ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 12-07-2020

ನಿತ್ಯಭವಿಷ್ಯ : 12-07-2020

- Advertisement -

ಮೇಷರಾಶಿ
ಧಾನ್ಯದ ವ್ಯವಹಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀಮಾಡುವ ಕೆಲಸದಲ್ಲಿ ಮುನ್ನಡೆ, ಪತ್ನಿಗೆ ಅನಾರೋಗ್ಯ ಕಂಡು ಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಂದ ಸಂತಸವಿದೆ. ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ, ಬೆಲೆ ಬಾಳುವ ವಸ್ತುಗಳಿಗೆ ವೆಚ್ಚ, ದಿನಸಿ ವ್ಯಾಪಾರಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಈ ವಾರ ಮಿಶ್ರ ಫಲ ಯೋಗ.

ವೃಷಭರಾಶಿ
ಮಿತ್ರರೊಂದಿಗೆ ವೈಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಆಗಾಗ ಬಂಧುಮಿತ್ರರ ಆಗಮನವಿದೆ. ಮಕ್ಕಳ ಬೇಡಿಕೆಗೆ ಮನೆಗೆ ವಾಹನ ಬರಲಿದೆ. ಮನೆಯಲ್ಲಿ ಚೋರ ಭಯವಿದೆ. ಹಳೇ ಶತ್ರುಗಳು ದಾಯಾದಿಗಳು ದ್ವೇಷ ಸಾಧಿಸಿ ಯಾರು. ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ. ಹಣ ಸಂಪಾದನೆಗೆ ಯೋಜನೆ, ಜೀವನದಲ್ಲಿ ಅಭಿವೃದ್ಧಿಯಾಗಿಲ್ಲ ಅನ್ನೋ ಚಿಂತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ನಂಬಿಕಸ್ಥರ ಕುತಂತ್ರಕ್ಕೆ ಒಳಗಾಗುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಕೆಲಸಗಳಲ್ಲಿ ತಾಳ್ಮೆ ಅಗತ್ಯ.

ಮಿಥುನರಾಶಿ
ಕುದುರಿದ ವಿವಾಹ ಪ್ರಸ್ತಾವಕ್ಕೆ ಬಿರುಕು ಮೂಡಲಿದೆ. ವ್ಯಾಪಾರ, ವೈವಾಟಿನಲ್ಲಿ ನಷ್ಟವೇ ಹೆಚ್ಚಾದೀತು. ಬಂಧುಮಿತ್ರರಿಂದ ಸಾಲಕ್ಕಾಗಿ ಯಾತನೆ ಇದೆ. ಜಾಗ್ರತೆ ಇರಲಿ. ಸಂಚಾರದಲ್ಲಿ ವಾಹನಾದಿಗಳಿಂದ ಅವಘಡ ಸಂಭವ. ಬಂಧುಗಳ ಆಗಮನ, ಆತ್ಮೀಯ ಸ್ನೇಹಿತರ ಭೇಟಿ, ಯತ್ನ ಕಾರ್ಯದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ-ಗೊಂದಲ, ಮನಸ್ಸಿನಲ್ಲಿ ಗೊಂದಲ, ಕುಟುಂಬಸ್ಥರಿಂದ ಸಲಹೆ, ಹಳೇ ಸಾಲ ತೀರಿಸುವ ಪರಿಸ್ಥಿತಿ.

ಕಟಕರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆಗೋಚರಕ್ಕೆ ಬಂದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ ಹಂತ ಹಂತವಾಗಿ ಚೇತರಿಕೆ ತರಲಿದೆ. ಶುಭಮಂಗಲ ಕಾರ್ಯಗಳಿಗಾಗಿ ಚಿಂತನೆ ಕಾರ್ಯಗತವಾದೀತು. ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ನೆಮ್ಮದಿ ಇಲ್ಲದ ಜೀವನ, ಶತ್ರು ನಾಶ, ಸ್ತ್ರೀ ಸೌಖ್ಯ, ಸುಖ ಭೋಜನ, ಪರರ ಧನ ಪ್ರಾಪ್ತಿ, ಕುಟುಂಬದಲ್ಲಿ ನೋವು, ಮಿಶ್ರ ಫಲ ಯೋಗ.

ಸಿಂಹರಾಶಿ
ತೀರ್ಥಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ನಾನಾ ರೀತಿಯ ಕೆಲಸಕಾರ್ಯಗಳು ಪೂರ್ಣತೆಯನ್ನು ಪಡೆಯಲಿವೆ. ನಿರುದ್ಯೋಗಿಗಳಿಗೆ ಉದ್ಯೋಗಭಾಗ್ಯ ಸಂತಸ ತರಲಿದೆ. ವೈಯಕ್ತಿಕವಾಗಿ ರಸಮಯಸಮಯವಿದು. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು.ಮನೆಯಲ್ಲಿ ಅಶಾಂತಿ ವಾತಾವರಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಿಗೆ ಗೌರವ ನೀಡಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಮಾತಿನ ಚಕಮಕಿ, ಸ್ತ್ರೀಯರಿಗೆ ಅನುಕೂಲವಾದ ವಾರ.

ಕನ್ಯಾರಾಶಿ
ಉದ್ಯೋಗ ಸ್ಥಳದಲ್ಲಿ ಪ್ರಶಂಸೆ, ಆತ್ಮೀಯರ ನಡವಳಿಕೆಯಿಂದ ಬೇಸರ, ನಿಶ್ಚಿತ ಗುರಿಯತ್ತ ಸಾಗುವಲ್ಲಿ ಆಗಾಗ ಅಡಚಣೆ, ತಾಪತ್ರಯಗಳು ಕಂಡು ಬಂದಾವು. ವೃತ್ತಿರಂಗದಲ್ಲಿ ಹೊಂದಾಣಿಕೆಗಳು ಮುನ್ನಡೆಗೆ ಸಾಧಕವಾಗಲಿವೆ. ಅವಿವಾಹಿತರಿಗೆ ಮಂಗಲಭಾಗ್ಯಕ್ಕೆ ಇದು ಉತ್ತಮ ಸಮಯ. ಸಂಗಾತಿ ಜೊತೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ಒತ್ತಡ, ಕೆಲಸಗಳಲ್ಲಿ ಅಧಿಕ ಒತ್ತಡ, ನೀವಾಡುವ ಮಾತುಗಳಿಂದ ಕಲಹ.

ತುಲಾರಾಶಿ
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುತ್ತಾ ಹೋಗಲಿದೆ. ಆರೋಗ್ಯದಲ್ಲಿ ಮಾತ್ರ ಹೆಚ್ಚಿನ ರೀತಿಯಲ್ಲಿ ಆಗಾಗ ತಪಾಸಣೆಯ ಅಗತ್ಯ ವಿರುತ್ತದೆ. ಕಾರ್ಯಕ್ಕೆ ಆತುರತೆಸಲ್ಲದು. ಸಾವಧಾನವಾಗಿ ಯೋಚಿಸಿ ಮುನ್ನಡೆಯಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾಟ-ಮಂತ್ರ ತಂತ್ರದ ಭೀತಿ, ಮಾನಸಿಕ ಗೊಂದಲ, ಹಣಕಾಸು ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲ.

ವೃಶ್ಚಿಕರಾಶಿ
ಗೃಹದಲ್ಲಿ ಆಪ್ತೇಷ್ಟರ ಭೇಟಿ ಸತ್ಕಾರಾದಿಗಳಿಂದ ಸಂತಸ ತಂದೀತು. ನಾನಾ ರೀತಿಯಲ್ಲಿ ದುಂದು ವೆಚ್ಚಗಳು ಅತಿರೇಕವಾದಾವು. ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಪರಿಣಾಮ ಬೀರದಂತೆ ಜಾಗ್ರತೆ ವಹಿಸುವುದು. ಆತ್ಮೀಯರಲ್ಲಿ ಮನಃಸ್ತಾಪ, ಚಂಚಲ ಮನಸ್ಸು, ಆರೋಗ್ಯ ವ್ಯತ್ಯಾಸ ಸಾಧ್ಯತೆ, ಹಣಕಾಸು ಸಮಸ್ಯೆ ಉಲ್ಬಣ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ವಿಪರೀತ ವ್ಯಸನ, ಕೆಲಸ ಕಾರ್ಯದಲ್ಲಿ ನಿಧಾನ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.

ಧನಸ್ಸುರಾಶಿ
ಹಣಕಾಸು ಪರಿಸ್ಥಿತಿ ಚೇತರಿಕೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಆತಂಕದ ವಾತಾವರಣ, ವ್ಯವಹಾರಗಳಲ್ಲಿ ಅಲ್ಪ ಲಾಭ, ಮನೆಗೆ ಹಿರಿಯರ ಆಗಮನದ ನಿರೀಕ್ಷೆ, ಅಧಿಕವಾದ ಆದಾಯ, ಖರ್ಚಿನ ಪ್ರಮಾಣದ ಹೆಚ್ಚಾಗುವ ಸಾಧ್ಯತೆ, ಪ್ರವಾಸಕ್ಕೆ ತೆರಳಲು ಯೋಜನೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಮೆಚ್ಚುಗೆ ಸಿಗಲಿದೆ. ಸ್ವಕೀಯರಿಂದ ಆತ್ಮೀಯರಿಂದ ಸಿಗುವ ಸಹಕಾರಿ ಮುನ್ನೆಡೆಗೆ ಸಾಧಕವಾಗಲಿದೆ. ಎಡರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ.

ಮಕರರಾಶಿ
ಉದ್ಯೋಗದಲ್ಲಿ ಆತಂಕ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಜಯ, ಸಾಮಾಜಿಕ ಕಾರ್ಯದಲ್ಲಿ ನಿಮಗೆ ಮೆಚ್ಚುಗೆ ಸಿಗಲಿದೆ. ಸ್ವಕೀಯರಿಂದ ಆತ್ಮೀಯರಿಂದ ಸಿಗುವ ಸಹಕಾರಿ ಮುನ್ನೆಡೆಗೆ ಸಾಧಕವಾಗಲಿದೆ. ಎಡರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ತೀರ್ಥಯಾತ್ರೆ ದರ್ಶನಕ್ಕೆ ಚಿಂತನೆ, ಸೈಟ್ ವಾಹನ ಖರೀದಿ ಯೋಗ.

ಕುಂಭರಾಶಿ
ದೈವಾನುಗ್ರಹ ಆರಂಭವಾಗಿದೆ. ನಿರೀಕ್ಷಿತ ಕಾರ್ಯಸಾಧನೆಗೆ ಅನುಕೂಲವಾದೀತು. ದೂರ ಪ್ರವಾಸ. ತೀರ್ಥಾಟನೆ ನಿಮ್ಮ ಇಚ್ಛೆ ರೂಪದಲ್ಲಿ ನೆರವೇರಲಿದೆ. ಅವಿವಾಹಿತರಿಗೆ ನಿರೀಕ್ಷಿತ ರೂಪದಲ್ಲಿ ಕಂಕಣಬಲವು ಒದಗೀತು. ಆತ್ಮೀಯರೇ ಮೋಸ ಮಾಡುವರು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಅವಿವಾಹಿತರಿಗೆ ವಿವಾಹ ಯೋಗ, ವಿರೋಧಿಗಳಿಂದ ಸಮಸ್ಯೆ, ಚೋರ ಭಯ, ಅಗ್ನಿ ಭೀತಿ, ಆರೋಗ್ಯದ ಬಗ್ಗೆ ಎಚ್ಚರ, ಶೀತ ಸಂಬಂಧಿತ ರೋಗ, ಚಿನ್ನಾಭರಣ ಯೋಗ ಪ್ರಾಪ್ತಿ.

ಮೀನರಾಶಿ
ದುಬಾರಿ ವಸ್ತುಗಳ ಕಳವು, ತಾಯಿಯ ಆರೋಗ್ಯದಲ್ಲಿ ಏರುಪೇರು, ಧರ್ಮಕಾರ್ಯದಲ್ಲಿ ವಿಳಂಬ, ಹಿತಶತ್ರುಗಳ ಬಾಧೆ, ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು, ಭಯದ ಚಿಂತೆ ನಿಮ್ಮನ್ನು ಬಾಧಿಸಲಿದೆ. ಸ್ವತಂತ್ರ ಉದ್ಯೋಗಿಗಳು ತುಸು ಚೇತರಿಕೆಯನ್ನು ಪಡೆದು ಸಂತಸ ಪಡಲಿದ್ದಾರೆ. ವ್ಯಾಪಾರಿಗಳಿಗೆ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮೃಷ್ಟಾನ್ನ ಭೋಜನ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಈ ವಾರ ಮಿಶ್ರ ಫಲ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular