ನಿತ್ಯಭವಿಷ್ಯ : 22-12-2020

ಮೇಷರಾಶಿ
ಸಾಮಾಜಿಕವಾಗಿ ಗೌರವ, ಘನತೆ ಇದೆ., ಕೃಷಿ, ಸ್ಥಿರ ಸೊತ್ತು, ಭೂಮಿ ಖರೀದಿಗಾಗಿ ಧನವಿನಿಯೋಗ, ನೀವು ಮಾಡಿದ ಕೆಲಸಕ್ಕೆ ಹಿರಿಯರ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಲಿದೆ, ವಿರೋಧಿಗಳಿಂದ ಕುತಂತ್ರ, ಅಲ್ಪ ಪ್ರಗತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ

ವೃಷಭರಾಶಿ
ದಾಂಪತ್ಯದಲ್ಲಿ ಪ್ರೀತಿ, ಅಭಿವೃದ್ಧಿ ಕುಂಠಿತ, ಕಚೇರಿಯ ಕೆಲಸದಲ್ಲಿ ಸಣ್ಣದೊಂದು ತಪ್ಪು , ಮನಸ್ತಾಪ, ಸ್ಥಾನಭ್ರಂಶಕ್ಕೂ ಎಡೆ ಮಾಡೀತು, ಗೆಳೆಯರು, ಆತ್ಮೀಯರು, ಹಿತಬಂಧುಗಳು ನಿಮ್ಮಿಂದ ಸಹಾಯ ಯಾಚಿಸುವರು, ದಾಂಪತ್ಯದಲ್ಲಿ ಸುಖ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಿತ್ರರಿಂದ ಕೆಡಕು, ಮನಕ್ಲೇಷ

ಮಿಥುನರಾಶಿ
ದೇವತಾ ಪೂಜಾಕಾರ್ಯಗಳಿಂದ, ಧರ್ಮಕಾರ್ಯಗಳಿಂದ ಪುಣ್ಯ ಸಂಪಾದನೆ, ಪ್ರವಾಸ ಯಾ ಯಾತ್ರಾನುಭವವೂ ವಿದ್ಯಾಭ್ಯಾಸಗಳಿಗೆ ಪಠ್ಯೇತರ ಚಟುವಟಿಕೆಗಳಿಂದ ಸಂತೋಷವಾಗಲಿದೆ, ಮಕ್ಕಳಿಂದ ಸಹಾಯ, ಕಾರ್ಯ ಬದಲಾವಣೆ, ತಾಯಿಯಿಂದ ಬುದ್ಧಿ ಮಾತು, ಮನಸ್ಸಿನಲ್ಲಿ ದುಗುಡ.

ಕಟಕರಾಶಿ
ಬಂಧುಗಳ ಆಗಮನದಿಂದ ಸಂತಸ, ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸವಾಗಲಿದೆ. ಮಾತೆಗೆ ಅನಾರೋಗ್ಯವಾದೀತು. ಖರ್ಚುವೆಚ್ಚ ಹೆಚ್ಚಾಗಲಿದೆ. ದೇವರ ಆರಾಧನೆಯಿಂದ ಇಷ್ಟ ಸಿದ್ಧಿ . ದುರಭ್ಯಾಸಕ್ಕೆ ಹಣ ವ್ಯಯ, ಮನೆಯಲ್ಲಿ ಅಶಾಂತಿ, ವಾಹನ ಅಪಘಾತ.

ಸಿಂಹರಾಶಿ
ಆರೋಗ್ಯದಲ್ಲಿ ಏರುಪೇರು, ಪರರ ಧನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಶುಭ, ಮಾತಿನ ಮೇಲೆ ಹಿಡಿತವಿರಲಿ, ಆದಾಯವು ಸ್ವಲ್ಪ ಏಳಿಗೆ ಪಥದಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಳಿಗೆ ಇರುತ್ತದೆ.

ಕನ್ಯಾರಾಶಿ
ಮಕ್ಕಳ ಅಗತ್ಯಕ್ಕೆ ಖರ್ಚು, ಗುರುಹಿರಿಯರ ಭೇಟಿ, ಮಾನಸಿಕ ವ್ಯಥೆಗೆ ಕಾರಣವಾಗುವ ಕಲಹ, ಆದಾಯದ ತಡೆ ಉಂಟಾಗಿ ನೆಮ್ಮದಿ ಕೆಡಿಸುವನು. ಪಿತ್ತ ಪ್ರಕೋಪವು ಕಂಡುಬಂದೀತು. ಋಣಭಾದೆ, ಶತ್ರುನಾಶ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.

ತುಲಾರಾಶಿ
ದಾಯಾದಿ ಕಲಹ, ಪರ ಸ್ತ್ರೀಯರಿಂದ ಸಹಾಯ, ಉನ್ನತ ಸ್ಥಾನಮಾನ, ಆತ್ಮೀಯರ ಆಗಮನ ಹರುಷ ತಂದೀತು. ಪ್ರವಾಸ, ಯಾತ್ರಾದಿಗಳಿಂದ ಸಂತೃಪ್ತಿ, ಸರ್ಕಾರಿ ಉದ್ಯೋಗಸ್ಥರಿಗೆ ಸ್ಥಾನಪ್ರಾಪ್ತಿ ಇದ್ದರೂ ಕಿರಿಕಿರಿ ಜೊತೆಗೆ ವಿರೋಧಿಗಳಿಂದ ಅಸೂಯೆ ವ್ಯಕ್ತವಾದೀತು, ಅನ್ಯ ಜನರಲ್ಲಿ ವೈಮನಸ್ಸು, ಕೈ ಕಾಲಿಗೆ ಪೆಟ್ಟು ಎಚ್ಚರ.

ವೃಶ್ಚಿಕರಾಶಿ
ವ್ಯಾಪಾರದಲ್ಲಿ ಧನ ಲಾಭ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ವಿನಾಕಾರಣ ನಿಂದನೆ, ಅಕಾಲ ಭೋಜನ, ಅಜೀರ್ಣದ ಉಪದ್ರವದಿಂದ ಆರೋಗ್ಯದಲ್ಲಿ ಏರುಪೇರು, ಹಿರಿಯರ ಆದಾಯ ಇತರರ ಪಾಲಾದೀತು. ವಿಲಾಸೀ ಸಾಮಾಗ್ರಿಗಳ ವ್ಯಾಪಾರದಲ್ಲಿ ಹಾನಿ ಕಡಿಮೆ. ಲಾಭ ಹೆಚ್ಚಾಗಲಿದೆ.

ಧನಸ್ಸುರಾಶಿ
ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಕೈಗೂಡಲಿದೆ, ಗೃಹ ನಿರ್ಮಾಣ ಆರಂಭ, ನಿರುದ್ಯೋಗಿಗಳಿಗೆ ಸಂದರ್ಶನವು ಲಾಭ, ಸಣ್ಣ ಪ್ರವಾಸವು ಕೂಡಿಬರಲಿದೆ. ಯತ್ನ ಕಾರ್ಯಗಳಲ್ಲಿ ವಿಘ್ನ, ನಯ ವಂಚಕರ ಮಾತಿಗೆ ಮರುಳಾಗದಿರಿ, ಹಿತ ಶತ್ರು ಭಾದೆ, ದಾಂಪತ್ಯದಲ್ಲಿ ಪ್ರೀತಿ.

ಮಕರರಾಶಿ
ದುಡುಕಿನಿಂದ ಅವಕಾಶ ಕೈ ತಪ್ಪುವುದು, ವಿದ್ಯಾರ್ಜನೆಯಲ್ಲಿ ಯಶಸ್ವಿನಿಂದಾಗಿ ವಿದ್ಯಾರ್ಥಿಗಳಿಗೆ ತೃಪ್ತಿ ದೊರಕಲಿದೆ, ಪಿತ್ತೋಷ್ಣದಿಂದ ಆರೋಗ್ಯ ಕೊಂಚ ಹದೆಗೆಟ್ಟಿàತು. ಪ್ರಯಾಣದಲ್ಲಿ ವಂಚನೆ, ಕಳ್ಳಕಾಕರ ಭೀತಿ ಇದೆ. ಜಾಗ್ರತೆ ಮಾಡಿರಿ. ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.

ಕುಂಭರಾಶಿ
ಶುಭ ಸುದ್ದಿ ಕೇಳುವಿರಿ, ಕೃಷಿಯಲ್ಲಿ ನಷ್ಟ, ಕೋಪ ಜಾಸ್ತಿ, ಶತ್ರುಭಾದೆ, ಕೆಲಸ ಕಾರ್ಯಗಳು ನಿಧಾನ, ಹಣ್ಣು ಹಂಪಲು, ಸಿಹಿತಿಂಡಿ, ಪಾನೀಯ ಪದಾರ್ಥ ವ್ಯಾಪಾರಿಗಳಿಗೆ ಸ್ವಲ್ಪ ಲಾಭಾಂಶ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರವಿರುತ್ತದೆ. ಸುಖ, ನೆಮ್ಮದಿ, ಭಾಗ್ಯಾಭಿವೃದ್ಧಿ ಇದೆ.

ಮೀನರಾಶಿ
ವ್ಯಾಪಾರಿಗಳಿಗೆ ಅಧಿಕ ಲಾಭ, ರಕ್ಷಣಾ ಇಲಾಖೆಯ ನೌಕರರಿಗೆ ಉನ್ನತಿ, ವಾದ ವಿವಾದ ನ್ಯಾಯಾಲಯ ದರ್ಶನಕ್ಕೆ ಅವಕಾಶ ಕೊಟ್ಟಿತು, ಬಾಕಿ ವಸೂಲಿ, ದೂರ ಪ್ರಯಾಣ, ವಾಹನ ಖರೀದಿ, ಮನಃಶಾಂತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವಿಶೇಷ ಲಾಭ.

Comments are closed.