Madhya Pradesh : ಪತ್ನಿಯನ್ನು ಕೊಲ್ಲಲು ಹೂಡಿದ್ದ ಸಂಚಿಗೆ ಅತ್ತೆ ಬಲಿ : ಅಷ್ಟಕ್ಕೂ ಆಗಿದ್ದೇನು ?

ಮದ್ಯ ಪ್ರದೇಶ : (Madhya Pradesh) ಪತ್ನಿಯೋರ್ವಳು ಮನೆ ಬಿಟ್ಟು ಹೋಗಿದ್ದಳು. ಪತ್ನಿಯ ಮೇಲಿನ ಕೋಪಕ್ಕೆ ಪತಿ ಮಹಾಶಯನೋರ್ವ ಪತ್ನಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದಾನೆ. ದುರಾದೃಷ್ಟವಶಾತ್, ಪತ್ನಿಯನ್ನು ಕೊಲ್ಲುವ ಸಂಚಿಗೆ ಇದೀಗ ಅತ್ತೆ ಬಲಿಯಾಗಿರುವ ಘಟೆನೆ ಮದ್ಯ ಪ್ರದೇಶ (Madhya Pradesh)ದ ಬೇತುಲ್‌ ಜಿಲ್ಲೆಯ ಕೊತ್ವಾಲಿ ಬಳಿಯ ಸೈಖೇಡಾ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ಮೇಲಿನ ಕೋಪದಿಂದ ಪತಿ ಆಕೆಯ ಮನೆಗೆ ತೆರಳಿದ್ದಾನೆ. ಮನೆಯ ಹೊರಗಿನ ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಜೋಡಿಸಿದ್ದಾನೆ. ಈ ವೇಳೆಯಲ್ಲಿ ಅತ್ತೆ ಬಾಗಿಲ ಬಳಿಗೆ ಬಂದು ಬಾಗಿಲು ತೆರೆದಿದ್ದಾರೆ. ಈ ವೇಳೆಯಲ್ಲಿ 55 ವರ್ಷದ ಅತ್ತೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Honnavar accident:ಹೊನ್ನಾವರ : ಭೀಕರ ಅಪಘಾತ: 15 ಮಂದಿಗೆ ಗಾಯ, ಓರ್ವ ಸಾವು

ಇದನ್ನೂ ಓದಿ : Mobile Game : ಮೊಬೈಲ್‌ ಕಾರಣಕ್ಕೆ ಅಪ್ಪ ಮಗ ಇಬ್ಬರೂ ನೇಣಿಗೆ ಶರಣು

ಆರೋಪಿಯು ಅತೀಯಾಗಿ ಮದ್ಯಪಾನ ಮಾಡುತ್ತಿದ್ದ. ಅಲ್ಲದೇ ಪತ್ನಿಯೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ. ಅಂತೆಯೇ ಭಾನುವಾರ ಕೂಡ ಹೆಂಡತಿಯೊಡನೆ ಜಗಳವಾಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಕೊತ್ವಾಲಿ ಬಳಿಯ ಸೈಖೇಡಾ ಗ್ರಾಮದಲ್ಲಿರುವ ತಾಯಿಯ ಮನೆಗೆ ತೆರಳಿದ್ದಾಳೆ. ತನ್ನ ಪತ್ನಿ ಮನೆ ಬಿಟ್ಟು ಹೋಗಿರುವ ಕಾರಣ ಪತಿ ಕೋಪಗೊಂಡು ತನ್ನ ಅತ್ತೆಯ ಮನೆಗೆ ತೆರಳಿದ್ದಾನೆ . ಅಲ್ಲಿಗೆ ತೆರಳಿದ ವ್ಯಕ್ತಿ ಅತ್ತೆ ಮನೆಯ ಮುಂಭಾಗದ ಕಬ್ಬಿಣದ ಬಾಗಿಲಿಗೆ ವಿದ್ಯುತ್‌ ಅಳವಡಿಸಿ ಹೆಂಡತಿಯನ್ನು ಕೊಲ್ಲಲು ಸಂಚು ರೂಪಿಸಿದ್ದನು . ಆದರೆ ಆತನ ಸಂಚಿಗೆ ಹೆಂಡತಿಯ ಬದಲು ಬಲಿಯಾಗಿದ್ದು ಆತನ ಅತ್ತೆ.

ಇದನ್ನೂ ಓದಿ : Honnavar accident:ಹೊನ್ನಾವರ : ಭೀಕರ ಅಪಘಾತ: 15 ಮಂದಿಗೆ ಗಾಯ, ಓರ್ವ ಸಾವು

ವಿದ್ಯುತ್ ಶಾಕ್ ನಿಂದಾಗಿ ಅತ್ತೆ ಸಾವನ್ನಪ್ಪುತ್ತಿದ್ದಂತೆಯೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಯಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಆರೋಪಿ ವ್ಯಕ್ತಿ ತನ್ನ ಹೆಂಡತಿಯ ಮೇಲೀನ ಕೋಪಕ್ಕೆ ಹೂಡಿದ ಸಂಚಿನಿಂದಾಗಿ ತನ್ನ ಅತ್ತೆ ಬಲಿಯಾಗಿರುವುದು ಮಾತ್ರ ದುರಂತವೇ ಸರಿ.

(Madhya Pradesh) A wife had left home. Out of anger towards his wife, the husband Mahashayanorva made a sketch to kill his wife. Unfortunately, the incident in which the mother-in-law is now the victim of a plot to kill her wife took place in Saikheda village near Kotwali in Madhya Pradesh’s Betul district.

Comments are closed.