couple murdered : ಮರ್ಯಾದಾ ಹತ್ಯೆಗೆ ಬಲಿಯಾದ ನವ ಜೋಡಿ : ಅಣ್ಣನಿಂದಲೇ ತಂಗಿ – ಭಾವನ ಬರ್ಬರ ಕೊಲೆ

ತಮಿಳುನಾಡು : couple murdered : ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಅನೇಕ ಕಡೆಗಳಲ್ಲಿ ಇಂದಿಗೂ ಸಹ ಅಂರ್ತಜಾತಿ ವಿವಾಹಗಳಿಗೆ ಸಮ್ಮತಿ ಸಿಗುತ್ತಿಲ್ಲ. ಜಾತಿ ಎಂಬ ಹಂಗಿಗೆ ಬಿದ್ದು ಅನೇಕರು ತಮ್ಮ ಸ್ವಂತ ಮಕ್ಕಳು ಎನ್ನುವುದನ್ನೂ ನೋಡದೇ ಪೋಷಕರು ಮರ್ಯಾದಾ ಹತ್ಯೆಗಳನ್ನು ಮಾಡುತ್ತಿದ್ದಾರೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ತಮಿಳುನಾಡಿನ ಕುಂಭಕೋಣಂ ಎಂಬಲ್ಲಿ ಮದುವೆಯಾದ ಐದೇ ದಿನಕ್ಕೆ ಮರ್ಯಾದಾ ಹತ್ಯೆಯೊಂದು ಘಟಿಸಿ ಹೋಗಿದೆ.


ಕೇವಲ ಐದು ದಿನಗಳ ಹಿಂದೆ ಪ್ರೇಮ ವಿವಾಹವಾಗಿದ್ದ ತಂಗಿ ಹಾಗೂ ಬಾವನನ್ನು ಸ್ವತಃ ಆಕೆಯ ಅಣ್ಣನೇ ಕೊಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ. 24 ವರ್ಷದ ಶರಣ್ಯಾ ಹಾಗೂ 31 ವರ್ಷದ ಮೋಹನ್​​ ಕೊಲೆಯಾಗಿದ್ದಾರೆ ಎಂದು ಕುಂಭಕೋಣಂ ಪೊಲೀಸರು ಮಾಹಿತಿ ನೀಡಿದ್ದಾರೆ.


ನರ್ಸಿಂಗ್​ ವಿದ್ಯಾರ್ಥಿನಿಯಾಗಿದ್ದ ತುಳುಕ್ಕವೇಲಿ ಗ್ರಾಮದ ಶರಣ್ಯಾ ಕುಂಭಕೋಣಂ ಪದವಿಯನ್ನು ಸ್ವೀಕರಿಸಿದ ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಸೇವೆಗೆ ಸೇರಿದ್ದರು. ಇದೇ ಆಸ್ಪತ್ರೆಯಲ್ಲಿ ಶರಣ್ಯಾ ಹಾಗೂ ತಿರುವಣ್ಣಾಮಲೈನ ಮೋಹನ್​ಗೂ ಭೇಟಿಯಾಗಿತ್ತು. ಇವರಿಬ್ಬರ ಪರಿಚಯ ಕ್ರಮೇಣವಾಗಿ ಸ್ನೇಹಕ್ಕೆ ತಿರುಗಿತ್ತು. ಆರು ತಿಂಗಳ ಹಿಂದೆ ಭೇಟಿಯಾಗಿದ್ದ ಇವರಿಬ್ಬರೂ ಕ್ರಮೇಣ ಪ್ರೀತಿ ಮಾಡಲು ಆರಂಭಿಸಿದ್ದರು.


ಶರಣ್ಯಾ ಎಸ್ಸಿ ಸಮುದಾಯದ ಯುವತಿಯಾಗಿದ್ದರೆ ಮೋಹನ್​ ಮುದಲಿಯಾರ್​ ಬಿಸಿ ಸಮುದಾಯಕ್ಕೆ ಸೇರಿದ್ದರು. ಹೀಗಾಗಿ ಶರಣ್ಯಾ ಕುಟುಂಬಸ್ಥರು ಈ ಮದುವೆ ವಿವಾಹವೊಡ್ಡಿದ್ದರು. ಶರಣ್ಯಾ ಸಹೋದರನಾದ ಶಕ್ತಿವೇಲು ತಂಗಿಯ ಬಳಿ ನೀನು ಮೋಹನ್​ ಮದುವೆಯಾಗದೇ ಸೋದರ ಮಾವ ರಂಜಿತ್​ನನ್ನು ಮದುವೆಯಾಗು ಎಂದು ಬುದ್ಧಿವಾದ ಕೂಡ ಹೇಳಿದ್ದ ಎನ್ನಲಾಗಿದೆ. ಆದರೆ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇವರಿಬ್ಬರು ಯಾರಿಗೂ ತಿಳಿಸದೇ ಚೆನ್ನೈನಲ್ಲಿ ಐದು ದಿನಗಳ ಹಿಂದೆ ವಿವಾಹವಾಗಿದ್ದರು. ಅಲ್ಲದೇ ಮನೆಗೆ ಕರೆ ಮಾಡಿ ತಾವು ಮದುವೆಯಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ.


ಈ ಘಟನೆ ಬಳಿಕ ಒಂದು ದಿನ ತಂಗಿಗೆ ಕರೆ ಮಾಡಿದ್ದ ಅಣ್ಣ ಶಕ್ತಿವೇಲು, ನಿಮ್ಮ ಪ್ರೇಮ ವಿವಾಹಕ್ಕೆ ನಮ್ಮ ಒಪ್ಪಿಗೆಯಿದ್ದು ಮನೆಗೆ ಬಂದು ಆತಿಥ್ಯ ಸ್ವೀಕರಿಸುವಂತೆ ಹೇಳಿದ್ದ ಎನ್ನಲಾಗಿದೆ. ಅಣ್ಣನ ಮಾತನ್ನು ನಂಬಿದ ಶರಣ್ಯಾ ಪತಿ ಮೋಹನ್​ ಜೊತೆಯಲ್ಲಿ ಆತನ ಮನೆಗೆ ತೆರಳಿದ್ದಾಳೆ. ಊಟ ಮಾಡಿ ಇನ್ನೇನು ಅಣ್ಣನ ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅಣ್ಣ ಮೋಹನ್​ ಹಾಗೂ ಶರಣ್ಯಾ ಕುತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾನೆ.


ಶರಣ್ಯಾ ಹಾಗೂ ಮೋಹನ್​ ಅತೀವ ರಕ್ತಸ್ರಾವದಿಂದ ಮೃತಪಟ್ಟ ಬಳಿಕ ಶಕ್ತಿವೇಲು ಸೀದಾ ಪೊಲೀಸ್​ ಠಾಣೆಗೆ ತೆರಳಿ ತಾನು ಇಬ್ಬರನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಈತ ಇವರಿಬ್ಬರನ್ನು ಕೊಲೆ ಮಾಡಬೇಕೆಂದು ಮೊದಲೇ ಪ್ಲಾನ್​ ಮಾಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಶರಣ್ಯಾ ಮದುವೆಯಿಂದಾಗಿ ತಮ್ಮ ಕುಟುಂಬದ ಪ್ರತಿಷ್ಠೆ ಹಾಳಾಗಿದೆಯೆಂದು ಶಕ್ತಿವೇಲು ಈ ರೀತಿ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಇದನ್ನು ಓದಿ : Vat Savitri Vrat: ವಟ ಸಾವಿತ್ರಿ ವ್ರತ; ಸುಮಂಗಲಿಯರಿಗೆ ವಿಶೇಷ ದಿನವಿಂದು

ಇದನ್ನೂ ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

inter caste couple murdered near kumbakonam

Comments are closed.