ಶನಿವಾರ, ಜೂನ್ 14, 2025
Homehoroscopeನಿತ್ಯಭವಿಷ್ಯ : 05-03-2020

ನಿತ್ಯಭವಿಷ್ಯ : 05-03-2020

- Advertisement -

ಮೇಷರಾಶಿ
ಆರ್ಥಿಕವಾಗಿ ಆಕಸ್ಮಿಕ ಧನಪ್ರಾಪ್ತಿಯಾಗಲಿದೆ. ಹಲವು ಸಮಯದ ಸಮಸ್ಯೆ ಪರಿಹಾರ, ಪಿತ್ರಾರ್ಜಿತ ಆಸ್ತಿ ನಷ್ಟ, ತಂದೆ ಶತ್ರುವಾಗುವರು, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ಆಹಾರ ಸೇವನೆಯಲ್ಲಿ ಜಾಗೃತೆ, ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ, ಅಲಂಕಾರಕ್ಕಾಗಿ ಖರ್ಚು, ಆದರೂ ನೆಮ್ಮದಿಯ ದಿನ

ವೃಷಭರಾಶಿ
ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಅನುಕೂಲ, ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಹೃದಯ ಸಂಬಂಧಿತ ಸಮಸ್ಯೆ, ಸಾಲಗಾಲರೊಂದಿಗೆ, ಶತ್ರು ಕಲಹ, ನೆರೆಹೊರೆ, ಬಂಧುಗಳು ಸಹಕಾರ, ಸಹೋದರಿಯಿಂದ ಲಾಭ, ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ಶಮನ. ತಾಳ್ಮೆ ಅಗತ್ಯ.

ಮಿಥುನರಾಶಿ
ಉದ್ಯೋಗ, ಅಲಂಕಾರ ವಸ್ತುಗಳಿಗಳ ಖರೀದಿಗೆ ಖರ್ಚು, ಸಂಗಾತಿಯಿಂದ ಲಾಭ, ಪಾಲುದಾರಿಕೆ ವ್ಯವಹಾರದಿಂದ ಧನಾಗಮನ, ಸ್ಥಿರಾಸ್ತಿ ವಿಷಯದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ,. ವ್ಯವಹಾರಿಕ ಅಪವಾದ, ಹಿರಿಯರ ಸಲಹೆಯಿಂದ ಮಾನಸಿಕ ನೆಮ್ಮದಿ. ಮಾತಿನ ಮೇಲೆ ಹಿಡಿತವಿರಲಿ.

ಕಟಕರಾಶಿ
ನಿರೀಕ್ಷೆಯಂತೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಸ್ಥಿರಾಸ್ತಿ ಖರೀದಿ, ಗೃಹನಿರ್ಮಾಣದ ಬಗ್ಗೆ ಯೋಚನೆ, ಸ್ವಯಂಕೃತ ಅಪರಾಧಗಳಿಂದ ಶತ್ರುತ್ವ, ಸ್ನೇಹಿತರೊಂದಿಗೆ ವಿವಾದ. ದುಡುಕಿನ ಕೆಲಸದಿಂದ ಮನಸ್ಸಿಗೆ ನೋವು. ಶೀತ, ಕಫ, ಮಹಿಳೆಯರಿಂದ ನಷ್ಟ, ಸಂಕಷ್ಟ ಅನುಭವಿಸುವಿರಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ.

ಸಿಂಹರಾಶಿ
ಉದ್ಯೋಗ ಬದಲಾವಣೆಗೆ ಯೋಚನೆ, ಹೊಸ ಉದ್ಯೋಗ ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯ, ಮಕ್ಕಳಿಗಾಗಿ ಅಲಂಕಾರಿಕ ವಸ್ತುಗಳಿಗೆ ಖರ್ಚು, ವಾಹನ ಸಂಚಾರದ ಎಚ್ಚರಕೆ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕವಾಗಿ ಅಧಿಕ ಖರ್ಚುವೆಚ್ಚ.

ಕನ್ಯಾರಾಶಿ
ಶನಿಯ ಪ್ರಭಾವದಿಂದಾಗಿ ಮಾನಸಿಕ ನೆಮ್ಮದಿಯನ್ನು ಕಳಕೊಳ್ಳಲಿದ್ದೀರಿ, ಧನವ್ಯಯವಾಗದಂತೆ ಜಾಗ್ರತೆ ವಹಿಸಿರಿ, ಭೂಮಿ, ಮನೆ, ವಾಹನ ಕೊಳ್ಳುವ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ತಾಯಿಯಿಂದ, ಮಹಿಳಾ ಮಿತ್ರರಿಂದ ಅನುಕೂಲ, ಸನ್ಮಾನ, ಪ್ರಶಂಸೆ, ಹೊಗಳಿಕೆಗೆ ಪಾತ್ರರಾಗುವಿರಿ. ಆರೋಗ್ಯದ ಬಗ್ಗೆ ಜಾಗೃತೆವಹಿಸಿ.

ತುಲಾರಾಶಿ
ಆರ್ಥಿಕವಾಗಿ ಅಭಿವೃದ್ದಿಯಿಂದ ಮುನ್ನಡೆ, ಸ್ವಂತ ಉದ್ಯಮ ವ್ಯವಹಾರಗಳಲ್ಲಿ ನಷ್ಟ, ಅನಾರೋಗ್ಯದಿಂದ ಆಸ್ಪತ್ರೆ ಅಲೆದಾಟ, ಅಜೀರ್ಣ, ಉದ್ಯೋಗದಲ್ಲಿ ಆಕಸ್ಮಿಕ ಪ್ರಯಾಣ, ಶತ್ರುಗಳಿಂದ ಸವಾಲು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ಸಂಚಾರದಲ್ಲಿ ಜಾಗೃತೆ, ವಾಹನ ಖರೀದಿ ಯೋಗ,

ವೃಶ್ಚಿಕರಾಶಿ
ಗೃಹ ನಿರ್ಮಾಣ ಕಾರ್ಯಕ್ಕೆ ಮನಸ್ಸು,ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಐಷಾರಾಮಿ ಜೀವನ, ಮೃಷ್ಟಾನ್ನ ಭೋಜನ, ಮನರಂಜನೆ, ಪಿತ್ರಾರ್ಜಿತ ಕಲಹಗಳಿಗೆ ಮುಕ್ತಿ. ಗುರುಬಲದಿಂದ ಮನೋಕಾಮನೆಗಳು ನೆರವೇರುತ್ತದೆ. ಶತ್ರುಗಳ ಕಾಟ, ನಿಮಗಿದು ಪರೀಕ್ಷಾ ಸಮಯ, ಸ್ನೇಹಿತರು ಸಹಾಯ ಕೇಳುವರು, ತಾಳ್ಮೆ ಅಗತ್ಯ.

ಧನಸ್ಸುರಾಶಿ
ಸಿಟ್ಟಿನಿಂದ ಕೆಲಸಕ್ಕೆ ಹಾನಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಭ, ಅನಾವಶ್ಯಕ ಧನವ್ಯಯ, ಅನಿರೀಕ್ಷಿತ ರೂಪದಲ್ಲಿ ಪುಣ್ಯಕ್ಷೇತ್ರ ದರ್ಶನ, ಚರ್ಮ ಸಮಸ್ಯೆ, ಕೆಮ್ಮ, ಶೀತ, ಕಾಯಿಲೆಗಳಿಂದ ನರಳಾಟ, ಶತ್ರುಗಳು ಹಿತೈಷಿಗಳಾಗುವ ಸಂದರ್ಭ, ಅತಿಯಾದ ಮೋಜುಮಸ್ತಿಯಿಂದ ಎಡವಟ್ಟು. ಸಿಟ್ಟಿನಿಂದ ಆರ್ಥಿಕ ನಷ್ಟ, ತಾಳ್ಮೆ ಅಗತ್ಯ.

ಮಕರರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ಆತ್ಮಸ್ಥೈರ್ಯದಿಂದ ಮುಂದುವರಿಯಿರಿ. ಉದ್ಯೋಗ ಬದಲಾವಣೆಯಿಂದ ಲಾಭ, ಪ್ರಯತ್ನ ಬಲದಿಂದ ಯಶಸ್ಸು, ಮನೆಯವರ ಸಹಕಾರದಿಂದ ಸಾಂಸಾರಿಕ ಸುಖ, ಹಿರಿಯ ಆರೋಗ್ಯದ ಬಗ್ಗೆ ಜಾಗೃತೆ, ಸಾಲ ತೀರಿಸುವುದರಿಂದ ಮನಸಿಗೆ ನೆಮ್ಮದಿ. ಸಂತಾನ ದೋಷಗಳು ಕಾಡುವುದು, ಗರ್ಭಿಣಿಯರು ಎಚ್ಚರವಹಿಸಬೇಕು, ಮೋಜು ಮಸ್ತಿ, ಜೂಜು ದುಷ್ಚಟಗಳಿಂದ ನಷ್ಟ.

ಕುಂಭರಾಶಿ
ಕುಟುಂಬಿಕ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ, ಭೂ ಖರೀದಿಗೆ ಗೃಹ ನಿರ್ಮಾಣಕ್ಕೆ ಅನುಕೂಲವಾಗುತ್ತದೆ, ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ, ಆರ್ಥಿಕ ಸಂಕಷ್ಟ, ಸ್ಥಿರಾಸ್ಥಿಗಾಗಿ ಕೋರ್ಟ್ ಮೆಟ್ಟಿಲು, ಅಪಘಾತ, ಮಿತ್ರರಿಂದ ನಷ್ಟ, ಅಧಿಕಾರಿಗಳಿಗೆ ಮುಂಭಡ್ತಿ, ತಾಯಿಯಿಂದ ಬೈಗುಳ, ಒಂಟಿತನ ಕಾಡಲಿದೆ.

ಮೀನರಾಶಿ
ಉದ್ಯೋಗದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ತುಸು ಮನಸಿಗೆ ನೆಮ್ಮದಿಯಿದ್ದರೂ ಪ್ರಯತ್ನ ಬಲ ಹೆಚ್ಚಿಸಿ, ದೂರವಾದವರು ಮರಳಿ ಬರುತ್ತಾರೆ, ಕಂಕಣ ಬಲ ಕೂಡಿಬರಲಿದೆ. ಮಾತಿನ ಮೇಲೆ ಹಿಡಿತವಿರಲಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ, ನ್ಯಾಯಾಲಯಕ್ಕಾಗಿ ಅಲೆದಾಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular