ಎಚ್ಚರ… ಎಚ್ಚರ.. ಎಚ್ಚರ : 7ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು…!!!

ಎನ್.ಆರ್.ಪುರ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವ ಜನಾಂಗ ಬಲಿಯಾಗುತ್ತಿದೆ. ಮೊನ್ನೆಯಷ್ಟೇ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ರೆ ಇದೀಗ, 7ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

ಸೋಹನ್ ರಾಮ್ ( 12 ವರ್ಷ) ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಕ. ಎನ್.ಆರ್.ಪುರದ ಡಿಸಿಎಂಸಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ. ಸೋಹನ್ ರಾಮ್ ಶಿಕ್ಷಣ ಸಂಸ್ಥೆಗಳಲ್ಲಿ ತಂದೆ ಪ್ರಸನ್ನ ಅವರು ಕಾರ್ಯನಿರ್ವಹಿಸುತ್ತಿದ್ರೆ, ತಾಯಿ ರೂಪಾ ಉಪನ್ಯಾಸಕಿಯಾಗಿದ್ದಾರೆ.

ಎನ್.ಆರ್.ಪುರದ ಮೆಸ್ಕಾಂ ಕಚೇರಿಯ ಬಳಿಯಲ್ಲಿ ಬಾಲಕ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಇದ್ದಕ್ಕಿಂದ್ದಂತೆಯೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ದುರದೃಷ್ಟವಶಾತ್ ಬಾಲಕ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.

https://kannada.newsnext.live/heart-attack-16-years-college-student-sucide/

ಸೋಹನ್ ರಾಮ್ ಪೋಷಕರಿಗೆ ಒಟ್ಟು ಇಬ್ಬರು ಮಕ್ಕಲು. 12 ವರ್ಷದ ಸೋಹನ್ ರಾಮ್ ಹೃದಯಾಘಾತದಿಂದ ಸಾವನ್ನಪ್ಪಿರೋ ಸುದ್ದಿ ಇದೀಗ ಆಘಾತವನ್ನು ಮೂಡಿಸಿದೆ. ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕ ವಯಸ್ಸಿನ ಮಕ್ಕಳಿಗೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.

https://kannada.newsnext.live/bus-container-accident-save-30-passengers-nelyadi-near-mangalore/

Comments are closed.