Chandrasekhar Guruji : ಸಹಾಯ ಮಾಡಿದ್ದೇ ಗುರೂಜಿಗೆ ಕಂಟಕವಾಯ್ತಾ..?ಫ್ಲ್ಯಾಟ್​ ವಾಪಸ್​ ಕೊಡಿ ಎಂದಿದ್ದಕ್ಕೆ ಈ ಕೊಲೆ..?

ಹುಬ್ಬಳ್ಳಿ : Chandrasekhar Guruji : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ ಹಾಡ ಹಗಲೇ ಬರ್ಬರವಾಗಿ ಕೊಲೆಯಾಗಿದ್ದಾರೆ. ಚಂದ್ರಶೇಖರ್​ ಗುರೂಜಿಗಳ ಜೊತೆಯಲ್ಲೇ ಗುರುತಿಸಿಕೊಂಡಿದ್ದ ಆಪ್ತರೇ ಇವರ ಸಾವಿಗೆ ಮುಹೂರ್ತವನ್ನಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಂದ್ರಶೇಖರ್​ ಗುರೂಜಿ ಇದೇ ಹೋಟೆಲ್​ನಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಬಂದಿದ್ದ ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದ್ದಾರೆ. ಹೋಟೆಲ್​ನ ರೂಮ್​ ನಂಬರ್​ 220ಯಲ್ಲಿ ತಂಗಿದ್ದ ಚಂದ್ರಶೇಖರ್​ ಗುರೂಜಿ ಯಾವುದೋ ಫೋನ್​ ಕರೆ ಬಂದ ಬಳಿಕ ಕೆಳಗೆ ಇಳಿದು ಬಂದಿದ್ದರು. ಇದೇ ವೇಳೆ ರಿಸೆಪ್ಶನ್​ ಕಾದು ಕುಳತಿದ್ದ ದುಷ್ಕರ್ಮಿಗಳು ಗುರುಜಿಗಳ ಕಾಲಿಗೆ ಎರಗಿದಂತೆ ಮಾಡಿ ಬಳಿಕ 70 ಬಾರಿ ಬರ್ಬರವಾಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.


ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿದ ಪೊಲೀಸರು ಈ ಕೊಲೆಯನ್ನು ಮಾಡಿದ್ದು ಚಂದ್ರ ಶೇಖರ್​ ಗುರೂಜಿ ಆಪ್ತ ಮಹಂತೇಶ್​ ಶಿರೋಳ್​ ಹಾಗೂ ಮಂಜುನಾಥ್​ ದುಮ್ಮವಾಡ ಎಂದು ಗುರುತಿಸಿದ್ದಾರೆ. ಪ್ರಸ್ತುತ ಇಬ್ಬರೂ ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ಮಹಂತೇಶ್​ ಶಿರೋಳ್​ ಪತ್ನಿ ವನಜಾಕ್ಷಿಯನ್ನು ಗೋಕುಲ್​ ರೋಡ್​ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.


ಪ್ರಾಥಮಿಕ ತನಿಖೆಯ ಪ್ರಕಾರ ಈ ಕೊಲೆ ನಡೆಯಲು ಮೂಲ ಕಾರಣವೇ ವನಜಾಕ್ಷಿ ಎಂದು ಹೇಳಲಾಗ್ತಿದೆ. ಸರಳ ವಾಸ್ತು ಸಂಸ್ಥೆಯಲ್ಲಿ 2019ರವರೆಗೆ ಕೆಲಸ ಮಾಡಿದ್ದ ವನಜಾಕ್ಷಿ ಆರೋಪಿ ಮಹಂತೇಶ್​ ಶಿರೋಳ್​ರ ಪತ್ನಿ. ವಿಪರ್ಯಾಸ ಅಂದರೆ ಮಹಂತೇಶ್​ ಶಿರೋಳ್​ ಹಾಗೂ ವನಜಾಕ್ಷಿಗೆ ಕೊಲೆಯಾದ ಚಂದ್ರಶೇಖರ್ ಗುರೂಜಿಯೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಅಲ್ಲದೇ ಇವರಿಗೆ ಗೋಕುಲ್​ ರೋಡ್​ನಲ್ಲಿ ಫ್ಲ್ಯಾಟ್​ ಒಂದನ್ನು ವಾಸಿಸಲು ಸಹ ನೀಡಿದ್ದರು. ಮಾತ್ರವಲ್ಲದೇ ವನಜಾಕ್ಷಿ ಹೆಸರಲ್ಲಿ ಇನ್ನೂ ಹತ್ತು ಹಲವು ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ.


ವನಜಾಕ್ಷಿ ಸರಳ ಸಂಸ್ಥೆಯಲ್ಲಿ ಉದ್ಯೋಗವನ್ನು ನಿಲ್ಲಿಸಿದ ಬಳಿಕ ಗುರೂಜಿ ಫ್ಲ್ಯಾಟ್​ ಹಾಗೂ ಆಸ್ತಿಯನ್ನು ವಾಪಸ್​ ಮಾಡುವಂತೆ ಕೇಳುತ್ತಿದ್ದರು ಎನ್ನಲಾಗಿದೆ.ಇದೇ ವಿಚಾರವಾಗಿ ಚಂದ್ರಶೇಖರ್​ ಗುರೂಜಿ ಹಾಗೂ ಮಹಂತೇಶ್​ ಶಿರೋಳ್​ ವನಜಾಕ್ಷಿ ದಂಪತಿ ನಡುವೆ ವೈಮನಸ್ಯ ಮೂಡಿತ್ತು ಎನ್ನಲಾಗಿದೆ. ಇದೇ ವಿವಾದವು ದ್ವೇಷಕ್ಕೆ ತಿರುಗಿ ಇಂದು ಚಂದ್ರಶೇಖರ್​ ಗುರೂಜಿ ಕೊಲೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇವರಿಬ್ಬರಿಗೂ ಸಹಾಯ ಮಾಡಲು ಹೋಗಿ ಚಂದ್ರಶೇಖರ್​ ಗುರೂಜಿ ತಮ್ಮ ಸಾವಿಗೆ ತಾವೇ ಮುನ್ನಡಿ ಬರೆದುಕೊಂಡ್ರಾ ಎಂಬ ಮಾತು ಕೇಳಿ ಬರ್ತಿದೆ.

ಇದನ್ನು ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

ಇದನ್ನೂ ಓದಿ : murder of Chandrasekhar Guruji : ಚಂದ್ರಶೇಖರ್​ ಗುರೂಜಿ ಸಾವಿಗೆ ಆ ಮಹಿಳೆಯೇ ಕಾರಣ..? ಅನುಮಾನಕ್ಕೆಡೆ ಮಾಡಿದ ಬೇನಾಮಿ ಆಸ್ತಿ

Chandrasekhar Guruji performed marriage for Vanajakshi and Mahantesh

Comments are closed.