murder of Chandrasekhar Guruji : ಚಂದ್ರಶೇಖರ್​ ಗುರೂಜಿ ಸಾವಿಗೆ ಆ ಮಹಿಳೆಯೇ ಕಾರಣ..? ಅನುಮಾನಕ್ಕೆಡೆ ಮಾಡಿದ ಬೇನಾಮಿ ಆಸ್ತಿ

ಹುಬ್ಬಳ್ಳಿ : murder of Chandrasekhar Guruji Vanajakshi’s role: ಸರಳ ವಾಸ್ತು ತಜ್ಞ ಚಂದ್ರಶೇಖರ್​ ಗುರೂಜಿ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ತಿದೆ. ಹುಬ್ಬಳ್ಳಿ ಖಾಸಗಿ ಹೋಟೆಲ್​ನಲ್ಲಿ ಜುಲೈ 2ನೇ ತಾರೀಖಿನಿಂದ ತಂಗಿದ್ದ ಚಂದ್ರ ಶೇಖರ್​ ಗುರೂಜಿಯನ್ನು ಇಂದು ಭೇಟಿ ಮಾಡುವ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರಿಗೆ ಬರೋಬ್ಬರಿ 32 ಬಾರಿ ಚಾಕುವನ್ನು ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ. ಕೊಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಹೋಟೆಲ್​ನಿಂದ ಪರಾರಿಯಾಗಿದ್ದು ಈ ಎಲ್ಲಾ ದೃಶ್ಯಗಳು ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿದ ಪೊಲೀಸರು ಈ ಕೊಲೆಯನ್ನು ನಡೆಸಿರುವುದು ಚಂದ್ರಶೇಖರ್​ ಗುರೂಜಿ ಆಪ್ತರೇ ಎಂದು ಅಂದಾಜಿಸಿದ್ದಾರೆ. ಚಂದ್ರಶೇಖರ್​ ಗುರೂಜಿ ಆಪ್ತನಾದ ಮಹಂತೇಶ್​ ಶಿರೋಳ್​ ಆತನ ಪತ್ನಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿ ಹಾಗೂ ಮಂಜುನಾಥ್​ ದುಮ್ಮವಾಡ ಈ ಕೊಲೆಯ ಹಿಂದಿನ ರೂವಾರಿಗಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳಾದ ಮಂಜುನಾಥ್​ ದುಮ್ಮವಾಡ ಹಾಗೂ ಮಹಂತೇಶ್​ ಶಿರೋಳ್​ ಇಬ್ಬರೂ ಧಾರವಾಡ ಜಿಲ್ಲೆಯವರೇ ಆಗಿದ್ದು ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. ಮಹಂತೇಶ್​ ಪತ್ನಿ ವನಜಾಕ್ಷಿಯನ್ನು ಗೋಕುಲ್​ ರೋಡ್​ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವನಜಾಕ್ಷಿ ಚಂದ್ರ ಶೇಖರ್​ ಗುರೂಜಿ ಮಾಲೀಕತ್ವದ ಸರಳ ವಾಸ್ತು ಸಂಸ್ಥೆಯಲ್ಲಿ 2019ರವರೆಗೂ ಉದ್ಯೋಗಿಯಾಗಿದ್ದರು. ಮೂಲಗಳ ಪ್ರಕಾರ ಚಂದ್ರಶೇಖರ್​ ಗುರೂಜಿ ವನಜಾಕ್ಷಿ ಹೆಸರಲ್ಲಿ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ. ಫ್ಲ್ಯಾಟ್​ ಸೇರಿದಂತೆ ಸಾಕಷ್ಟು ಆಸ್ತಿಯು ವನಜಾಕ್ಷಿ ಹೆಸರಿನಲ್ಲಿದೆ. ಪೊಲೀಸ್​ ತನಿಖೆಯ ವೇಳೆಯಲ್ಲಿ ವನಜಾಕ್ಷಿ ಈ ಎಲ್ಲಾ ಆಸ್ತಿ ನಾವು ಸ್ವಂತ ಬಲದಿಂದ ಖರೀದಿ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ. ಸದ್ಯ ಚಂದ್ರಶೇಖರ್​ ಗುರೂಜಿಯ ಮೃತದೇಹವನ್ನು ಕಿಮ್ಸ್​ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಐವರು ಪೊಲೀಸ್​ ತಂಡವನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಹುಬ್ಬಳ್ಳಿ ಪೊಲೀಸ್​ ಕಮಿಷನರ್​ ಲಾಬೂರಾಮ್​ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

ಇದನ್ನೂ ಓದಿ :Chandrashekar guruji murder : ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ

Vanajakshi’s role in the murder of Chandrasekhar Guruji

Comments are closed.