Koteshwara serial accident: ಕೋಟೇಶ್ವರ: ಬೀಜಾಡಿ ಕ್ರಾಸ್‌ ಬಳಿ ಸರಣಿ ಅಪಘಾತ: ಇಬ್ಬರಿಗೆ ಗಾಯ

ಕುಂದಾಪುರ: (Koteshwara serial accident) ಆಂಬುಲೆನ್ಸ್‌, ಲಾರಿ ಹಾಗೂ ಟಿಪ್ಪರ್‌ ನಡುವೆ ಸರಣಿ ಅಪಘಾತ ನಡೆದಿದ್ದು, ಇಬ್ಬರು ಗಾಯಗೊಂಡ ಘಟನೆ ಕೋಟೇಶ್ವರದ ಬೀಜಾಡಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತಕ್ಷಣವೇ ಸ್ಥಳೀಯರು ಆಂಬುಲೆನ್ಸ್‌ ನಲ್ಲಿದ್ದ ರೋಗಿ ಹಾಗೂ ಗಾಯಾಳುಗಳನ್ನು ಕೋಟೇಶ್ವರದ ಎನ್‌. ಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಕ್ವಾಡಿಯಿಂದ ಆಂಬುಲೆನ್ಸ್‌ ನಲ್ಲಿ ರೋಗಿಯನ್ನು ಮಣಿಪಾಲಕ್ಕೆ ಕರೆದೊಯ್ಯುವ ಸಂದರ್ಭ ಬೀಜಾಡಿ ಕ್ರಾಸ್‌ ಬಳಿ ಸರ್ವಿಸ್‌ ರಸ್ತೆಯಲ್ಲಿ ಅಂಬುಲೆನ್ಸ್‌ ಹಾದು ಹೋಗುತ್ತಿತ್ತು. ಬೀಜಾಡಿ ಕ್ರಾಸ್‌ ಬಳಿ ಅಂಬುಲೆನ್ಸ್‌ ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ ಬರುವಾಗ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಬಂದು ಆಂಬುಲೆನ್ಸ್‌ ನ ಹಿಂದುಗಡೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆಂಬುಲೆನ್ಸ್‌ ಸರ್ವಿಸ್‌ ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಆಂಬುಲೆನ್ಸ್‌ ನಲ್ಲಿ ರೋಗಿಯ ಜೊತೆಗಿದ್ದ ಉದಯ್‌ ಕುಮಾರ್‌ ಹೆಗ್ಡೆ ಹಾಗೂ ಬಾಬಿ ಶೆಡ್ತಿ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಅಂಬುಲೆನ್ಸ್‌ ಚಾಲಕ ಐಯೂಬು ಕೋಟೇಶ್ವರ ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಆಂಬುಲೆನ್ಸ್‌ ನಲ್ಲಿದ್ದ ರೋಗಿ ಹಾಗೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕೋಟೇಶ್ವರ ಎನ್‌ ಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಘಟನೆಯ ಕುರಿತು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Life threatening: ಬೈಂದೂರು: ದ್ವಿಚಕ್ರ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ

ಬೈಂದೂರು: ದ್ವಿಚಕ್ರ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ: ದೂರು ದಾಖಲು

ಬೈಂದೂರಿನ ಮುಸ್ಲಿಂ ಕೇರಿ ಮುಖ್ಯ ರಸ್ತೆ ನಿವಾಸಿ ಮೊಹಮ್ಮದ್‌ ಅಕ್ರಮ್‌ ಅವರು ಭಟ್ಕಳದ ಆಸ್ಪತ್ರೆಯೊಂದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸಂಜೆ ವೇಳೆ ಆಸ್ಪತ್ರೆಯಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಬೈಂದೂರಿಗೆ ಬರುತ್ತಿರುವಾಗ ಶಿರೂರು ಗೇಟ್‌ ಬಳಿ ಮೊಹಮ್ಮದ್‌ ಅಕ್ಬರ್‌ ಹಾಗೂ ಇನ್ನೋರ್ವ ವ್ಯಕ್ತಿ ದ್ವಿಚಕ್ರ ವಾಹಯದಲ್ಲಿ ಬಂದಿದ್ದು, ಐದರಿಂದ ಆರು ಬಾರಿ ಮೊಹಮ್ಮದ್‌ ಅಕ್ರಮ್‌ ಅವರ ವಾಹನಕ್ಕೆ ಅಡ್ಡ ಬಂದಿದ್ದರು. ಇದರಿಂದ ಅಕ್ರಮ್‌ ಅವರು ಹೆದರಿ ಅಲ್ಲಿಂದ ವೇಗವಾಗಿ ಹೊರಟು ಹೋಗಿದ್ದರು.

ಇದನ್ನೂ ಓದಿ : Cow hug day in udupi: ಪ್ರೇಮಿಗಳ ದಿನದಂದು ಉಡುಪಿಯಲ್ಲಿ ಗೋ ಆಲಿಂಗನ

ನಂತರ ನೀರ್ಗದ್ದೆ ಬಳಿ ಬರುತ್ತಿರುವಾಗ ಮತ್ತೆ ಇಬ್ಬರು ಅಕ್ರಮ್‌ ಅವರ ವಾಹನವನ್ನು ಅಡ್ಡಗಟ್ಟಿಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದರು. ಈ ವೇಳೆ ಹಾಗೋ ಹೀಗೋ ಮಾಡಿ ವ್ಯಕ್ತಿಗಳಿಂದ ಅಕ್ರಮ್‌ ತಪ್ಪಿಸಿಕೊಂಡು ಬಂದಿದ್ದು, ಒತ್ತಿನೆಣೆಯಲ್ಲಿ ಅದೇ ಇಬ್ಬರು ವ್ಯಕ್ತಿಗಳು ಇಬ್ಬರು ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡುತ್ತಾ ನಿಂತಿದ್ದಾರೆ. ಇವರು ಯಾವುದೋ ದುರುದ್ದೇಶದಿಂದ ತನಗೆ ತೊಂದರೆ ನೀಡಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದುಕೊಂಡು ಮೊಹಮ್ಮದ್‌ ಅಕ್ರಮ್‌ ಅವರು ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ : ದಕ್ಷಿಣ ಕನ್ನಡ: ಕುಕ್ಕೆ, ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ

Koteshwara serial accident: Koteshwara: Serial accident near Bijadi Cross: Two injured

Comments are closed.