Hyderabad Murder: ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಗೆಳೆಯ ನನ್ನೇ ಕೊಲೆಗೈದು, ಖಾಸಗಿ ಅಂಗಳನ್ನು ಕತ್ತರಿಸಿದ ಭೂಪ

ಹೈದರಾಬಾದ್‌: (Hyderabad Murder) ತನ್ನ ಗೆಳತಿಯೊಂದಿಗೆ ಮಾತನಾಡಿ, ಸಂದೇಶ ಕಳುಹಿಸಿದ್ದಕ್ಕಾಗಿ ತನ್ನ ಸ್ನೇಹಿತನನ್ನೇ ಕೊಂದು ಆತನ ಶಿರಛ್ಚೇದ ಮಾಡಿದ್ದಾನೆ. ನಂತರ ಆತನ ಹೃದಯ ಹಾಗೂ ಖಾಸಗಿ ಭಾಗಗಳನ್ನು ದೇಹದಿಂದ ಬೇರ್ಪಡಿಸಿ, ಆತನ ಬೆರಳುಗಳನ್ನು ಕತ್ತರಿಸಿ ನಂತರ ತಾನೇ ಸ್ವತಃ ಪೊಲೀಸರ ಮುಂದೆ ಹಾಜರಾದ ಭಯಾನಕ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನವೀನ್‌ (22 ವರ್ಷ) ಎಂದು ಗುರುತಿಸಲಾಗಿದ್ದು , ಆರೋಪಿಯನ್ನು ಹರಿಹರ ಕೃಷ್ಣ (22 ವರ್ಷ) ಎಂದು ಗುರುತಿಸಲಾಗಿದೆ.

ಕೃಷ್ಣ ಹಾಗೂ ನವೀನ್‌ ಇಬ್ಬರೂ ಸ್ನೇಹಿತರಾಗಿದ್ದು, ದಿಲ್ಸುಖ್ನಗರದ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು. ಇಬ್ಬರು ಕೂಡ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೂ ನವೀನ್‌ ಮೊದಲು ಹುಡುಗಿಯ ಬಳಿ ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದು, ಇದಕ್ಕೆ ಅಕೆ ಸಮ್ಮತಿ ನೀಡಿದ್ದಳು. ಒಂದೆರಡು ವರ್ಷಗಳ ನಂತರ ಕಾರಣಾಂತರದಿಂದ ಇಬ್ಬರು ಬೇರ್ಪಟ್ಟಿದ್ದು, ನಂತರ ಹುಡುಗಿ ಕೃಷ್ಣನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು.

ನವೀನ್‌ ಹಾಗೂ ಹುಡುಗಿ ಬೇರ್ಪಟ್ಟಿದ್ದರು ಕೂಡ ಇಬ್ಬರು ಸಂಪರ್ಕದಲ್ಲಿದ್ದರು. ಪ್ರತಿದಿನ ಸಂದೇಶ ಕಳುಹಿಸುವುದು, ಕರೆ ಮಾಡುವುದು ಮಾಡುತ್ತಿದ್ದರು. ಇದರಿಂದ ಕುಪಿತನಾದ ಕೃಷ್ಣ ಅಸಮಧಾನಗೊಂಡಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದನು. ಇದಾದ ಬಳಿಕ ಸರಿಯಾದ ಸಮಯವನ್ನು ನೋಡಿಕೊಂಡ ಕೃಷ್ಣ ನವೀನ್‌ ಗೆ ಕಂಠಪೂರ್ತಿ ಕುಡಿಸಿ, ನಂತರ ಗಲಾಟೆಗೆ ಇಳಿದಿದ್ದಾನೆ. ಇದರ ನಂತರ ನವೀನ್‌ ನನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ನವೀನ್‌ ದೇಹ ಹಾಗೂ ಬತಲೆಯನ್ನು ಬೇರ್ಪಡಿಸಿ, ಹೃದಯ ಹಾಗೂ ಖಾಸಗಿ ಭಾಗಗಳನ್ನು ದೇಹದಿಂದ ಬೇರ್ಪಡಿಸಿದ್ದಾನೆ. ಬಳಿಕ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದ ಕೈಬೆರಳನ್ನು ಕೂಡ ಕತ್ತರಿಸಿದ್ದಾನೆ.

ನಂತರ ಇದರ ಫೋಟೋವನ್ನು ತೆಗೆದು ವಾಟ್ಸಾಪ್‌ ನಲ್ಲಿ ಗೆಳತಿಗೆ ಕಳುಹಿಸಿದ್ದಾನೆ. ಇದೆಲ್ಲಾ ಆದ ಮೇಲೆ ಕೃಷ್ಣ ಸ್ವತಃ ತಾನೇ ಪೊಲೀಸರ ಮುಂದೆ ಹೋಗಿ ಕೃತ್ಯವನ್ನು ಒಪ್ಪಿಕೊಂಡಿದ್ದು, ಆರೋಪಿಯ ಹೇಳಿಕೆ ಮೇಲೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನೂ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : NEET Aspirants suicide: NEET ಆಕಾಂಕ್ಷಿತ ವಿದ್ಯಾರ್ಥಿ ಆತ್ಮಹತ್ಯೆ: ಹಾಸ್ಟೆಲ್‌ ಕೊಠಡಿಯಲ್ಲಿ ಸೂಸೈಡ್ ನೋಟ್ ಪತ್ತೆ

ಇದನ್ನೂ ಓದಿ : Dehli road accident: ವಲಸೆ ಕಾರ್ಮಿಕರ ಮೇಲೆ ಟ್ರಕ್ ಪಲ್ಟಿ : 4 ವರ್ಷದ ಬಾಲಕ ಸೇರಿ 4 ಮಂದಿ ಸಾವು

Hyderabad Murder: A boyfriend murdered me for talking to his girlfriend

Comments are closed.