ಭಾನುವಾರ, ಏಪ್ರಿಲ್ 27, 2025
HomeBreakingಉಡುಪಿ : ಎಚ್ಚರ…ಎಚ್ಚರ..ಎಚ್ಚರ : ಮೂರ್ಚೆ ತಪ್ಪಿಸಿ ಕಳವು ಮಾಡುವ ಗ್ಯಾಂಗ್ ಬಂದಿದೆ ಎಚ್ಚರ…!!!!

ಉಡುಪಿ : ಎಚ್ಚರ…ಎಚ್ಚರ..ಎಚ್ಚರ : ಮೂರ್ಚೆ ತಪ್ಪಿಸಿ ಕಳವು ಮಾಡುವ ಗ್ಯಾಂಗ್ ಬಂದಿದೆ ಎಚ್ಚರ…!!!!

- Advertisement -

ಉಡುಪಿ : ಕರಾವಳಿಗರೇ ಎಚ್ಚರ. ಉಡುಪಿ ಜಿಲ್ಲೆಯಲ್ಲೀಗ ಮೂರ್ಚೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ. ಹೀಗಂತೆ ಖುದ್ದು ಮಣಿಪಾಲ ಠಾಣೆಯ ಪೊಲೀಸರೇ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸುತ್ತಿರುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ.

ಮಣಿಪಾಲ ಪೊಲೀಸರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಐದರಿಂದ ಆರು ಮಂದಿ ಮಹಿಳೆಯರು ಕೂಡಿಕೊಂಡು ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಗುಂಪೊಂದು ನಗರಕ್ಕೆ ಬಂದಿದೆ.
ಇಂಥವರು ಯಾರಾದರೂ ಅಪರಿಚಿತರು ಸಂಶಯಾಸ್ಪದವಾಗಿ ತಮ್ಮ ಮನೆ ಮುಂದೆ ಓಡಾಡಿಕೊಂಡಿದ್ದರೆ ಅಂಥವರು ಕಂಡುಬಂದರೆ ಅವರಿಂದ ದೂರವಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

https://kannada.newsnext.live/udupi-not-wearing-mask-criminal-case-dc-g-jagdishwarns/

ನಿಮ್ಮ ಕಣ್ಣಿಗೆ ಇಂತಹ ಗುಂಪು ಕಾಣಿಸಿಕೊಂಡ್ರೆ ಕೂಡಲೇ ಮಣಿಪಾಲ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್: 9480805448. ಸಬ್ ಇನ್ಸ್ ಪೆಕ್ಟರ್: 9480805475 ಅಥವಾ 112 ಸಂಪರ್ಕ ಮಾಡಬಹುದಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular