ನಿತ್ಯಭವಿಷ್ಯ : 15-09-2020

0

ಮೇಷರಾಶಿ
ಕೆಲಸಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿರಿ. ಕುಟುಂಬ ಸೌಖ್ಯ, ದ್ರವ್ಯಲಾಭ, ಮಿತ್ರರ ಸಮಾಗಮ, ಸ್ತ್ರೀ ಲಾಭ, ಸಂತಾನ ಪ್ರಾಪ್ತಿ, ಭೂ ಲಾಭ. ಧೈರ್ಯಂ ಸರ್ವತ್ರ ಸಾಧನಂ ಅಂದ ಹಾಗೆ ಆತ್ಮವಿಶ್ವಾಸದಿಂದ ಮುನ್ನಡೆಯುವುದು. ನಿಮ್ಮ ಹಿರಿಯರ ಮಾತಿಗೆ ನೀವು ಬೆಂಬಲ, ಗೌರವ ಕೊಡಿರಿ.

ವೃಷಭರಾಶಿ
ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆ, ಅನಾರೋಗ್ಯ, ಪತಿಪತ್ನಿಯರಲ್ಲಿ ವಿರಸ. ನೀವು ಗ್ರಹಿಸಿದ ಕೆಲಸ, ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಈ ದಿನ ನಿಮ್ಮ ಎಣಿಕೆಯಂತೆ ನಡೆಯುವುದು. ಆರೋಗ್ಯದಲ್ಲಿ ಅಭಿವೃದ್ಧಿಯು ತೋರಿ ಬಂದು ಸಮಾಧಾನವಾದೀತು. ಅರ್ಧಕ್ಕೆ ನಿಂತ ಕಾರ್ಯಕ್ಕೆ ಚಾಲನೆ.

ಮಿಥುನರಾಶಿ
ಪ್ರಯತ್ನಬಲದಿಂದ ಮುಂದುವರಿಯುವ ನಿಮಗೆ ಜಯವು ಲಭಿಸಲಿದೆ. ಹಿತಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಭಾಗ್ಯ ವೃದ್ಧಿ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ. ನಿಮ್ಮ ಛಲವು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಲಿದೆ. ಕಿರು ಸಂಚಾರವಿದೆ.

ಕಟಕರಾಶಿ
ನಿಮ್ಮ ಜೀವನದಲ್ಲಿ ತಾಳ್ಮೆ ಸಹನೆಯ ಅಗತ್ಯವಿದೆ. ಅನ್ಯರಲ್ಲಿ ವೈಮನಸ್ಸು, ನಂಬಿದ ಜನರಿಂದ ಮೋಸ, ಸ್ಥಾನ ಬದಲಾವಣೆ, ಅತಿಯಾದ ನಿದ್ರೆ. ಸಿಟ್ಟು ಸಿಡುಕನ್ನು ಸ್ವಲ್ಪ ಬಿಟ್ಟುಬಿಟ್ಟರೆ ನಿಮ್ಮ ಹಾದಿ ಸುಗಮವಾದೀತು. ಹಿರಿಯರೊಂದಿಗೆ ಮನಬಿಚ್ಚಿ ಮಾತಾನಾಡಿದರೆ ಒಳಿತು. ಸಾಫ‌ಲ್ಯ ಕಾಣುವಿರಿ.

ಸಿಂಹರಾಶಿ
ಕೌಟುಂಬಿಕವಾಗಿ ಮನೆ ಸದಸ್ಯರ ಅನಾರೋಗ್ಯದಿಂದ ತುಂಬಾ ಬಳಲುವಿರಿ. ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಕೆಲಸ ಕಾರ್ಯಗಳಲ್ಲಿ ಜಯ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ. ಆದರೆ ಚಿಂತೆ ಮಾಡಿ ಪ್ರಯೋಜನವಿಲ್ಲ. ನಿಮ್ಮ ಕರ್ತವ್ಯವನ್ನು ಮನಪೂರ್ವಕವಾಗಿ ಮಾಡಿರಿ. ದೈವ ಬೆಂಬಲವು ಸಿಗುವುದು.

ಕನ್ಯಾರಾಶಿ
ನಿಮ್ಮ ಸಹೋದ್ಯೋಗಿಗಳಿಂದ ಕಿರುಕುಳ ಹಾಗೂ ತಾತ್ಸಾರವು ಕಂಡು ಬಂದು ಮನಸ್ಸು ರೋಸಿ ಹೋಗಲಿದೆ. ಮಾತಾ ಪಿತೃಗಳಲ್ಲಿ ದ್ವೇಷ, ದ್ರವ್ಯ ನಷ್ಟ, ಅಧಿಕ ತಿರುಗಾಟ, ಮನಸ್ತಾಪ, ಧನಹಾನಿ. ಅದರೂ ದೈವಾನುಗ್ರಹವು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಉತ್ತಮ ವಿರುತ್ತದೆ. ಖರ್ಚಿನಲ್ಲಿ ನಿಗಾವಹಿಸಿರಿ.

ತುಲಾರಾಶಿ
ಕೇವಲ ದೈವವನ್ನು ದೂರುವುದ ಬೇಡ. ಪ್ರಾರಬ್ಧ ಕರ್ಮ ಬೆಂಬಿಡದೆ ಬರುವುದು. ವ್ಯಾಪಾರದಲ್ಲಿ ಏರುಪೇರು, ಇಲ್ಲ ಸಲ್ಲದ ತಕರಾರು, ಮಾನಹಾನಿ, ಕೃಷಿಕರಿಗೆ ಅಲ್ಪ ಲಾಭ. ಆದರೂ ಧೈರ್ಯದಿಂದ ಮುಂದುವರಿಯಿರಿ. ಗೃಹ ಸಾಲ ಪಾವತಿಗಾಗಿ ಸ್ವಲ್ಪ ಪರದಾಟ ಕಂಡು ಬಂದೀತು. ಶುಭವಿದೆ.

ವೃಶ್ಚಿಕರಾಶಿ
ಬೆನ್ನು, ಸೊಂಟ ನೋವು ತೋರಿ ಬಂದು ಕಿರಿಕಿರಿ ಎನಿಸಲಿದೆ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಖರೀದಿ ಯೋಗ, ದಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ. ವೈದ್ಯರ ತಪಾಸಣೆಯ ಅಗತ್ಯ ವಿರುತ್ತದೆ. ಅನಿರೀಕ್ಷಿತವಾಗಿ ಮಿತ್ರರ ಭೇಟಿ ಇದ್ದೀತು. ಸಹಾಯಹಸ್ತ ಒದಗಿ ಬರಲಿದೆ. ಪುತ್ರನ ಭೇಟಿಯಿಂದ ಸಂತಸ.

ಧನುರಾಶಿ
ಸಹೋದ್ಯೋಗಿ ಹಾಗೂ ಗುರುಹಿರಿಯರೊಡನೆ ಮುಕ್ತವಾಗಿ ಮಾತುಕತೆ ಮಾಡಿರಿ. ವಿದ್ಯಾಭಿವೃದ್ಧಿ, ಅನೇಕ ಜನರಿಗೆ ವಿವಾಹಯೋಗ, ಆಕಸ್ಮಿಕ ಧನಲಾಭ, ತೀರ್ಥಯಾತ್ರೆ ಮಾಡುವಿರಿ, ಕುಟುಂಬ ಸೌಖ್ಯ. ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ನೇರ ಹಾಗೂ ದಿಟ್ಟ ನಡತೆ ಎಲ್ಲರನ್ನು ಮೆಚ್ಚಿಸಲಿದೆ. ದಿನಾಂತ್ಯ ಶುಭವಿದೆ.

ಮಕರರಾಶಿ
ವೃತ್ತಿರಂಗದಲ್ಲಿ ಎಚ್ಚರದ ನಡೆ ನಿಮ್ಮದಾಗಿರಲಿ. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ, ಸ್ಥಳ ಬದಲಾವಣೆ, ಸಾಲ ಮಾಡುವ ಸಾಧ್ಯತೆ, ಬಂಧುಗಳಿಂದ ತೊಂದರೆ. ನೀವು ಕೈಗೊಂಡ ಕಾರ್ಯದಲ್ಲಿ ವಿಳಂಬತೆ ಕಂಡು ಬಂದರೂ ಆಗುವುದು. ಸಾಲಕ್ಕಾಗಿ ಪರದಾಟವು ಇರುತ್ತದೆ.

ಕುಂಭರಾಶಿ
ಉತ್ತಮ ದೈವಾನುಗ್ರಹವಿರುವ ನಿಮಗೆ ವೃತ್ತಿರಂಗದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಶತ್ರು ಭಯ, ಹಣದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯಲಾಭ. ಆರ್ಥಿಕವಾಗಿ ಉತ್ತಮ ಲಾಭ ವಿರುತ್ತದೆ. ಪತ್ನಿ, ಮಕ್ಕಳಿಂದ ಹಿತ ನುಡಿ ಹಾಗೂ ಆಶ್ವಾಸನೆ ಲಭಿಸಲಿದೆ. ಶುಭವಿದೆ.

ಮೀನರಾಶಿ
ಕೌಟುಂಬಿಕ ತಂದೆ ತಾಯಿಯ ಉಪದೇಶವು ನಿಮಗೆ ಸರಿ ಅನ್ನಿಸದಿದ್ದರೂ ಅಲಿಸಿರಿ. ಸಾಲಭಾದೆ, ಮನ:ಕ್ಲೇಷ, ಸರ್ಕಾರಿ ಕೆಲಸದಲ್ಲಿ ಅಡಚಣೆ, ಯತ್ನ ಕಾರ್ಯಭಂಗ, ಚಂಚಲ ಮನಸ್ಸು. ಮುಂದೆ ಒಳ್ಳೆಯದಾಗಲಿದೆ. ನಿಷ್ಠುರ ಮಾಡಿಕೊಳ್ಳದಿರಿ. ನಿಮ್ಮ ಭವಿಷ್ಯದ ಬಗ್ಗೆ ಸ್ವಲ್ಪ ಚಿಂತಿಸಿರಿ. ಉದ್ವೇಗಬೇಡ.

Leave A Reply

Your email address will not be published.