Gajiyabad crime: ಪತ್ನಿಯೊಂದಿಗೆ ಜಗಳ, ಬಳಿಕ ಮನೆಗೆ ಬೆಂಕಿ: ಕಾರಣ ಏನು ಗೊತ್ತಾ…

ಗಾಜಿಯಾಬಾದ್: (Gajiyabad crime) ಪತ್ನಿಯೊಂದಿಗೆ ಜಗಳವಾಡಿದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಮನೆಗೆ ಅಡುಗೆ ಅನಿಲ ಬಳಸಿ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 10 ಜನರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ವಿವಾಹೇತರ ಸಂಬಂಧದ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳ ನಡೆದಿದ್ದು ನಂತರದಲ್ಲಿ ಈ ಘಟನೆ ನಡೆದಿದೆ. ಲೋಣಿ ಗಡಿ ಪ್ರದೇಶದ ತಿಲಕ್ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಪತಿಯನ್ನು ತೊರೆದು ಒಂಟಿಯಾಗಿ ಜೀವನ ನಡೆಸುತ್ತಿರುವ ಸುರೇಶ್ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ. ಇದಲ್ಲದೇ ಸುರೇಶ್‌ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯಕ್ಕೆ ಮೊದಲು ಸುರೇಶ್ ಅವರು ತಮ್ಮ ಪತ್ನಿ ರಿತು (36 ವರ್ಷ) ಅವರೊಂದಿಗೆ ತೀವ್ರವಾಗಿ ಜಗಳವಾಡುತ್ತಿದ್ದರು. ಇಬ್ಬರ ನಡುವಿನ ಜಗಳ ಅತಿರೇಕಕ್ಕೇರಿದ್ದು ನಂತದ ಪತ್ನಿಯನ್ನು ಕೊಲ್ಲುವುದಾಗಿ ಸುರೇಶ್‌ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಹಾಕಿ ಸುಮ್ಮನಿರದ ಸುರೇಶ್‌ ಅಡುಗೆ ಮನೆಯಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ನ ಪೈಪ್ ತೆಗೆದು ಒಲೆಯಿಂದ ಮನೆಗೆ ಬೆಂಕಿ ಹಚ್ಚಿದ್ದಾನೆ. ಕೋಣೆಯಲ್ಲಿ ಗ್ಯಾಸ್ ಹರಡಲು ಪ್ರಾರಂಭಿಸಿದ್ದು, ರಿತು ಸಹಾಯಕ್ಕಾಗಿ ಕೂಗಿದ್ದಾರೆ. ರೀತು ಕೂಗಿಗೆ ಸ್ಪಂದಿಸಿದ ಇತರ ಕುಟುಂಬ ಸದಸ್ಯರು ಗ್ಯಾಸ್ ರೆಗ್ಯುಲೇಟರ್ ಅನ್ನು ಆಫ್ ಮಾಡಲು ಧಾವಿಸಿದರು. ಆದರೆ, ಸುರೇಶ್ ಅಷ್ಟರೊಳಗಾಗಿ ಗ್ಯಾಸ್ ಲೈಟರ್ ಫ್ಲಿಕ್ ಮಾಡಿದ್ದು, ಕೂಡಲೇ ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ.

ಘಟನೆಯಲ್ಲಿ, ಸುರೇಶ್, ಅವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಸೇರಿದಂತೆ ಕನಿಷ್ಠ 10 ಜನರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಸದ್ಯ ಸುರೇಶ್ ಅವರ ಕುಟುಂಬ ಸದಸ್ಯರಿಂದ ಲಿಖಿತ ದೂರನ್ನು ಸ್ವೀಕರಿಸಲು ಮುಂದಾಗಿದ್ದು, ದೂರು ದಾಖಲಾದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Aligarh Crime news: ಪತ್ನಿಯನ್ನು ಕತ್ತು ಹಿಸುಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿರಾಯ

Gajiyabad crime: Argument with wife, then house fire: Do you know the reason?

Comments are closed.