Crime report: ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಮಾಡಿ ಬೋರ್‌ ವೆಲ್‌ ಗೆ ಎಸೆದ ಮಗ

ಬಾಗಲಕೋಟೆ: (Crime report) ದೆಹಲಿಯಲ್ಲಿ ನಡೆದ ಶ್ರದ್ದಾವಾಕರ್‌ ಹತ್ಯೆ ಇಡೀ ದೇಶವನ್ನೆ ಬೆಚ್ಚಬೀಳಿಸುವಂತೆ ಮಾಡಿತ್ತು. ಈಗಾಗಲೇ ಅದೇ ರೀತಿಯಲ್ಲಿ ಹಲವು ಘಟನೆಗಳು ನಡೆಯುತ್ತಿದ್ದು, ಇದೀಗ ಕರ್ನಾಟಕದ ಬಾಗಲಕೋಟೆಯಲ್ಲಿ ಅಂತಹದೇ ಒಂದು ಘಟನೆ ನಡೆದಿದ್ದು, ಕ್ರೂರ ಮಗನೊಬ್ಬ ತಂದೆಯನ್ನು ಕೊಂದು ಮೂವತ್ತು ತುಂಡುಗಳನ್ನಾಗಿ ಮಾಡಿ ಬೋರೆ ವೆಲ್‌ಗೆ ಎಸೆದಿರುವ ಘಟನೆ ನಡೆದಿದೆ.

ಬಾಗಲಕೋಟೆಯ ಮುಧೋಳ ನಗರದಲ್ಲಿ ಮಗನೇ ತಂದೆಯನ್ನು ಕೊಂದು (Crime report) ಅವರನ್ನು ಮೂವತ್ತು ತುಂಡುಗಳಾಗಿ ಕತ್ತರಿಸಿ ಬೋರೆ ವೆಲ್‌ ಗೆ ಎಸೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪರಶುರಾಮ ಕುಳಲಿ ಎನ್ನುವವರೇ ಕೊಲೆಯಾದ ವ್ಯಕ್ತಿ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಂದೆ ಪರಶುರಾಮ ಕುಳಲಿ ಕಂಠ ಪೂರ್ತಿ ಕುಡಿದು ಅದೇ ಮತ್ತಿನಲ್ಲಿ ಮಗನ ಮೇಲೆ ಹಲ್ಲೆ ಮಾಡುತ್ತಿದ್ದರು. ಇದರಿಂದ ಆರೋಪಿ ಮಗ ವಿಠ್ಠಲ ಕುಳಲಿ ರೋಸಿ ಹೋಗಿದ್ದ.

ಮಂಗಳವಾರ ಇದೇ ರೀತಿ ಹಲ್ಲೆ ನಡೆಸುವಾಗ ಆರೋಪಿ ಮಗ ತಂದೆಯ ತಲೆಗೆ ಕಬ್ಬಿಣದ ರಾಡ್‌ ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೊಳವೆ ಬಾವಿಗೆ ಎಸೆಯಲು ಪ್ರಯಿತ್ನಿಸಿದ್ದಾನೆ. ದೇಹ ಬಾವಿಯೊಳಗೆ ಹೋಗದೆ ಇದ್ದಾಗ ಕೊಡಲಿಯಿಂದ ದೇಹವನ್ನು ಮೂವತ್ತು ತುಂಡುಗಳಾಗಿ ಕತ್ತರಿಸಿ ನಂತರ ಕೊಳವೆ ಬಾವಿಯೊಳಗೆ ಹಾಕಿದ್ದಾನೆ.

ಇದೀಗ ಕೊಲೆಯ ರಹಸ್ಯ ಬಯಲಾಗಿದ್ದು, ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಜೆಸಿಬಿ ಮೂಲಕ ಕೊಳವೆ ಬಾಅವಿಯನ್ನು ಅಗೆದು ಮೃತದೇಹದ ತುಂಡುಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಇದನ್ನೂ ಓದಿ : Kota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

ಇದನ್ನೂ ಓದಿ : China guest house Kabul :ಕಾಬೂಲ್‌ನಲ್ಲಿ ಚೀನಾ ಮೂಲದ ಹೋಟೆಲ್‌ನಲ್ಲಿ ಸ್ಪೋಟ ನಡೆಸಿದ ಉಗ್ರರು

(Crime report) The murder of Shraddawakar in Delhi shocked the entire country. Many similar incidents are already taking place, now a similar incident has taken place in Bagalkot, Karnataka, where a cruel son killed his father, cut him into thirty pieces and threw them into a bore well.

Comments are closed.