Thunder strome : ಮೂಡಬಿದಿರೆಯಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವು : ಮೂವರು ಗಂಭೀರ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ಬಿಡುವು ಪಡೆದಿದ್ದ ಮಳೆರಾಯ ಇಂದು ಆರ್ಭಟಿಸಿದ್ದಾನೆ. ಅದ್ರಲ್ಲೂ ಸಿಡಿಲಿಗೆ ಇಬ್ಬರು ಯುವಕರ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ತಾಲೂಕಿನ ಕಂಚಿಬೈಲು ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿಡಿಲು ಬಡಿದು ಮೃತಪಟ್ಟವರನ್ನು ಯಶವಂತ್‌ ( 25 ವರ್ಷ ) ಮತ್ತು ಮಣಿಪ್ರಸಾದ್‌ (25 ವರ್ಷ ) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಗಣೇಶ್‌, ಸಂದೀಪ್‌ ಮತ್ತು ಪ್ರವೀಣ್ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: Boat Tragedy : ಮೀನುಗಾರಿಕಾ ಬೋಟ್‌ ಬಂಡೆಗೆ ಢಿಕ್ಕಿ : 6 ಮಂದಿ ಮೀನುಗಾರರ ರಕ್ಷಣೆ

ಸಿಡಿಲ ಆರ್ಭಟಕ್ಕೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಗಾಯಳಾಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದಲೂ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿರುವುದು ಕರಾವಳಿಗರಿಗೆ ಆತಂಕ ಮೂಡಿಸಿದೆ. ಸಿಡಲಿ

ಇದನ್ನೂ ಓದಿ: PUB ATTACK : ಮಂಗಳೂರಲ್ಲಿ ಪಬ್‌ ಮೇಲೆ ಪೊಲೀಸರ ದಾಳಿ

(Two youths killed by lightning in Moodabidire: Three critical)

Comments are closed.