Ballari Road Accident : ಬಸ್‌ ಹರಿದು ಮೂವರು ಹಾಸ್ಟೇಲ್‌ ವಿದ್ಯಾರ್ಥಿಗಳ ಸಾವು

ಬಳ್ಳಾರಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಹರಿದು ಮೂವರು ಹಾಸ್ಟೆಲ್‌ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆ (Ballari Road Accident) ಸಂಭವಿಸಿದೆ. ಡಿಸೆಂಬರ್‌ 18ರ ತಡರಾತ್ರಿ ಮೂವರೂ ಯುವಕರು ರಸ್ತೆ ದಾಟುವಾಗ ಅವರ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.

ಈ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಮುರುಡಿ ನಿವಾಸಿ ಶಂಕರ್ 18ವರ್ಷ, ಎಮ್ಮಿಗನೂರಿನ ಕನಕರಾಜ್‌ 19ವರ್ಷ ಹಾಗೂ ನಾಗೇನಹಳ್ಳಿಯ ಹೊನ್ನೂರ 22ವರ್ಷ ಎಂದು ಗುರುತಿಸಲಾಗಿದೆ. ಈ ಮೂವರು ಯುವಕರು ಬಳ್ಳಾರಿ ನಗರದ ಹಾಸ್ಟೇಲ್‌ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಬಸ್‌ ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದು, ಅದೇ ಸಂದರ್ಭದಲ್ಲಿ ಮೂವರು ಯುವಕರು ರಸ್ತೆ ದಾಟುತ್ತಿದ್ದು, ಅವರ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Haryana Accident : ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ, ಹಲವು ವಾಹನಗಳು ಜಖಂ : 4 ಮಂದಿಗೆ ತೀವ್ರ ಗಾಯ

ಇದನ್ನೂ ಓದಿ : Madhyapradesh fire accident: ಗುಡಿಸಲಿಗೆ ಬೆಂಕಿ: ವೃದ್ದ ದಂಪತಿ ಸಜೀವ ದಹನ

ಇದನ್ನೂ ಓದಿ : Nelamangala car accident: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ : ಪಾದಚಾರಿ ಸಾವು

ಮಧ್ಯರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ತಡರಾತ್ರಿ ಅಲ್ಲಿ ಬಂದಿರುವ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಅಷ್ಟೇ ಅಲ್ಲದೇ ಕಳೆದ ಎರಡು ದಿನಗಳಿಂದ ಮೂವರು ಯುವಕರು ವಸತಿ ಗೃಹ ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ತಾವು ತಂಗಿದ್ದ ಹಾಸ್ಟೇಲ್‌ನ್ನು ತೊರೆದು ಈ ಮೂವರೂ ವಿದ್ಯಾರ್ಥಿಗಳು ಎಲ್ಲಿಗೆ ಹೋರಟಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಕುರಿತು ಪೊಲೀಸ್‌ ಅಧಿಕಾರಿಗಳ ಹೆಚ್ಚಿನ ತನಿಖೆಯ ಮೂಲಕ ತಿಳಿಯಬೇಕಾಗಿದೆ.

ಇದನ್ನೂ ಓದಿ : Maharashtra Gangrape:16 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್:‌ 8 ಮಂದಿ ಬಂಧನ

ಇದನ್ನೂ ಓದಿ : Chicken crowing : ಕೋಳಿ ಕೂಗುತ್ತಿದೆ, ನಿದ್ದೆ ಬರುತ್ತಿಲ್ಲ : ಬೆಂಗಳೂರಲ್ಲಿ ಕೋಳಿ ವಿರುದ್ದ ಟ್ವೀಟ್ ಮೂಲಕ ಪೊಲೀಸರಿಗೆ ದೂರು

Ballari Road Accident: Three hostel students died after the bus overturned

Comments are closed.