Imandar: ‘ಕಾಂತಾರ’ದ ಮಾದರಿಯಲ್ಲೇ ರೋಮಾಂಚನ ಸೃಷ್ಟಿಸಿದ ‘ಇನಾಮ್ದಾರ್​​’ ಸಿನಿಮಾ ಪೋಸ್ಟರ್​​

Inamdar Kantara : ಸ್ಯಾಂಡಲ್​ವುಡ್​ನಲ್ಲಿ ಸದ್ಯ ಕರಾವಳಿಗರದ್ದೇ ಹಬ್ಬ ಎಂದು ಹೇಳಿದರೆ ತಪ್ಪಾಗಲಿಕ್ಕೆ ಸಾಧ್ಯವಿಲ್ಲ. ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಪಂಜುರ್ಲಿ ಎಂಬ ದೈವದ ಕತೆಯನ್ನಿಟ್ಟುಕೊಂಡು ಹೆಣೆದ ಈ ಸಿನಿಮಾ ಕೇವಲ ತುಳು ಭಾಗದ ಜನತೆ ಮಾತ್ರವಲ್ಲದೇ ಸಂಪೂರ್ಣ ಕರುನಾಡಿನ ಮನಸ್ಸನ್ನೇ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ತೆರೆಕಂಡ ಗರುಡ ಗಮನ ವೃಷಭ ವಾಹನ ಸಿನಿಮಾ ಕೂಡ ಕರಾವಳಿ ಭಾಗದ ಕತೆಯನ್ನೇ ಆಧರಿಸಿತ್ತು. ಈ ಸಿನಿಮಾ ಕೂಡ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತ್ತು.

ಚಾರ್ಲಿ, ಗರುಡ ಗಮನ ವೃಷಭ ವಾಹನ ಹಾಗೂ ಕಾಂತಾರದಂತಹ ಸಿನಿಮಾಗಳು ಭರ್ಜರಿ ಯಶಸ್ಸನ್ನು ಗಳಿಸಿದ ಬಳಿಕ ಇದೀಗ ಸಿನಿಮಾ ಪ್ರಿಯರಿಗೆ ಕರಾವಳಿ ಭಾಗದ ಜನತೆಯ ಸಿನಿಮಾಗಳು ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ, ಈ ಎಲ್ಲದರ ನಡುವೆ ಇದೀಗ ಕರಾವಳಿಯ ಮತ್ತೊಂದು ಪ್ರತಿಭೆ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಕೂಡ ಇಂತಹದ್ದೇ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕತ್ತಲೆ ಕೋಣೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಂದೇಶ ಶೆಟ್ಟಿ ಇದೀಗ ವಿಜಯ ದಶಮಿ ದಿನಂದು ಕೆಟ್ಟದರ ಎದುರು ಒಳ್ಳೆಯದು ಹೇಗೆ ಗೆಲುವು ಸಾಧಿಸುತ್ತಿದೆ ಎಂಬ ಸಂದೇಶವನ್ನು ಹೊಂದಿರುವ ಇನಾಮ್ದಾರ್​​​ ಸಿನಿಮಾದ ಪೋಸ್ಟ್​ ರಿಲೀಸ್​ ಮಾಡಿದ್ದಾರೆ.

ಈ ಸಿನಿಮಾವನ್ನು ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದ ಪೋಸ್ಟರ್​ ಕೂಡ ಬಹುತೇಕ ಕಾಂತಾರ ಸಿನಿಮಾವನ್ನೇ ಹೋಲುತ್ತಿರೋದ್ರಿಂದ ಈ ಸಿನಿಮಾದ ಮೂಲಕವೂ ನಿರ್ದೇಶಕ ಸಂದೇಶ ಶೆಟ್ಟಿ ಸಿನಿ ರಸಿಕರ ಕಣ್ಣಿಗೆ ಬಾಡೂಟವನ್ನೇ ಬಡಿಸುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ಅವತಾರ ಸಿನಿ ರಸಿಕರಿಗೆ ರೋಮಾಂಚನವನ್ನುಂಟು ಮಾಡಿತ್ತು. ಅದೇ ರೀತಿ ಇಮಾನ್ದಾರ್​ ಸಿನಿಮಾದಲ್ಲಿ ಮಹಿಷಾಸುರ ಅವತಾರ ಮೋಡಿ ಮಾಡುವ ನಿರೀಕ್ಷೆಯಿದೆ. ಬಯಲು ಸೀಮೆಯ ಸೊಗಡು, ಮಲೆನಾಡಿನ ಪ್ರಕೃತಿ ಸೌಂದರ್ಯ ಹಾಗೂ ಕರಾವಳಿಯ ಸಂಸ್ಕೃತಿಗಳನ್ನು ಮಿಶ್ರಣ ಮಾಡಿ ಜನಾಂಗೀಯ ಘರ್ಷಣೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾವನ್ನು ಹೆಣೆಯಲಾಗಿದ್ದು ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಧ್ಯ ಸಿನಿಮಾ ತಂಡ ಪೋಸ್ಟ್​ ಪ್ರೊಡಕ್ಷನ್​ ಕಾರ್ಯಗಳಲ್ಲಿ ಬ್ಯುಸಿಯಾಗಿದೆ.

ಚಂದನವನದ ಪಾಲಿಗೆ ಈ ವರ್ಷ ಸುವರ್ಣಯುಗವಾಗಿದೆ. ಅದರಲ್ಲೂ ಕರಾವಳಿಯ ಸಂಸ್ಕೃತಿ ದೇಶಾದ್ಯಂತ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಸಿನಿಮಾಗಳು ಹಿಟ್​ ಆಗಿವೆ. ಈ ಸಾಲಿಗೆ ಇನಾಮ್ದಾರ್​ ಸಿನಿಮಾ ಕೂಡ ಸೇರಲಿ, ಕರಾವಳಿಯ ಮತ್ತೊಬ್ಬ ನಿರ್ದೇಶಕ ಕೂಡ ಚಂದನದವನದ ಬಹುಬೇಡಿಕೆಯ ನಿರ್ದೇಶನಕನಾಗಿ ಬೆಳೆಯುವಂತಾಗಲಿ ಎಂಬುದೇ ಎಲ್ಲರ ಆಶಯ.

ಇದನ್ನು ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

ಇದನ್ನೂ ಓದಿ : BBK Season9 :ಬಿಗ್ ಬಾಸ್ ಮನೆಯಿಂದ ನವಾಜ್ ಔಟ್

Inamdar Kantara :The movie poster of ‘Inamdar’ created excitement in the same way as ‘Kantara’

Comments are closed.