Roshan’s dead body found : ಮರವಂತೆ ಬೀಚ್​ಗೆ ಕಾರು ಬಿದ್ದ ಪ್ರಕರಣ : ನಾಪತ್ತೆಯಾಗಿದ್ದ ರೋಷನ್​ ಮೃತದೇಹ ಪತ್ತೆ

ಉಡುಪಿ : Roshan’s dead body found : ಸ್ವಿಫ್ಟ್​ ಕಾರು ನಿಯಂತ್ರಣ ತಪ್ಪಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮರವಂತೆ ಬೀಚ್​​ ಬಳಿಯಲ್ಲಿ ಕಡಲಿಗೆ ಬಿದ್ದ ಪರಿಣಾಮ ಮೃತಪಟ್ಟವರಲ್ಲಿ ರೋಷನ್​ ಎಂಬವರ ಮೃತದೇಹ ಇಂದು ಪತ್ತೆಯಾಗಿದೆ. ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮರವಂತೆ ಬೀಚ್​ಗೆ ನಿಯಂತ್ರಣ ತಪ್ಪಿ ಸ್ವಿಫ್ಟ್​ ಕಾರು ಬಿದ್ದಿತ್ತು. ಭೀಕರ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಬಿಜಾಡಿ ಮೂಲದ ವಿರಾಜ್​ ಆಚಾರ್​ ಬೀಜಾಡಿ ಹಾಗೂ ರೋಷನ್​ ಸೇರಿದಂತೆ ಇನ್ನೂ ಇಬ್ಬರು ಪ್ರಯಾಣಿಸುತ್ತಿದ್ದರು. ಘಟನೆ ನಡೆದ ದಿನವೇ ವಿರಾಜ್​ ಆಚಾರ್ ಬೀಜಾಡಿ ಮೃತದೇಹ ಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ರೋಷನ್​ಗಾಗಿ ಹುಡುಕಾಟ ನಡೆಸಲಾಗಿತ್ತು.

ಶನಿವಾರ ಮಧ್ಯರಾತ್ರಿ ಕೆಂಪು ಬಣ್ಣದ ಸ್ವಿಫ್ಟ್​ ಕಾರಿನಲ್ಲಿ ನಾಲ್ವರು ಸ್ನೇಹಿತರು ಕುಂದಾಪುರದಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಮರವಂತೆ ಬೀಚ್​​ನಲ್ಲಿ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ಕಡಲಿಗೆ ಕಾರು ಹಾರಿತ್ತು. ಅಪಘಾತದ ತೀವ್ರತೆಗೆ ಕೆಂಪು ಬಣ್ಣದ ಕಾರು ಸಂಪೂರ್ಣ ಛಿದ್ರ ಛಿದ್ರಗೊಂಡಿತ್ತು. ಮೃತ ವಿರಾಜ್​ ಆಚಾರ್​ ಬೀಜಾಡಿ ಸೀಟ್​ಬೆಲ್ಟ್​ ಧರಿಸಿದ್ದರಿಂದ ಅವರ ಮೃತದೇಹ ಕಾರಿನಲ್ಲಿಯೇ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಕಾರ್ತಿಕ್​ ಹಾಗೂ ಸಂದೀಪ್​ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದು ಅಲೆಗಳ ಹೊಡೆತಕ್ಕೆ ರೋಷನ್​ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ನಾಪತ್ತೆಯಾಗಿದ್ದ ರೋಶನ್​ ಆಚಾರ್ಯ ಮೃತದೇಹ ಕಂಚುಗೋಡು ಮೃತದೇಹ ಹೊಸಾಡು ಬಳಿಕ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Leena Manimekalai : ಸಿಗರೇಟ್​ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿರ್ಮಾಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಇದನ್ನೂ ಓದಿ : Himachal Pradesh : ಭೀಕರ ಬಸ್​ ಅಪಘಾತ : ಶಾಲಾ ಮಕ್ಕಳು ಸೇರಿದಂತೆ 16 ಮಂದಿ ದುರ್ಮರಣ

ಇದನ್ನು ಓದಿ : Cruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ‌, ಮೂವರ ಸ್ಥಿತಿ ಚಿಂತಾಜನಕ

ಇದನ್ನೂ ಓದಿ :Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ

Car that fell into the sea: Roshan’s dead body found

Comments are closed.