ಶಾರುಖ್‌ ಖಾನ್‌ ಜೊತೆ ಸಿನಿಮಾ ಸದ್ಯಕ್ಕಿಲ್ಲ ಎಂದ ವಿಜಯ್ ಕಿರಗಂದೂರು

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ (Vijay Kirgandur – Shah Rukh Khan) ಕಡಿಮೆ ಅವಧಿಯಲ್ಲಿಯೇ ಭಾರತದ ಸಿನಿರಂಗದ ಪ್ರಮುಖ ಹಾಗೂ ಭರವಸೆಯ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪುನೀತ್ ರಾಜ್‌ಕುಮಾರ್ ನಟನೆಯ ‘ನಿನ್ನಿಂದಲೆ’ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಹೊಂಬಾಳೆ ಫಿಲ್ಮ್ಸ್ ಇಂದು ಬೆಳೆದಿರುವ ಎತ್ತರ ಕನ್ನಡಿಗ ಹೆಮ್ಮೆ ಪಡುವಂಥಹದ್ದು. ಕೆಜಿಎಫ್’ ಸರಣಿ ಹಿಟ್ ಬಳಿಕ ‘ಕಾಂತಾರ’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ನೀಡಿದ ಹೊಂಬಾಳೆ ಇದೀಗ ತಮ್ಮ ಬಾಹುಗಳನ್ನು ಪರಭಾಷೆಗಳ ಸಿನಿರಂಗಕ್ಕೂ ಚಾಚಿದ್ದು, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ. ಇದೆಲ್ಲದರ ಜೊತೆಗೆ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಜೊತೆಗೂ ಹೊಂಬಾಳೆ ಸಿನಿಮಾ ಮಾಡಲು ಮುಂದಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ದಕ್ಷಿಣ ಭಾರತದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಕ್ಕೆ ನೂರಾರು ಕೋಟಿ ಬಂಡವಾಳ ಹೂಡಿರುವ ಹೊಂಬಾಳೆಗೆ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡುವುದು ದೊಡ್ಡ ಕಸರತ್ತೇನೂ ಅಲ್ಲ. ಬಾಲಿವುಡ್‌ಗೆ ಭಾರಿ ಸ್ಟಾರ್ ನಟನೊಟ್ಟಿಗೆ ಪ್ರವೇಶಿಸುವ ಕಾರಣಕ್ಕೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿರಬಹುದು ಎಂಬುದು ಅಭಿಮಾನಿಗಳ ಊಹೆ. ಆದರೆ ಈ ಬಗ್ಗೆ ಸ್ವತಃ ಹೊಂಬಾಳೆಯ ಮಾಲೀಕ, ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯ್ ಕಿರಗಂದೂರು, ”ಹೊಂಬಾಳೆ ಸಿನಿಮಾ ಸಂಸ್ಥೆಯು ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಿದೆ. ಆದರೆ ಅದು ಸತ್ಯವಲ್ಲ. ನಾವು ಶಾರುಖ್ ಖಾನ್ ಅವರೊಟ್ಟಿಗಾಗಲಿ, ಅವರ ತಂಡದವರೊಟ್ಟಿಗಾಗಲಿ ಈ ಬಗ್ಗೆ ಮಾತುಕತೆ ಮಾಡಿಲ್ಲ. ಸರಿಯಾದ ಚಿತ್ರಕತೆ ಸಿಗದ ಹೊರತು ನಾವು ಹಿಂದಿ ಸಿನಿಮಾ ಮಾಡುವುದಿಲ್ಲ. ಆ ಬಗ್ಗೆ ಈ ಸಂದರ್ಭದಲ್ಲಿ ಯಾವುದೇ ಯೋಜನೆಗಳಿಲ್ಲ” ಎಂದಿದ್ದಾರೆ.

ಹೊಂಬಾಳೆ ಸಿನಿಮಾವು ಪ್ರಸ್ತುತ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ತೆಲುಗಿನಲ್ಲಿ ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಹೊಂಬಾಳೆ ಹೂಡಿದೆ. ಮಲಯಾಳಂ ನಲ್ಲಿ ಸುಕುಮಾರ್ ನಿರ್ದೇಶಿಸಿ ನಟಿಸಲಿರುವ ಸಿನಿಮಾ ಒಂದರ ಮೇಲೆ ಹೂಡಿಕೆ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ಜಗ್ಗೇಶ್ ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ರೆಡಿಯಾಗಿದೆ.

ಇದನ್ನೂ ಓದಿ : Kavyashree Gowda : ಬಿಗ್ ಬಾಸ್ ಕಾವ್ಯಶ್ರೀ ಹೊಸ ಪೋಟೋಶೂಟ್ ಗುಟ್ಟೇನು ? ಸಿನಿಮಾಕ್ಕೆ ಎಂಟ್ರಿ ಕೊಡ್ತಾರಾ ಮಂಗಳಗೌರಿ

ಇದನ್ನೂ ಓದಿ : ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಯಶ್ : ರಾಕಿಂಗ್ ಸ್ಟಾರ್ ಮೀಟ್ ಮಾಡಿದ ಅಭಿಮಾನಿಗಳು

ಇದನ್ನೂ ಓದಿ : ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಿಡುಗಡೆ ಮೊದಲು ‘ಬಿಗ್ ಬಜೆಟ್’ ಸಿನಿಮಾದ 90% ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

ಅದರ ವಿನಯ್‌ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿ ನಟಿಸಿರುವ ‘ಬಘೀರ’ ಸಿನಿಮಾಕ್ಕೂ ಹೊಂಬಾಳೆಯದ್ದೇ ಬಂಡವಾಳ. ಇದರ ಜತೊಗೆ ‘ಕಾಂತಾರ 2’ ಸಿನಿಮಾಕ್ಕೂ ಬಂಡವಾಳ ತೊಡಗಿಸಿದ್ದಾರೆ. ಫಹಾದ್ ಫಾಸಿಲ್ ನಟಿಸಿರುವ ‘ಧೂಮಂ’ಗೂ ಬಂಡವಾಳ ಹಾಕಿದ್ದಾರೆ. ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಮಾತುಕತೆ ಚಾಲ್ತಿಯಲ್ಲಿದೆ.

Vijay Kirgandur said that there is no film with Shah Rukh Khan at the moment.

Comments are closed.