ಮಂಗಳವಾರ, ಏಪ್ರಿಲ್ 29, 2025
HomeCrime1 ರೂಪಾಯಿ ವಿಚಾರಕ್ಕೆ ಸಾಸ್ತಾನ ಟೋಲ್ ನಲ್ಲಿ ಹೊಡೆದಾಟ !

1 ರೂಪಾಯಿ ವಿಚಾರಕ್ಕೆ ಸಾಸ್ತಾನ ಟೋಲ್ ನಲ್ಲಿ ಹೊಡೆದಾಟ !

- Advertisement -

ಬ್ರಹ್ಮಾವರ : 1 ರೂಪಾಯಿ ವಿಚಾರಕ್ಕೆ ಟೋಲ್ ನಲ್ಲಿ ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದಿದೆ. ಟೋಲ್ ಸಿಬ್ಬಂದಿ ಪ್ರಯಾಣಿಕರಿಗೆ 1 ರೂಪಾಯಿ ಹಣವನ್ನು ಕಡಿಮೆ ನೀಡಿದ್ದರು. ಇದನ್ನ ಯುವಕರು ಪ್ರಶ್ನಿಸುತ್ತಿದ್ದಂತೆಯೇ ಗಲಾಟೆಗೆ ಶುರುವಾಗಿದೆ. ಟೋಲ್ ಸಿಬ್ಬಂದಿ ಹಾಗೂ ಯುವಕರು ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕರ ತಂಡವೊಂದು ಸಾಸ್ತಾನ ಟೋಲ್ ಮೂಲಕ ಬ್ರಹ್ಮಾವರದ ಕಡೆಗೆ ಪ್ರಯಾಣಿಸಿತ್ತು. ಈ ವೇಳೆ ಟೋಲ್ ಸುಂಕವಾಗಿ ಪ್ರಯಾಣಿಕರು 50 ರೂಪಾಯಿ ನೀಡಿದ್ದಾರೆ. ಆದರೆ ಚಿಲ್ಲರೆ ಇಲ್ಲವೆಂದು ಟೋಲ್ ಸಿಬ್ಬಂದಿ 5 ರೂಪಾಯಿಯ ಬದಲು 4 ರೂಪಾಯಿ ಹಣವನ್ನು ವಾಪಾಸ್ ನೀಡಿದ್ದಾರೆ. ಯುವಕರ ತಂಡ ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದಿದೆ. ಈ ವೇಳೆಯಲ್ಲಿ 44 ರೂಪಾಯಿಯನ್ನು ಟೋಲ್ ಸಿಬ್ಬಂದಿಗೆ ನೀಡಿದ್ದಾರೆ. ಆದರೆ 44 ರೂಪಾಯಿ ಸ್ವೀಕರಿಸಲು ಸಿಬ್ಬಂದಿ ರೆಡಿಯಿರಲಿಲ್ಲ. ಕೊನೆಗೆ ಯುವಕರು 10 ರೂಪಾಯ ನೀಡಿದ್ದಾರೆ. ಆಗ ಸಿಬ್ಬಂದಿ ಕೇವಲ 5 ರೂಪಾಯಿಯನ್ನು ಮಾತ್ರವೇ ನೀಡಿ, ಚಿಲ್ಲರೆ ಇಲ್ಲಾ ಎಂದಿದ್ದಾರೆ. ಇದು ಯುವಕರನ್ನು ಕೆರಳಿಸಿತ್ತು.

ಈ ವೇಳೆಯಲ್ಲಿ ಯುವಕರು ಹಾಗೂ ಟೋಲ್ ಸಿಬ್ಬಂದಿಯ ನಡುಗೆ ಮಾತಿನ ಚಕಮಕಿ ನಡೆದಿದೆ. ಎರಡೂ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಸ್ಥಳೀಯರು ಇಬ್ಬರ ಜಗಳವನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular