5 Death : ಬಾಲಕಿಯ ಪ್ರಾಣ ಉಳಿಸಲು ಹೋದ ಐವರ ಸಾವು

ಚೆನ್ನೈ : ದೇವಸ್ಥಾನದ ಕೊಳದಲ್ಲಿ ಮುಳುಗುತ್ತಿರುವ ಬಾಲಕಿಯ ರಕ್ಷಣೆಗೆ ತೆರಳಿದ್ದ ಐದು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುಧು ಗುಮ್ಮಿಡಿಪುಂಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಗಲಮ್ಮನ್‌ ದೇವಸ್ಥಾನದ ಕೊಳದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದಲ್ಲೀಗ ಸೂತಕದ ಛಾಯೆ ಆವರಿಸಿದೆ.

ನರ್ಮದಾ (12 ವರ್ಷ), ಜೀವಿತಾ (14 ವರ್ಷ ), ಅಶ್ಮಿತಾ (14 ವರ್ಷ ), ತಾಯಿ ಸುಮತಿ ( 38 ವರ್ಷ ) ಮತ್ತು ಜೋತಿ (30 ವರ್ಷ) ಎಂಬವರೇ ಮೃತ ದುರ್ದೈವಿಗಳು. ದೇವಸ್ಥಾನದ ಕೊಳದಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆಯಲ್ಲಿ ಮಕ್ಕಳು ಕೊಳದಲ್ಲಿ ನೀರಾಟವಾಡುತ್ತಿದ್ದರು. ಈ ವೇಳೆಯಲ್ಲಿ ನರ್ಮದಾ ಕೊಳದಲ್ಲಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದಾಳೆ. ಈ ವೇಳೆಯಲ್ಲಿ ರಕ್ಷಣೆಗೆ ಇಳಿದ ಜೀವಿತಾ ಹಾಗೂ ಅಶ್ಮಿತಾ ಅವರು ನೀರಿನಲ್ಲಿ ಮುಳುಗಿದ್ದಾರೆ. ಅಲ್ಲದೇ ಇದ್ದ ಅಶ್ಮಿತಾ ತಾಯಿ ನೀರಿಗೆ ಇಳಿದು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೇ ಜ್ಯೋತಿ ಅನ್ನೋ ಇನ್ನೋರ್ವ ಮಹಿಳೆಯೂ ಕೊಳಗ್ಗೆ ಇಳಿದಿದ್ದಾರೆ.

ಆದ್ರೆ ಕೊಳದಲ್ಲಿನ ಕೆಸರಿನಲ್ಲಿ ಸಿಲುಕು ಐದು ಮಂದಿಯೂ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಕೊಳದ ಬಳಿಗೆ ಬರುವ ಹೊತ್ತಿಗೆ ಎಲ್ಲರ ಪ್ರಾಣ ಪಕ್ಷಿಯೂ ಹಾರಿ ಹೋಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಎಲ್ಲಾ ಶವಗಳನ್ನು ಹೊರತೆಗೆದಿದ್ದು, ಶವಗಳನ್ನು ಪೊನ್ನೆರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಮುಳುಗಿ ಐದು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಗ್ರಾಮದಲ್ಲೀಗ ಸೂತಕ ಆವರಿಸಿದೆ.

Comments are closed.