Road Accident : ಹೊತ್ತಿ ಉರಿದ ಮುಂಬೈ – ಮಂಗಳೂರು ಖಾಸಗಿ ಬಸ್ : ತಪ್ಪಿದ ಬಾರೀ ದುರಂತ

ಹುಬ್ಬಳ್ಳಿ : ಬಸ್‌ನ ಹಿಂದಿನ ಚಕ್ರ ಸ್ಫೋಟಗೊಂಡ ಪರಿಣಾಮವಾಗಿ ಖಾಸಗಿ ಬಸ್‌ (Mumbai-Mangalore bus Accident)ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಭಾರಿ ದುರಂತದಿಂದ ಪಾರಾಗಿದೆ. ಹುಬ್ಬಳ್ಳಿ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಬೆಳಗಿನ ಜಾವ 2.45ಕ್ಕೆ ಈ ಘಟನೆ ಸಂಭವಿಸಿದೆ. ಮುಂಬೈನಿಂದ ಮಂಗಳೂರಿನ ಕಡೆಗೆ ಐಷಾರಾಮಿ ಬಸ್‌ ಹೊರಟಿತ್ತು. ಚಾಲಕ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಒಳಗಿದ್ದ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾನೆ.

ಮುಂಬೈನಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ 51/6293 ರೇಷ್ಮಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಅಗ್ನಿ ಅವಘಡಕ್ಕೆ ಈಡಾಗಿದೆ. ಬಸ್ಸಿನ ಹಿಂದಿನ ಟೈರ್‌ ಸ್ಫೋಟಗೊಂದು ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ನಡೆದ ಘಟನೆಯಲ್ಲಿ ಬಸ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನಿನ್ನೆ ಮುಂಬೈನಿಂದ ಮಂಗಳೂರಿನ ಕಡೆಗೆ ಹೋಗುತ್ತಿರುವಾಗ ಹುಬ್ಬಳ್ಳಿ – ಧಾರವಾಡ ಬೈಪಾಸ್‌ ಕಾರಾವಾರ ರಸ್ತೆಯ ಬಳಿ ಬಸ್ಸಿನ ಹಿಂದಿನ ಚಕ್ರ ಬ್ಲಾಸ್ಟ್‌ ಆಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಾಲಕ ಬಸ್ಸನ್ನು ತಕ್ಷಣವೇ ಸಿಲ್ಲಿಸಿ ಬಸ್ಸಿನಲ್ಲಿದ್ದ ಮೂವತ್ತಕ್ಕೂ ಅಧಿಕ ಪ್ರಯಾಣಿಕರನ್ನು ಇಳಿಸಿದ್ದಾರೆ.

ಇದನ್ನೂ ಓದಿ : Crime News: ಪತಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದ ಪತ್ನಿ ಮತ್ತು ಪ್ರಿಯಕರ

ಇದನ್ನೂ ಓದಿ : Rajiv Gandhi assassination: 3 ದಶಕಗಳ ಬಳಿಕ ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯ: ನಳಿನಿ ಶ್ರೀಹರನ್ ಏನಂದ್ರು ಗೊತ್ತಾ

ಇದನ್ನೂ ಓದಿ : Youtube medicine: ಯೂಟ್ಯೂಬ್ ನೋಡಿ ಮನೆಯಲ್ಲೇ ಔಷಧಿ ಮಾಡಿ ಕುಡಿಯುವ ಮುನ್ನ ಈ ಸ್ಟೋರಿ ಓದಲೇಬೇಕು..

ಇದನ್ನೂ ಓದಿ : The teacher committed suicide : ಆನ್ ಲೈನ್‌ ನಲ್ಲಿ ಹಣ ಕಳೆದುಕೊಂಡು ಶಿಕ್ಷಕಿ ಆತ್ಮಹತ್ಯೆಗೆ ಶರಣು

ಬಸ್‌ನ ಟೈರ್‌ ಸ್ಫೋಟಗೊಂಡ ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣವಾಗಿ ಬಸ್ಸನ್ನು ಆವರಿಸಿಕೊಂಡ ಪರಿಣಾಮವಾಗಿ ಖಾಸಗಿ ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗುತ್ತದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿಯುವಂತಾಗಿದೆ. ಸ್ವಲ್ಪ ಯಾಮಾರಿದರೂ ಭಾರೀ ದುರಂತ ನಡೆಯುತ್ತಿತ್ತು. ಈ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Road Accident: Mumbai-Mangalore private bus caught fire: Another tragedy

Comments are closed.