Father murdered son: ಹೆಬ್ರಿ: ಕುಡಿದ ಮತ್ತಿನಲ್ಲಿ ರಂಪಾಟ ಮಾಡುತ್ತಿದ್ದ ಮಗನ ಕೊಲೆಗೈದ ತಂದೆ

ಹೆಬ್ರಿ: (Father murdered son) ಪ್ರತಿದಿನ ಕಂಠಪೂರ್ತಿ ಕುಡಿದು ಮನೆಯಲ್ಲಿ ರಂಪಾಟ ಮಾಡುತ್ತಿದ್ದ ಮಗನ ಕಿರುಕುಳ ತಾಳಲಾರದೇ, ಇದರಿಂದ ಬೇಸತ್ತ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ವರಂಗ ಗ್ರಾಮದ ಮೂಡುಬೆಟ್ಟುವಿನಲ್ಲಿ ನಡೆದಿದೆ. ಸತೀಶ್‌ ಪೂಜಾರಿ (40 ವರ್ಷ) ಕೊಲೆಯಾದ ವ್ಯಕ್ತಿಯಾಗಿದ್ದಾರೆ.

ಮೃತ ಸತೀಶ್‌ ಪೂಜಾರಿ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದರು. ಮನೆಗೆ ಬಂದವರು ಸುಮ್ಮನಿರದೇ ಗಲಾಟೆ ಮಾಡಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು. ಪ್ರತಿನಿತ್ಯ ಹೀಗೆ ಮುಂದುವರೆದಿತ್ತು. ಫೆ. 24 ರಂದು ಕೂಡ ಇವರು ಕುಡಿದು ಬಂದಿದ್ದು, ಮೃತ ವ್ಯಕ್ತಿಯ ತಂದೆ ಕುಟ್ಟಿ ಪೂಜಾರಿ ಎನ್ನುವವರು ಕೋಣೆಯಲ್ಲಿ ಮಲಗಿದ್ದರು. ಈ ವೇಳೆ ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲನ್ನು ಕಾಲಿನಿಂದ ಒದ್ದು ಅವರನ್ನು ಮನೆಯ ಅಂಗಳಕ್ಕೆ ಎಳೆದು ತಂದಿದ್ದು, ಸತೀಶ್‌ ಕಿರುಕುಳ ನೀಡಲಾರಂಭಿಸಿದ್ದರು

ಇದರಿಂಗ ಕೋಪಗೊಂಡ ಸತೀಶ್‌ ಪೂಜಾರಿ ಅವರ ತಂದೆ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಒಲೆಗೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ್‌ ಪೂಜಾರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಸತೀಶ್‌ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೀಗ ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಆಸ್ತಿ ವಿಚಾರವಾಗಿ ಪತ್ನಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಪತ್ನಿ ಮತ್ತು ಪುತ್ರರನ್ನು ಕೊಂದ ಬಳಿಕ ರಾಜೇಶ್ ತನ್ನ ಮಣಿಕಟ್ಟಿನ ಮೇಲೆ ಆಳವಾದ ಗಾಯ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅತನನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಭಾನುವಾರ ಮುಂಜಾನೆ ತನ್ನ ಸ್ನೇಹಿತರಿಗೆ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಸಂದೇಶ ಕಳುಹಿಸಿದ್ದ. ಹೀಗಾಗಿ ಆತನ ಸ್ನೇಹಿತರು ಆತನ ಸಹೋದರನನ್ನು ಎಚ್ಚರಿಸಿದ್ದು, ಅವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ ಹರ್ಷ ವರ್ಧನ್ ತಿಳಿಸಿದ್ದಾರೆ.

ಇದನ್ನೂ ಓದಿ : ಆಸ್ತಿ ವಿಚಾರವಾಗಿ ಪತ್ನಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಇದನ್ನೂ ಓದಿ : Hyderabad Murder: ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಗೆಳೆಯ ನನ್ನೇ ಕೊಲೆಗೈದು, ಖಾಸಗಿ ಅಂಗಳನ್ನು ಕತ್ತರಿಸಿದ ಭೂಪ

ರಾಜೇಶ್‌ ಕೃತ್ಯ ನಡೆಸಿದಾಗ ಅವರ ಕುಟುಂಬದವರು ಮಲಗಿದ್ದು, ಈ ಸಂದರ್ಭದಲ್ಲಿ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2015ರಲ್ಲಿ ಸುನೀತಾ ಅವರನ್ನು ರಾಜೇಶ್ ವಿವಾಹವಾಗಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ರಾಜೇಶ್ ತಮ್ಮಿಂದ ಆಸ್ತಿಗಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಈ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರಿಂದ ರಾಜೇಶ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರರನ್ನು ಕೊಲೆ ಮಾಡಿದ್ದಾನೆ ಎಂದು ಸುನೀತಾ ಕುಟುಂಬ ಆರೋಪಿಸಿದೆ. ಸದ್ಯ ಈ ಘಟನೆಯ ಕುರಿತು ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಡಿಸಿಪಿ ತಿಳಿಸಿದ್ದಾರೆ.

Father murdered son: Hebrew: A father who murdered a son who was on a drunken rampage

Comments are closed.