Thumkur accident: ಕ್ಯಾಂಟರ್‌ ಗೆ ಕಾರು ಢಿಕ್ಕಿ: ನಾಲ್ವರು ಸಾವು

ತುಮಕೂರು: (Thumkur accident) ಕ್ಯಾಂಟರ್‌ ಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯ ಕೊಂಡ್ಲಿ ಕ್ರಾನ್‌ ಬಳಿ ನಡೆದಿದೆ. ನಾರಾಯಣಪ್ಪ (50 ವರ್ಷ), ನಾಗರತ್ನ(45 ವರ್ಷ), ಸಾಗರ್(25 ವರ್ಷ), ಹಾಗೂ ರಾಜಣ್ಣ ಎನ್ನುವವರು ಮೃತ ದುರ್ದೈವಿಗಳು.

ಕೆಬಿ ಕ್ರಾಸ್‌ ನಿಂದ ತುಮಕೂರು ಕಡೆಗೆ ಬರುತ್ತಿದ್ದ ಕ್ಯಾಂಟರ್‌ ಚಿಕ್ಕನಾಯಕನಹಳ್ಳಿ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ (Thumkur accident) ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಸುತ್ತಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಮಹಿಳೆ ಗಂಭೀರ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಮೂಲತಃ ಚಿಕ್ಕನಾಯಕನಹಳ್ಳಿಯ ನಡುವನಹಳ್ಳಿಯವರು ಎಂದು ಗುರುತಿಸಲಾಗಿದೆ.

ಮೃತರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದ್ದು, ಅಪಘಾತಕ್ಕೀಡಾದ ಕಾರಿನಲ್ಲಿ ಸಾಕು ನಾಯಿ ಕೂಡ ಇತ್ತು ಎನ್ನಲಾಗಿದೆ. ಆದರೆ ಅಪಘಾತದಲ್ಲಿ ಸಾಕು ನಾಯಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ. ಪ್ರಕರಣದ ಕುರಿತು ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Escort service website: ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಪತ್ನಿ ಮತ್ತು ತಂಗಿಯ ಫೋಟೋ ಕಂಡು ವ್ಯಕ್ತಿಯೊಬ್ಬ ಬೆಚ್ಚಿಬಿದ್ದಿದ್ದು ಯಾಕೆ ಗೊತ್ತಾ..?

ಇದನ್ನೂ ಓದಿ : Birbhum accused’s death: ಕಸ್ಟಡಿಯಲ್ಲಿದ್ದ ಹಿಂಸಾಚಾರ ಪ್ರಕರಣದ ಆರೋಪಿ ಸಾವು : ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

ಇದನ್ನೂ ಓದಿ : Bus-truck collision: ಬಸ್ ಗೆ ಟ್ರಕ್‌ ಢಿಕ್ಕಿ: 6 ಮಂದಿ ಸಾವು, 21 ಜನರಿಗೆ ಗಾಯ

ಇದನ್ನೂ ಓದಿ : Dehli acid attack: 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ : ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ

(Thumkur accident) A car collided with a canter, killing four people on the spot near Kondli Kran in Tumkur district, Gubbia. Narayanappa (50 years old), Nagaratna (45 years old), Sagar (25 years old), and Rajanna are the deceased.

Comments are closed.