ಜೂ. ಎನ್‌ಟಿಆರ್‌ ಜೊತೆ ನಟಿಸುವುದನ್ನು ದುನಿಯಾ ವಿಜಯ್‌ ಮಿಸ್‌ ಮಾಡಿಕೊಂಡಿದ್ದೇಕೆ ?

ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್‌ ಟಾಲಿವುಡ್‌ನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ. ಇದೀಗ ಬಾಲಕೃಷ್ಣ ಅಭಿನಯದ “ವೀರ ಸಿಂಹ ರೆಡ್ಡಿ” (Veera Simha Reddy) ಸಿನಿಮಾದಲ್ಲಿ ಖಳನಾಯಕನಾಗಿ ದುನಿಯಾ ವಿಜಯ್‌ ಎಂಟ್ರಿ ಕೊಟ್ಟಿದ್ದಾರೆ. ಈಗ ಈ ಸಿನಿಮಾ ಸಿನಿಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಬ್ಲ್ಯಾಕ್‌ ಕೋಬ್ರಾಗೆ ಭೇಷ್‌ ಎಂದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್‌ ತಮ್ಮ ಅದ್ಭುತ ನಟನೆಯೊಂದಿಗೆ ಉತ್ತಮ ನಿರ್ದೇಶಕರಾಗಿ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ದುನಿಯಾ ವಿಜಯ್‌ ನಿರ್ದೇಶನದ “ಸಲಗ” ಸಿನಿಮಾ ಹಿಟ್‌ ಲಿಸ್ಟ್‌ಗೆ ಸೇರಿಕೊಂಡಿದೆ. ಒಂದೆಡೆ “ಸಲಗ” ಗೆಲುವನ್ನು ಬಿಡದೆ, ಇನ್ನೊಂದೆಡೆ ತೆಲುಗು ಸಿನಿರಂಗದ ಅವಕಾಶವನ್ನು ಸರಿದೂಗಿಸಿಕೊಂಡು ಬಂದಿದ್ದಾರೆ. ಇವರು ಮನಸ್ಸು ಮಾಡಿದ್ದರೆ “ವೀರ ಸಿಂಹ ರೆಡ್ಡಿ” ಸಿನಿಮಾ ಎರಡನೇ ಅಥವಾ ಮೂರನೇ ಸಿನಿಮಾ ಆಗಬೇಕಿತ್ತು. ಯಾಕೆಂದರೆ ಇವರಿಗೆ ಈ ಮೊದಲು ಟಾಲಿವುಡ್‌ ಯಂಗ್‌ ಟೈಗರ್‌ ಜೂನಿಯರ್‌ ಎನ್‌ಟಿಆರ್‌ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿತ್ತು. ಆದರೆ ಆ ಚಾನ್ಸ್‌ನ್ನು ದುನಿಯಾ ವಿಜಯ್‌ ಕೈ ಬಿಟ್ಟಿದ್ದರು. ಅದಕ್ಕೆ ಕಾರಣವೆಂದು ವೀರ ಸಿಂಹ ರೆಡ್ಡಿ ಸಿನಿಮಾದ ಸಂದರ್ಶನದ ವೇಳೆ ರೀವಿಲ್‌ ಮಾಡಿದ್ದಾರೆ.

ಇದನ್ನೂ ಓದಿ : ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

ಇದನ್ನೂ ಓದಿ : ಸಂಕ್ರಾಂತಿ ಪ್ರಯುಕ್ತ ಕನ್ನಡ ಸಿನಿಮಾಗಳಿಗೆ ಇಲ್ಲ ಥಿಯೇಟರ್‌ ಭಾಗ್ಯ

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ಇದನ್ನೂ ಓದಿ : 10 ಮಿಲಿಯನ್ ವೀವ್ಸ್ ಸಿಗದೆ ಅಜನೀಶ್ ಲೋಕನಾಥ್‌ಗೆ ಬಿಡುಗಡೆ ಭಾಗ್ಯವಿಲ್ಲ ಎಂದ “ಹಾಸ್ಟೆಲ್ ಹುಡುಗರು”

ಜೂನಿಯರ್‌ ಎನ್‌ಟಿಆರ್‌ ಅಭಿನಯದ “ಜನತಾ ಗ್ಯಾರೇಜ್‌” ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಇದರ ಹಿಂದಯೇ 2016ರಲ್ಲಿ “ಜೈ ಲವ ಕುಶ” ಸಿನಿಮಾ ಸೆಟ್ಟೇರಿತ್ತು. ಈ ಸಿನಿಮಾಕ್ಕೆ ದುನಿಯಾ ವಿಜಯ್‌ ಆಫರ್‌ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ದುನಿಯಾ ವಿಜಯ್‌ ಕನ್ನಡದಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ “ದನಕಾಯೋನು” ಸಿನಿಮಾದಲ್ಲಿ ನಟಿಸುತ್ತಿದ್ದರು. ಅದರ ಜೊತೆಯಲ್ಲಿ “ಮಾಸ್ತಿಗುಡಿ” ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಜೂನಿಯರ್‌ ಎನ್‌ಟಿಆರ್‌ ಸಿನಿಮಾವನ್ನು ಕೈ ಬಿಟ್ಟಿದ್ದರು. ಈ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ದುನಿಯಾ ವಿಜಯ್‌ ಹೇಳಿಕೊಂಡಿದ್ದಾರೆ.

Veera Simha Reddy : Why did Duniya Vijay miss acting with Jr. NTR ?

Comments are closed.