ಮಂಗಳೂರು : ಪತ್ನಿ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್‌ ಸುರಿದು ವ್ಯಕ್ತಿ ಆತ್ಮಹತ್ಯೆ

ಉಳ್ಳಾಲ : (Mangalore Man suicide) ಪತ್ನಿಯ ಸಂಬಂಧಿಕರ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಕೊಣಾಜೆ ಸಮೀಪದ ಮುಚ್ಚಿಲಕೋಡಿ ಎಂಬಲ್ಲಿ ನಡೆದಿದೆ. ವಿಟ್ಲ ಕನ್ಯಾನ ನಿವಾಸಿ ಪುತ್ರ ಹರೀಶ್ (33 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹರೀಶ್‌ ಸಾವಿನ ಬೆನ್ನಲ್ಲೇ ಇದೀಗ ಹಲವು ಅನುಮಾನ ವ್ಯಕ್ತವಾಗಿದೆ.

ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ಇರುವ ಇನ್ಪೋಸಿಸ್‌ ಕಂಪೆನಿಯಲ್ಲಿ ಗಾರ್ಡನ್‌ ಕೆಲಸ ಮಾಡಿಕೊಂಡಿದ್ದ. ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ಹರೀಶ್‌ ಸಿದ್ದಕಟ್ಟೆಯ ಸಂಗಬೆಟ್ಟುವಿನ ಯುವತಿಯೋರ್ವರನ್ನು ಮದುವೆಯಾಗಿದ್ದರು. ಹರೀಶ್‌ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಇದೇ ತಿಂಗಳಲ್ಲಿ ಸೀಮಂತ ಶಾಸ್ತ್ರ ಮಾಡುವವರಿದ್ದರು. ಆದರೆ ಇದೀಗ ಹರೀಶ್‌ ಪತ್ನಿಯ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಯನ್ನು ದಾಖಲು ಮಾಡಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ (Mangalore Man suicide) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ : ಕಾರು – ಟ್ರಕ್‌ ನಡುವೆ ಭೀಕರ ಅಪಘಾತ : 9 ವರ್ಷದ ಮಗು ಸೇರಿದಂತೆ 6 ಮಂದಿ ಸಾವು

ಹರೀಶ್‌ ತನ್ನ ಸಂಬಂಧಿಯಾಗಿರುವ ರಮೇಶ್‌ ಶೆಟ್ಟಿಗಾರ್‌ ಅವರಿಗೆ ಕರೆ ಮಾಡಿ ತನ್ನ ಬ್ಯಾಗಿನಲ್ಲಿ ಭಸ್ಮ ಹಾಗೂ ತಗಡು ದೊರೆತಿದೆ. ನನಗೆ ಯಾರೋ ವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದ. ರಮೇಶ್‌ ಅವರು ತನ್ನ ಮನೆಗೆ ಬಾ ಮಾತುಕತೆ ನಡೆಸೋಣಾ ಎಂದು ಹರೀಶ್‌ ಗೆ ಸೂಚಿಸಿದ್ದಾರೆ. ಆದರೆ ಮಾತುಕತೆಗೆ ಬರುವಾಗಲೇ ಹರೀಶ್‌ ಬಾಟಲಿಯಲ್ಲಿ ಪೆಟ್ರೋಲ್‌ ಹಿಡಿದುಕೊಂಡು ಬಂದಿದ್ದ. ಮಾತುಕತೆ ಆರಂಭಕ್ಕೂ ಮೊದಲೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ : ಜನನಿಬಿಡ ರಸ್ತೆಯಲ್ಲಿ ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ : ವಿಡಿಯೋ ವೈರಲ್

ರಮೇಶ್ ಶೆಟ್ಟಿಗಾರ್ ಅವರ ಪತ್ನಿಯ ಚಿಕ್ಕಮ್ಮನ ಮಗಳನ್ನೇ ಹರೀಶ್‌ ಮದುವೆಯಾಗಿದ್ದ. ಮದುವೆಯ ನಂತರದಲ್ಲಿ ಪತಿ ಪತ್ನಿಯ ಸಂಬಂಧ ಅಷ್ಟಾಗಿ ಚೆನ್ನಾಗಿರಲಿಲ್ಲ ಎಂದು ತಿಳಿದು ಬಂದಿದೆ. ಪತ್ನಿ ತನ್ನ ಜೊತೆಗೆ ಸರಿಯಾಗಿ ಮಾತನಾಡುತ್ತಿಲ್ಲ ಅನ್ನೋ ನೋವನ್ನು ಹರೀಶ್‌ ತೋಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇದೀಗ ಹರೀಶ್‌ ಆತ್ಮಹತ್ಯೆಯ ಕುರಿತು ಕೊಣಾಜೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ : ಲೈಂಗಿಕ ಕಿರುಕುಳ ಸಂತ್ರಸ್ತೆಯ ವಿವರಕ್ಕಾಗಿ ರಾಹುಲ್ ಗಾಂಧಿ ಮನೆಗೆ ಧಾವಿಸಿದ ದೆಹಲಿ ಪೊಲೀಸ್‌ರು

Comments are closed.