ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 23-07-2020

ನಿತ್ಯಭವಿಷ್ಯ : 23-07-2020

- Advertisement -

ಮೇಷರಾಶಿ
ಆಕಸ್ಮಿಕ ದುರ್ಘಟನೆ, ಮಾನಸಿಕ ವ್ಯಥೆ-ಆತಂಕ, ವಾಹನ ಚಾಲನೆಯಲ್ಲಿ ಎಚ್ಚರ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್‍ಗಳಿಗೆ ಓಡಾಟ. ಶುಭಾಶುಭ ಮಿಶ್ರ ಫ‌ಲಗಳಿಂದ ತಾತ್ಕಾಲಿಕ ಮಾನಸಿಕ ಸಮಾಧಾನ ಸಿಗಲಿದೆ. ವಿವಾಹಾದಿ ಮಂಗಳ ಕಾರ್ಯಾಸಕ್ತಿ ಧನಾಗಮನ ಚೇತರಿಕೆ ತರುತ್ತದೆ.

ವೃಷಭರಾಶಿ
ದೃಢ ಮನಸ್ಸಿನಿಂದ ಮುಂದುವರಿದಲ್ಲಿ ಯಶಸ್ಸು ದೊರಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಭಾಗ್ಯ ದೊರಕಲಿದೆ. ಸ್ಥಾನಮಾನಗಳಲ್ಲಿ ಪ್ರಗತಿ ಇರುತ್ತದೆ. ದಾಂಪತ್ಯದಲ್ಲಿ ಆಲಸ್ಯ, ಪರಿಚಯಸ್ಥರಿಂದ ಸಹಕಾರ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ ಒಲಿಯುವುದು.

ಮಿಥುನರಾಶಿ
ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ, ಕಾರ್ಯಕ್ಷೇತ್ರದಲ್ಲಿ ವಿಸ್ತರಣೆಗೆ ಹಲವಾರು ಅವಕಾಶಗಳಿರುತ್ತದೆ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಮುನ್ನಡೆಗೆ ಸಾಧಕವಾಗಲಿದೆ. ದಿನಾಂತ್ಯ ಶುಭ ವಾರ್ತೆ. ಕುಟುಂಬಸ್ಥರೊಂದಿಗೆ ಪ್ರಯಾಣ ಆಲೋಚನೆ, ನೀವಾಡುವ ಮಾತಿನಿಂದ ಸಮಸ್ಯೆ, ಶತ್ರುಗಳ ಬಾಧೆ.

ಕಟಕರಾಶಿ
ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ಕುಟುಂಬ ತಾಪತ್ರಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿರಿ. ಆಗಾಗ ಧನಾಗಮನದಿಂದ ಸಮಾಧಾನ ತಂದೀತು. ದೂರ ಸಂಚಾರದ ಬಗ್ಗೆ ಜಾಗ್ರತೆ ಇರಲಿ. ವಿವಾಹಕ್ಕೆ ಅಡೆತಡೆ, ಕಾಲುನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಕ್ಕಳಿಂದ ಬೇಸರ, ಸ್ನೇಹಿತರಿಂದ ತೊಂದರೆ.

ಸಿಂಹರಾಶಿ
ಅನಾವಶ್ಯಕ ಕೋಪತಾಪಗಳು ಕಂಡು ಬಂದಾವು. ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ಇದ್ದರೂ ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶತ್ರುಗಳಿಂದ ನೆಮ್ಮದಿ ಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ದೂರವಾಗಲು ಚಿಂತನೆ, ವಿಕೃತ ಆಸೆಗಳಿಗೆ ಮನಸ್ಸು.

ಕನ್ಯಾರಾಶಿ
ನೆರೆಹೊರೆಯವರೊಂದಿಗೆ ಕಿರಿಕಿರಿ, ವ್ಯಾವಹಾರಿಕ ವಿಚಾರದಲ್ಲಿ ವಂಚನೆ, ವ್ಯಾಜ್ಯಗಳು, ಪಾಲುದಾರಿಕೆಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಬೇಕಾದೀತು. ಪ್ರಯಾಣದಲ್ಲಿ ಅಪಘಾತ ಭೀತಿ ತಂದೀತು. ಅನುಕೂಲದ ವಾತಾವರಣ, ಕುಟುಂಬದಲ್ಲಿ ಮನಃಸ್ತಾಪ, ಮಕ್ಕಳಿಗೆ ಅದೃಷ್ಟ ಕೈ ಕೊಡುವುದು, ಉದ್ಯೋಗ ಸ್ಥಳದಲ್ಲಿ ಸಹಕಾರ.

ತುಲಾರಾಶಿ
ದೀರ್ಘಕಾಲದ ಸಮಸ್ಯೆಗಳು ಪರಿಹಾರ, ಆಗಾಗ ಕೆಲಸಕಾರ್ಯಗಳಿಗೆ ಅಡ್ಡಿ ಆತಂಕಗಳಿಂದ ತೊಂದರೆ ಪಡಬೇಕಾಗುತ್ತದೆ. ಬಂಧು ಮಿತ್ರರ ಸಹಕಾರ ತೋರಿ ಬಂದು ಮುನ್ನಡೆ ಇರುತ್ತದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಭೂ ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿ.

ವೃಶ್ಚಿಕರಾಶಿ
ವಾಹನ ಚಾಲನೆಯಲ್ಲಿ ಎಚ್ಚರ, ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲ. ಶುಭಮಂಗಲ ಕಾರ್ಯಗಳಿಗೆ ಸಕಾಲ. ಸಾಂಸಾರಿಕ ತಾಪತ್ರಯ ಕೆಲವೊಮ್ಮೆ ಇದ್ದರೂ ಸುಧಾರಿಸಬಹುದು. ಹಳೇ ವಸ್ತುಗಳಿಂದ ಪೆಟ್ಟಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಬಂಧುಗಳ ಏಳಿಗೆಯಿಂದ ಕೋಪ, ಮಾನಸಿಕ ವ್ಯಥೆ.

ಧನಸ್ಸುರಾಶಿ
ನಿದ್ರೆ ಅಧಿಕ, ಆತ್ಮೀಯರು ದೂರಾಗುವರು, ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಸ್ಥಾನ ಬದಲಾವಣೆ ಸದ್ಯದಲ್ಲಿ ತೋರಿ ಬರಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ಸಾಧ್ಯತೆ ಇರುತ್ತದೆ. ದಿನಾಂತ್ಯ ಶುಭವಾರ್ತೆ. ಕುಟುಂಬದಲ್ಲಿ ನಷ್ಟ, ಆಕಸ್ಮಿಕ ದುರ್ಘಟನೆ, ಮನೋರೋಗ ಬಾಧಿಸುವುದು.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕಾರ್ಯರಂಗದಲ್ಲಿ ವ್ಯಾಪಾರಿ ವರ್ಗದವರಿಗೆ ತುಸು ಚೇತರಿಕೆಯಿಂದ ಉತ್ಸಾಹ ಹೆಚ್ಚಲಿದೆ. ಕ್ರಯವಿಕ್ರಯಗಳಲ್ಲಿ ಚೇತರಿಕೆ ಇರುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ. ಗುಪ್ತ ಆಸೆಗಳು ಈಡೇರುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಶುಭ ಫಲ ಯೋಗ ಪ್ರಾಪ್ತಿ.

ಕುಂಭರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ಕಿರಿಕಿರಿ, ವರಾನ್ವೇಷಣೆ ಕಾರ್ಯದಲ್ಲಿ ಅನುಕೂಲವಾಗಲಿದೆ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಉತ್ತಮ ಬೆಳವಣಿಗೆ ಇರುತ್ತದೆ. ಪಾಲುಗಾರಿಕೆ ವಿಚಾರದಲ್ಲಿ ಅನಾವಶ್ಯಕ ಕಿರಿಕಿರಿಗಳು ಎದುರಾಗಲಿವೆ. ಸಂತಾನಭಾಗ್ಯದಲ್ಲಿ ಕೊರತೆ. ಉದ್ಯೋಗದಲ್ಲಿ ತೊಂದರೆ, ಕಾರ್ಮಿಕರು, ಬಾಡಿಗೆದಾರರಿಂದ ನಷ್ಟ, ಹಣಕಾಸು ಸಮಸ್ಯೆ.

ಮೀನರಾಶಿ
ಸಂತಾನ ದೋಷ, ತಂದೆ ಮಕ್ಕಳಲ್ಲಿ ವೈಮನಸ್ಸು, ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧದಲ್ಲಿ ಹೆಚ್ಚಿನ ಪ್ರಗತಿ ತೋರಿ ಬಂದೀತು. ಇಷ್ಟ ಜನರೊಂದಿಗೆ ಭಿನ್ನಾಭಿಪ್ರಾಯ ಬಾರದಂತೆ ಜಾಗ್ರತೆ ವಹಿಸಿರಿ. ಧೀರ್ಘ‌ಕಾಲಿಕ ಸಮಸ್ಯೆಗಳು ಸದ್ಯದಲ್ಲೇ ಪರಿಹಾರವಾಗುವ ಸಾಧ್ಯತೆಯಿದೆ. ಶತ್ರುತ್ವ ಹೆಚ್ಚಾಗುವುದು, ಕುಟುಂಬಸ್ಥರಿಂದಲೇ ಅವಕಾಶ ವಂಚಿತರಾಗುವಿರಿ, ಗೌರವಕ್ಕೆ ಧಕ್ಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular