Murder case : ಬಿಸಿ ನೀರು, ಮೆಣಸಿನ ಪುಡಿ ಎರಚಿ ಮಾವನನ್ನು ಕೊಂದ ಸೊಸೆ

ದಾವಣಗೆರೆ : (Murder case)ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆ , ಮಾವನ ಮೇಲೆ ಬಿಸಿ ನೀರು ಮತ್ತು ಮೆಣಸಿನ ಪುಡಿಯನ್ನು ಎರಚಿ ಹಲ್ಲೆ ನಡೆಸಿ ಹತ್ಯೆಗೈದ ಭೀಕರ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದ ವಿದ್ಯಾನಗರದಲ್ಲಿ ನಡೆದಿದೆ. ಪಿ.ಶಿವಕುಮಾರ್ (70 ವರ್ಷ ) ಎನ್ನವವರು ಕೊಲೆ(Murder case)ಯಾದ ವ್ಯಕ್ತಿ.

ಪ್ರತಿಯೊಂದು ಮನೆಯಲ್ಲೂ ಕೌಟುಂಬಿಕ ಕಲಹಗಳು ಸಾಮಾನ್ಯ . ಅತ್ತೆ ಸೊಸೆ ಜಗಳ , ಮಾವ ಸೊಸೆ ಜಗಳ , ಗಂಡ ಹೆಂಡತಿ ಜಗಳ ಹೀಗೆ ಕುಟುಂಬದಲ್ಲಿ ಕಲಹಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ . ಇಲ್ಲಿ ಅಂತಹದೇ ಒಂದು ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸೊಸೆ ಮಾವನನ್ನೇ ಕೊಂದ9Murder case) ಆಘಾತಕಾರಿ ಘಟನೆ ನಡೆದಿದೆ .

ಇದನ್ನೂ ಓದಿ : Rape Case : ಅತ್ಯಾಚಾರ ಸಂತ್ರಸ್ತೆಯ ವಯಸ್ಸು ನಿರ್ಧಾರಕ್ಕೆ ಶಾಲೆ ದಾಖಲೆ ಸೂಕ್ತ : ಹೈಕೋರ್ಟ್

ಇದನ್ನೂ ಓದಿ : Accident – 4 died : ಆಟೋ ಮೇಲೆ ಮರಳು ಡಂಪರ್ ಪಲ್ಟಿ ; 3 ವಿದ್ಯಾರ್ಥಿಗಳು ಸೇರಿ 4 ಮಂದಿ ಸಾವು

ಇದನ್ನೂ ಓದಿ : Rape incident : 70 ರ ವೃದ್ದೆ ಮೇಲೆ 28 ರ ಯುವಕನಿಂದ ಅತ್ಯಾಚಾರ

ಬಿ.ಎಂ.ಜ್ಯೋತಿ (28 ವರ್ಷ) ಎನ್ನುವಾಕೆ ತನ್ನ ಮಾವನಾದ ಪಿ.ಶಿವಕುಮಾರ್ ಅವರ ಮೇಲಿನ ಮನಸ್ಥಾಪದಿಂದ ಬಿಸಿ ನೀರು ಮತ್ತು ಮೆಣಸಿನ ಪುಡಿಯನ್ನು ಮುಖದ ಮೇಲೆ ಎರಚಿ ಹತ್ಯೆಗೈದಿದ್ದಾಳೆ. ಈ ಕುರಿತು ಹರಿಹರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಾವನನ್ನು ಕೊಂದ ಆರೋಪಿ ಸೊಸೆಯನ್ನು ಬಂದಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲದ ಕುಟುಂಬ ಕಳೆದ ಆರು ತಿಂಗಳಿನಿಂದ ಹರಿಹರದಲ್ಲಿ ನೆಲೆಸಿತ್ತು. ಕೊಲೆಯಾದ ಶಿವಕುಮಾರ್ ಪುತ್ರ ಪಿ.ವೀರೇಶ್ ಹರಿಹರದ ಕಾರ್ಗಿಲ್ ಕಂಪನಿಯ ಉದ್ಯೋಗಿಯಾಗಿದ್ದು , ಆರೋಪಿ ಬಿ.ಎಂ.ಜ್ಯೋತಿ ಪಿ. ವೀರೇಶ್‌ ಅವರ ಪತ್ನಿಯಾಗಿದ್ದರು .

(Murder case) A gruesome incident took place in Vidya Nagar of Harihar Nagar, Davangere district, where the daughter-in-law and father-in-law were attacked and killed by throwing hot water and chili powder on them due to a family dispute. P. Sivakumar (70 years) is the person in the murder case.

Comments are closed.