Mudubidire murder: ಮೂಡುಬಿದಿರೆ: ಟಿಪ್ಪರ್‌ ಚಲಾಯಿಸಿ ವ್ಯಕ್ತಿಯ ಕೊಲೆ

ಮೂಡುಬಿದಿರೆ: (Mudubidire murder) ವ್ಯಕ್ತಿಯೋರ್ವ ತಿಳಿ ಮಾತನ್ನು ಹೇಳಿದ್ದಕ್ಕೆ ಟಿಪ್ಪರ್‌ ಚಲಾಯಿಸಿ ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಘಟನೆ ಮೂಡುಬಿದಿರೆಯ ಕೋಟೆಬಾಗಿಲಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಕೋಟೆ ಬಾಗಿಲಿನ ನಿವಾಸಿ ಫಯಾಝ್‌ ಎಂದು ಗುರುತಿಸಲಾಗಿದೆ. ಟಿಪ್ಪರ್‌ ಚಾಲಕನನ್ನು ಆರೀಸ್‌ ಎಂದು ಗುರುತಿಸಲಾಗಿದೆ.

ಆರೋಪಿ ಟಿಪ್ಪರ್‌ ಚಾಲಕ ಅತೀ ವೇಗದಿಂದ ಟಿಪ್ಪರ್‌ ಚಲಾಯಿಸುತ್ತಿದ್ದು, ಫಯಾಝ್‌ ಅವರು ಮಸೀದಿಯಿಂದ ಹೊರ ಬರುತ್ತಿದ್ದ ವೇಳೆ ಧೂಳು ಬರುವ ಹಾಗೆ ವಾಹನ ಚಲಾಯಿಸಬೇಡ ಎನ್ನುವುದಾಗಿ ತಿಳಿ ಮಾತನ್ನು ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಆರೀಸ್‌ ಫಯಾಝ್‌ ಅವರ ತಲೆಗೆ ಹೊಡೆದು ನಂತರ ಟಿಪ್ಪರ್‌ ಚಲಾಯಿಸಿ ಕೊಲೆಗೈದಿದ್ದಾನೆ.

ಘಟನೆಯ ಕುರಿತು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಮಂಗಳೂರು ಮೂಲದ ಮೂವರು ಸಾವು

ಸೌದಿ ಅರೇಬಿಯಾ: ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದ ರಿಯಾದಿನ ಖುರೈಸ್‌ ರಸ್ತೆಯ ಬಳಿ ನಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಂಗ್ಲಾದೇಶ ಮೂಲದ ಇನ್ನೋರ್ವ ಯುವಕ ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ : Three from Mangalore died: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಮಂಗಳೂರು ಮೂಲದ ಮೂವರು ಸಾವು

ಇದನ್ನೂ ಓದಿ : Bank fraud case: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ: ಪ್ರಕರಣ ದಾಖಲು

ಇದನ್ನೂ ಓದಿ : Mangalore car accident case: ಮಂಗಳೂರು ಕಾರು ಅಪಘಾತ ಪ್ರಕರಣ: ತುಳು ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಅರೆಸ್ಟ್‌

ಹಳೆಯಂಗಡಿಯ ಕದಿಕೆ ನಿವಾಸಿ ರಿಝ್ವಾನ್‌, ಅಕೀಲ್‌, ನಾಸಿರ್‌ ಹಾಗೂ ಶಿಹಾಬ್‌ ನಾಲ್ವರು ಮೃತಪಟ್ಟವರು. ನಾಲ್ವರು ಕಾರಿನಲ್ಲಿ ತೆರಳುತ್ತಿದ್ದಾಗ ಖುರೈಸ್‌ ರಸ್ತೆಯ ಬಳಿ ಒಂಟೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರು ಎಸ್‌ಎಕ್ಯೂಸಿಒ ಕಂಪನಿಯಲ್ಲಿ ನೌಕರರಾಗಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅಕೀಲ್‌ ಮಂಗಳೂರಿನ ಬೋಳಾರ್‌ ನಿವಾಸಿಯಾಗಿದ್ದು, ರಿಝ್ವಾನ್‌ ಹಳೆಯಂಗಡಿಯ ಕದಿಕೆ ನಿವಾಸಿ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಅಲ್‌ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಇನ್ನೂ ಕದಿಕೆ ನಿವಾಸಿ ರಿಝ್ವಾನ್‌ ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಯೋಗದ ನಿಮಿತ್ತ ಸೌದಿ ಅರೆಬಿಯಾಕ್ಕೆ ತೆರಳಿದ್ದರು.

Mudubidire murder: Murder of a man by driving a tipper

Comments are closed.