Kerala Police:ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತುಂಡಾಗಿ ಸಿಕ್ಕಿದ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು : ಗ್ಯಾಂಗ್ವಾರ್ನಿಂದ ನಡೆದಿತ್ತು ಕೊಲೆ
ಕೇರಳ : Kerala Police : ಆಗಸ್ಟ್ ತಿಂಗಳಲ್ಲಿ ತಿರುವನಂತಪುರಂ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪತ್ತೆಯಾದ ಎರಡು ತುಂಡಾದ ಕಾಲುಗಳಿಗೆ ಸಂಬಂಧಿಸಿದ ಪ್ರಕರಣವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಇಂದು ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ಕತ್ತರಿಸಿ ಎಸೆಯಲಾದ ಕೈ ಕಾಲುಗಳು ತಮಿಳುನಾಡಿನ ಕನ್ಯಾಕುಮಾರಿ ಮೂಲದ ಕನಿಷ್ಕನ್ ಎಂಬವನದ್ದು ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ಎರಡು ಗ್ಯಾಂಗ್ ನಡುವೆ ಇದ್ದ ದ್ವೇಷದಿಂದಾಗಿ ಈ ಕೊಲೆ ನಡೆದಿತ್ತು. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕತ್ತರಿಸಿ ಎಸೆಯಲಾಗಿದ್ದ ಎರಡು ಕಾಲುಗಳು ಹಾಗೂ ಹೊಟ್ಟೆ ಭಾಗವನ್ನು ಪತ್ತೆ ಮಾಡಲಾಗಿತ್ತು ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಜಿ. ಸ್ಪರ್ಜನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ವಲಿಯುತ್ತೂರ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದರೋಡೆಕೋರ ರಮೇಶ್ ಹಾಗೂ ಮೃತದೇಹವನ್ನು ವಿಲೇವಾರಿ ಮಾಡಲು ಸಹಕರಿಸಿದ ಶೆಹನ್ ಶಾ ಎಂದು ಗುರುತಿಸಲಾಗಿದೆ. ಡಿಎನ್ಎ ಪರೀಕ್ಷೆಯ ಫಲಿತಾಂಶದ ಬಳಿಕ ಮೃತ ವ್ಯಕ್ತಿಯ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಮನು ಗ್ಯಾಂಗ್ನ ಭಾಗವಾಗಿದ್ದರು. ಇಬ್ಬರ ನಡುವೆ ಅನೇಕ ಕಾರಣಗಳಿಂದಾಗಿ ವೈಷಮ್ಯ ಮೂಡಿತ್ತು. ಇದನ್ನು ಬಗೆಹರಿಸಿಕೊಳ್ಳಲು ಕೊಲೆಯಾದ ವ್ಯಕ್ತಿಯನ್ನು ಮನು ನಿವಾಸಕ್ಕೆ ಕರೆಸಲಾಗಿತ್ತು. ಆದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾದಕ ವಸ್ತುವಿನ ಅಮಲಿನಲ್ಲಿದ್ದ ಮನು ಚಾಕುವಿನಿಂದ ಕಾನಿಷ್ಕನ್ಗೆ ಇರಿದಿದ್ದಾರೆ. ಬಳಿಕ ಶೆಹನ್ ಶಾ ಸಹಾಯದಿಂದ ಮೃತದೇಹವನ್ನು ತುಂಡು ತುಂಡು ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಎಸೆಯಲಾಗಿತ್ತು.
ಆರಂಭದಲ್ಲಿ ಪೊಲೀಸರು ಕತ್ತರಿಸಿದ ಕಾಲುಗಳು ವೈದ್ಯಕೀಯ ತ್ಯಾಜ್ಯವಿರಬಹುದು ಎಂದು ಶಂಕಿಸಿದ್ದರು. ಆದರೆ ಹೆಚ್ಚಿನ ತನಿಖೆಯ ಸಂದರ್ಭದಲ್ಲಿ ಇದು ಕೊಲೆ ಎಂಬುದು ಪೊಲೀಸರಿಗೆ ಮನವರಿಕೆಯಾಗಿದೆ. ಉಪ ಆಯುಕ್ತ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಡಿ.ಕೆ ಪೃಥ್ವಿರಾಜ್ ನೇತೃತ್ವದ ವಿಶೇಷ ತಂಡವು ಪ್ರಕರಣದ ತನಿಖೆಯನ್ನು ನಡೆಸಿ ಶಂಕಿತ ಆರೋಪಿಗಳನ್ನು ಬಂಧಿಸಿದೆ.
ಇದನ್ನು ಓದಿ : 100 rs.controversy: ಸರ್ಕಾರಿ ಶಾಲೆಗಳಲ್ಲಿ ದೇಣಿಗೆ ವಸೂಲಿ; ತನ್ನ ಪಾತ್ರವಿಲ್ಲ ಎಂದ ಶಿಕ್ಷಣ ಸಚಿವ
ಇದನ್ನೂ ಓದಿ : MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ
Body chopped into pieces, dumped: Kerala Police cracks ‘severed legs’ case, arrests 2
Comments are closed.