Krishna Janmashtami: ಹೇರಾಡಿ ಬಾರ್ಕೂರು ನಲ್ಲಿ  ಮುದ್ದುರಾಧಾ  ಮತ್ತು ಮುದ್ದುಕೃಷ್ಣ ಸ್ಪರ್ಧೆ

Krishna Janmashtami: ಶ್ರೀ ವಿಧ್ಯೇಶ  ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ನಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ  LKG.ಮತ್ತು  UKG  ವಿದ್ಯಾರ್ಥಿ ಗಳಿಗಾಗಿ  ಮುದ್ದುಕೃಷ್ಣ  ಮತ್ತು ಮುದ್ದುರಾಧಾ ವೇಷ ಸ್ಪರ್ಧೆ ಯನ್ನು  ಏರ್ಪಡಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು  ಶಾಲಾ ಮುಖ್ಯೋಪಾಧ್ಯಾರಾದ ಪ್ರೀತಿ ರೇಖಾ  ವಹಿಸಿದ್ದರು,

SRSNHP ಶಾಲೆಯಲ್ಲಿ  ಮುಖ್ಯ ಶಿಕ್ಷಕಿ ಯಾಗಿ ನಿವೃತಿ ಹೊಂದಿದ ಗೌರಿ ಟೀಚರ್ ರವರು  ದೀಪ ಬೆಳಗಿಸುವ  ಮೂಲಕ   ಸ್ಪರ್ಧೆ ಯನ್ನು  ಉದ್ಘಾಟಿಸಿ,  “ಕೃಷ್ಣಮತ್ತು ರಾಧೆ ಯ ವೇಷ ತೊಟ್ಟ ಮಕ್ಕಳು ನಮ್ಮನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗಿ  ಕೃಷ್ಣ ಮತ್ತು ರಾಧಾ ಲೀಲೆಯನ್ನು  ತೋರಿಸಿದರು “ಎಂದಿದ್ದಾರೆ.  ಸ್ಪರ್ಧೆ ಯ  ತೀರ್ಪುಗಾರ ರಾಗಿ ಉಡುಪಿಯ   ಮಾಸ್ಟರ್  ಡ್ರಾಮ್ ದ  ಭರತ ನಾಟ್ಯ ಶಿಕ್ಷಕಿ ಕಲ್ಯಾಣಿ ಮತ್ತು   S.V.V.N ಹೇರಾಡಿ  ಶಾಲೆಯಲ್ಲಿ  ಭರತ ನಾಟ್ಯ ಶಿಕ್ಷಕಿ ಯಾದ ಸ್ಮಿತಾ ಶಾಸ್ತ್ರೀ ರವರು ಕಾರ್ಯ ನಿರ್ವಹಿಸಿದ್ದರು.  ಶಾಲೆಯ 32 ಮಕ್ಕಳು  ವೇಷ ತೊಟ್ಟು   ರಂಜಿಸಿದರು. 

ಈ ಕಾರ್ಯಕ್ರಮ ವನ್ನು  ಶಾಲಾ ಶಿಕ್ಷಕಿ ರಾದ ಚಂದ್ರ ಕಲಾ, ಕುಸುಮ, ಶುಭ ರಾವ್, ಶಾಲಾ ಕಚೇರಿ  ಸಹಾಯಕರಾದ ನಾಗರಾಜ್ ಶೇರಿಗಾರ್  ಮತ್ತು  ಅಟೆಂಡರ್ ವಿಜಯ ಪೂಜಾರಿ ,  ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು. ವಿದ್ಯಾರ್ಥಿ ಗಳಿಗೆ  ಮಾಸ್ತರ್ ಡ್ರಾಮಾ ದವರು  ವೇಷಭೂಷಣದ  ವ್ಯವಸ್ಥೆ  ಮಾಡಿಸಿದರು. ಭಾಗವಹಿಸಿದ  ಎಲ್ಲಾ  ಮಕ್ಕಳಿಗೂ  ವಿಶೇಷ ರೀತಿಯ ಉಡುಗೊರೆ ನೀಡಲಾಯಿತು.

ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

ಇದನ್ನೂ ಓದಿ : WhatsApp Unread Chat Filter : ವಾಟ್ಸ್‌ಅಪ್‌ನ ಹೊಸ ಫೀಚರ್‌ ‘ಅನ್‌ರೀಡ್‌ ಚಾಟ್‌ ಫಿಲ್ಟರ್‌’ : ಇನ್ನು ಯಾವುದೇ ಚಾಟ್‌ ಕಳೆದು ಹೋಗೋ ಚಾನ್ಸೇ ಇಲ್ಲ

Krishna Janmashtami svvn School Barkur

Comments are closed.