Sudeep: ವಿಕ್ರಾಂತ ರೋಣ ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು? ಅಭಿಮಾನಿಗಳಿಗೆ ಸಿಕ್ತು ಉತ್ತರ!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಹವಾ. ಕೋಟಿಗೊಬ್ಬ-3 ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ ರೋಣ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕಿಚ್ಚ ಭರ್ಜರಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್  ಮುಂದಿನ ಸಿನಿಮಾಗೆ  ಕಾಲಿವುಡ್ ನಿರ್ದೇಶಕರ ಜೊತೆ ಸೇರೋದು ಬಹುತೇಕ ಖಚಿತವಾಗಿದೆ.  ಕಾಲಿವುಡ್ ನ ಪ್ರಸಿದ್ಧ ನಿರ್ದೇಶಕ ವೆಂಕಟ್ ಪ್ರಭು, ಕಿಚ್ಚನ ಮನೆಗೆ ಭೇಟಿ ನೀಡಿದ್ದಾರೆ. ವೆಂಕಟ್ ಪ್ರಭು ಅವರಿಗೆ ಕಿಚ್ಚ ಸುದೀಪ್  ತಮ್ಮ ಕೈಯಾರೆ ಅಡುಗೆ  ಮಾಡಿ ಬಡಿಸಿದ್ದಾರೆ.

ಸುದೀಪ್ ಆತಿಥ್ಯದ ಪೋಟೋ ಜೊತೆಗೆ  ಈ ವಿಚಾರವನ್ನು ಹಂಚಿಕೊಂಡಿರುವ ವೆಂಕಟ್ ಪ್ರಭು, ಎಂಥಹ ಅದ್ಭುತ ಆತಿಥ್ಯ. ಧನ್ಯವಾದಗಳು ಸುದೀಪ್ ಅವರೇ,  ನೀವು ಬಹಳ ಚೆನ್ನಾಗಿ ಅಡುಗೆ ಮಾಡ್ತೀರಾ. ನಮ್ಮ ಮುಂದಿನ ಚಿತ್ರಕ್ಕಾಗಿ  ಉತ್ಸುಕನಾಗಿದ್ದೇನೆ. ಅಡ್ವಾನ್ಸ್ ಹ್ಯಾಪಿ ಬರ್ತಡೇ ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್ ನಿಂದ  ಸುದೀಪ್ ಮುಂದಿನ ಸಿನಿಮಾ ವೆಂಕಟ್ ಪ್ರಭು ಜೊತೆ ಮಾಡೋದು ಕನ್ಪರ್ಮ್ ಆಗಿದೆ. ಆದರೆ ಸಿನಿಮಾದ ಕತೆ ಯಾವುದು, ಟೈಟಲ್ ಏನು ಅನ್ನೋದು ಇನ್ನು ಕನ್ಪರ್ಮ್ ಆಗಿಲ್ಲ.ಮೂಲಗಳ ಮಾಹಿತಿ ಪ್ರಕಾರ ಅಕ್ಟೋಬರ್ 14 ಕ್ಕೆ ಕೋಟಿಗೊಬ್ಬ-3 ರಿಲೀಸ್ ಆಗಲಿದ್ದು, ಸುದೀಪ್ ಬರ್ತಡೇ ದಿನ ಕಾಲಿವುಡ್ ನಿರ್ದೇಶಕರ ಜೊತೆ ಸುದೀಪ್ ನಟಿಸೋ ಚಿತ್ರದ ಡಿಟೇಲ್ಸ್ ರಿವೀಲ್ ಆಗೋ ಸಾಧ್ಯತೆ ಇದೆ.

Comments are closed.