murder : ಅನೈತಿಕ ಸಂಬಂಧಕ್ಕೆ ಶುರುವಾದ ಅನುಮಾನ ಕೊಲೆಯಲ್ಲಿ ಅಂತ್ಯ: ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಮಂಗಳೂರು : murder immoral relationship : ಪತ್ನಿಯ ಮೇಲೆ ಪದೇ ಪದೇ ಸಂಶಯವನ್ನು ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ ಆಕೆಯನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆಯು ಮಂಗಳೂರಿನ ಉಳ್ಳಾಲ ಪೊಲೀಸ್​ ಠಾಣಾ ವ್ಯಾಪ್ತಿಯ ಸೋಮೇಶ್ವರ ಪಿಲಾರ್​ ಎಂಬಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು ಶೋಭಾ ಪೂಜಾರಿ(46) ಎಂದು ಗುರುತಿಸಲಾಗಿದೆ. ಈಕೆಯ ಪತಿ ಶಿವಾನಂದ (55) ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

26 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಪೈಂಟರ್​ ಆಗಿದ್ದ ಶಿವಾನಂದ ತನ್ನ ಪುತ್ರಿಯನ್ನು ವಿವಾಹ ಮಾಡಿಸಿದ್ದ. ಪುತ್ರ ಕಾರ್ತಿಕ್​ ಹಾಗೂ ಪತ್ನಿ ಶೋಭಾಳ ಜೊತೆಯಲ್ಲಿ ಮನೆಯಲ್ಲಿ ವಾಸವಿದ್ದ, ತನ್ನ ಪತ್ನಿ ಶೋಭಾಗೆ ಅನೈತಿಕ ಸಂಭವಿದೆ ಎಂಬ ಅನುಮಾನ ಈತನನ್ನು ಎಂದಿಗೂ ಕಾಡುತ್ತಿತ್ತು. ಈ ವಿಚಾರಕ್ಕೆ ಇಬ್ಬರೂ ಪ್ರತಿದಿನ ಜಗಳ ಮಾಡುತ್ತಿದ್ದರು ಎಂದು ಪುತ್ರ ಕಾರ್ತಿಕ್​ ಮಾಹಿತಿ ನೀಡಿದ್ದಾರೆ.

ನಿನ್ನೆ ದೀಪಾವಳಿ ಹಬ್ಬದ ಪ್ರಯುಕ್ತ ಮನೆಗೆ ದೀಪಗಳನ್ನು ಹಚ್ಚಿ ಸಂಭ್ರಮಿಸಿದ್ದ ಈ ದಂಪತಿ ಬೆಳಗಾಗೋವಷ್ಟರಲ್ಲಿ ಮತ್ತೆ ಜಗಳ ಶುರುವಿಟ್ಟಿದ್ದರು. ಪೋಷಕರ ಜಗಳವನ್ನು ದಿನಾ ಕೇಳಿ ಕೇಳಿ ಸುಸ್ತಾಗಿದ್ದ ಕಾರ್ತಿಕ್​ ಎಂದಿನಂತೆ ತನ್ನ ಕೆಲಸಕ್ಕೆಂದು ಮನೆಯಿಂದ ಹೊರನಡೆದಿದ್ದ. ಆದರೆ ದಂಪತಿಯ ನಡುವಿನ ಇಂದಿನ ಜಗಳ ಮಾತ್ರ ಪ್ರತಿದಿನದಂತೆ ಕೊನೆಗಾಣಲಿಲ್ಲ. ಜಗಳ ವಿಕೋಪಕ್ಕೆ ತಿರುಗಿದ್ದೇ ತಡ ಶಿವಾನಂದ ತನ್ನ ಪತ್ನಿಯ ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಾನೆ.

ಪತಿಯೊಂದಿಗೆ ಜಗಳ ಮಾಡುತ್ತಿದ್ದ ಶೋಭಾ ಎಲ್ಲಾ ವಿಚಾರವನ್ನು ತನ್ನ ಸಹೋದರನ ಬಳಿ ಹೇಳಿಕೊಳ್ಳುತ್ತಿದ್ದಳು. ಹೀಗಾಗಿ ಈಕೆಯ ಸಹೋದರನಿಗೆ ಕರೆ ಮಾಡಿದ ಶಿವಾನಂದ ತಾನು ಸಾಯುತ್ತಿರುವ ವಿಚಾರವನ್ನು ತಿಳಿಸಿದ್ದಾನೆ. ಸಂಬಂಧಿಗಳು ಮನೆಗೆ ಆಗಮಿಸುವಷ್ಟರ ಒಳಗಾಗಿ ಈತ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಠಾಣಾ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನು ಓದಿ : woman dressed up as a panjurli daiva:ಕಾಂತಾರ ಸಿನಿಮಾ ವೀಕ್ಷಿಸಿ ದೈವದಂತೆ ವೇಷ ಕಟ್ಟಿ ಹುಚ್ಚಾಟ ಮೆರೆದ ಯುವತಿ : ತೀವ್ರ ಆಕ್ರೋಶ

ಇದನ್ನೂ ಓದಿ : BCCI offers equal pay:ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ : ಬಿಸಿಸಿಐ ಐತಿಹಾಸಿಕ ಘೋಷಣೆ

Suspicion of an immoral relationship ends in murder: Husband commits suicide by killing his wife

Comments are closed.