murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಬೆಳಗಾವಿ : murdering Chandrasekhar Guruji : ಸರಳ ವಾಸ್ತು ತಜ್ಞ ಚಂದ್ರಶೇಖರ್​ ಗುರೂಜಿ ಹತ್ಯೆ ಮಾಡಿದ್ದ ಮಂಜುನಾಥ್​ ದುಮ್ಮವಾಡ ಹಾಗೂ ಮಹಂತೇಶ್​ ಶಿರೋಳ್​ರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸ್​ ಇಲಾಖೆ ಯಶಸ್ವಿಯಾಗಿದೆ . ಹುಬ್ಬಳ್ಳಿ ಹಾಗೂ ರಾಮದುರ್ಗ ಠಾಣೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮಾರ್ಗ ಮಧ್ಯದಲ್ಲಿ ಹಂತಕರು ತೆರಳುತ್ತಿದ್ದ ಕಾರನ್ನು ಚೇಸ್​ ಮಾಡಿದ ಪೊಲೀಸರು ಆರೋಪಿಗಳ ಕಾರನ್ನು ಅಡ್ಡಗಟ್ಟಿ ಕೈಯಲ್ಲಿ ಪಿಸ್ತೂಲ್​ ಹಿಡಿದು ಬೆದರಿಸಿ ಪೊಲೀಸ್​ ಜೀಪ್​ಗೆ ತುಂಬಿಸಿದ್ದಾರೆ.


ಚಂದ್ರಶೇಖರ್​ ಗುರೂಜಿಯನ್ನು ಕೊಲೆ ಮಾಡಿದ ಬಳಿಕ ಹೋಟೆಲ್​ನಿಂದ ಎಸ್ಕೇಪ್​ ಆಗಿದ್ದ ಮಂಜುನಾಥ್​ ದುಮ್ಮವಾಡ ಹಾಗೂ ಮಹಂತೇಶ್​ ಶಿರೋಳ್​​ ತಮ್ಮ ಬಟ್ಟೆಯನ್ನು ಬದಲಾಯಿಸಿ ಕಾರಿನಲ್ಲಿ ಎಸ್ಕೇಪ್​ ಆಗಲು ಪ್ಲಾನ್​ ಮಾಡಿದ್ದರು. ಆದರೆ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಇವರು ಮಾಡಿದ ಕೃತ್ಯ ಸ್ಪಷ್ಟವಾಗಿ ಸೆರೆಯಾಗಿತ್ತಲ್ಲದೇ ಮಾಧ್ಯಮಗಳಲ್ಲಿ ನಿರಂತರ ವರದಿ ಪ್ರಸಾರವಾಗಿದ್ದನ್ನು ಗಮನಿಸಿದ ಈ ಇಬ್ಬರು ನಾವಿನ್ನು ತಪ್ಪಿಸಿಕೊಳ್ಳಲು ಬಹಳ ಪ್ರಯತ್ನಿಸಿದರೆ ಎನ್​ಕೌಂಟರ್​ ಆಗುವ ಸಾಧ್ಯತೆಯಿದೆ ಎಂದು ಭಾವಿಸಿ ತಾವೇ ಖುದ್ದು ಹುಬ್ಬಳ್ಳಿ ಪೊಲೀಸರಿಗೆ ಕರೆ ಮಾಡಿ ಬೆಳಗಾವಿ ಕಡೆಗೆ ತೆರಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.


ಆರೋಪಿಗಳ ಕಾರನ್ನು ಚೇಸ್​ ಮಾಡಿದ ಹುಬ್ಬಳ್ಳಿ ಹಾಗೂ ರಾಮದುರ್ಗ ಠಾಣಾ ಪೊಲೀಸರು ಆರೋಪಿಗಳನ್ನು ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು,ಅದರಂತೆಯೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಗೆ ಪಿಸ್ತೂಲ್​ ಹಿಡಿದು ಬೆದರಿಸಿದ ಪೊಲೀಸರು ಆರೋಪಿಗಳನ್ನು ಪೊಲೀಸ್​ ವ್ಯಾನ್​ನಲ್ಲಿ ತುಂಬಿಸಿದ್ದಾರೆ. ಶೀಘ್ರವೇ ಇವರನ್ನು ಠಾಣೆಗೆ ಕರೆತಂದು ಪೊಲೀಸರು ಡ್ರಿಲ್​ ಮಾಡಲಿದ್ದಾರೆ. ಆರೋಪಿಗಳ ವಿಚಾರಣೆಯ ಬಳಿಕ ಚಂದ್ರಶೇಖರ್​ ಗುರೂಜಿ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ಇದನ್ನು ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

Arrest of accused of murdering Chandrasekhar Guruji

Comments are closed.