ ವಿಶ್ ಹಾಗೂ ಗಿಫ್ಟ್ ಸಿಕ್ಕಿದೆ. ನಿರ್ದೇಶಕ ದಯಾಳ್ ಪದ್ಮನಾಭ್ ದರ್ಶನ್ ಗೆ ಸ್ಪೆಶಲ್ ಗಿಫ್ಟ್, ಕೇಕ್ ಜೊತೆ ಶುಭಹಾರೈಸಿದ್ದಾರೆ.
ಡಿ.ಬಾಸ್ ರಾಜರಾಜೇಶ್ವರಿ ನಿವಾಸಕ್ಕೆ ತೆರಳಿದ ನಿರ್ದೇಶಕ ದಯಾಳ್ ಪದ್ಮನಾಭ್, ತಮ್ಮ ಕುಟುಂಬಸ್ಥರೇ ಅಭಿಮಾನದಿಂದ ತಯಾರಿಸಿದ ದರ್ಶನ್ 24 ಎಂಬ ನಾಮಫಲಕವನ್ನು ಗಿಫ್ಟ್ ಆಗಿ ನೀಡಿದ್ದು, ಇದರೊಂದಿಗೆ ದರ್ಶನ್ 24 ಎಂಬ ಟೈಟಲ್ ನ ಕೇಕ್ ನ್ನು ಕೂಡ ಕತ್ತರಿಸಿ ಸಂಭ್ರಮಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ದಯಾಳ್ ಪದ್ಮನಾಭ್, ದರ್ಶನ್ ಅವರು ಚಿತ್ರರಂಗದಲ್ಲಿ 24 ವರ್ಷ ಪೊರೈಸಿದ್ದಕ್ಕಾಗಿ ಅವರನ್ನು ಭೇಟಿ ಮಾಡಿ ಶುಭಹಾರೈಸಿದೆ. ನನ್ನ ಕುಟುಂಬದ ಸಹಾಯದಿಂದ ತಯಾರಿಸಿದ ಗಿಫ್ಟ್ ನೀಡಿ ಅಭಿನಂದಿಸಿದೆ. ಸೂಪರ್ ಸ್ಟಾರ್ ಆಗಿ ಬೆಳೆದಿರುವ ಅವರ ಶ್ರಮವನ್ನು ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
1997 ರ ಅಗಸ್ಟ್ ನಲ್ಲಿ ವಿನೋದ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಮಹಾಭಾರತ ಸಿನಿಮಾದಲ್ಲಿ ವಿಲನ್ ರೋಲ್ ಮೂಲಕ ದರ್ಶನ್ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದು, ಸದ್ಯ ಸಾರ್ಥಕ 24 ವರ್ಷಗಳ ಸಂಭ್ರಮದಲ್ಲಿದ್ದಾರೆ.
ಮೊನ್ನೆಯಷ್ಟೇ ದರ್ಶನ್ ಸ್ನೇಹಿತರು,ಆಪ್ತರು ದರ್ಶನ್ 24 ವರ್ಷಗಳ ಸಂಭ್ರಮವನ್ನು ಆಚರಿಸಲು ಪಾರ್ಟಿ ನಡೆಸಿದ್ದು, ಚಿತ್ರರಂಗದ ಗಣ್ಯರು, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾಮನ್ ಡಿಪಿ ಕೂಡ ರಿಲೀಸ್ ಆಗಿತ್ತು.
Comments are closed.