ನಿತ್ಯಭವಿಷ್ಯ : 12-10-2020

0

ಮೇಷರಾಶಿ
ಸಾಂಸಾರಿಕವಾಗಿ ಸುಖ, ಸಂತೋಷಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣಲಿವೆ. ಪ್ರೀತಿ ಪಾತ್ರರೊಬ್ಬರ ಆಗಮನ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ. ಯಾವುದಕ್ಕೂ ಹೊಂದಾಣಿಕೆಯು ಅಗತ್ಯವಿದೆ. ನಿಮ್ಮ ಮನೆತನದ ಹಿರಿಯ ವ್ಯಕ್ತಿಯೊಂದಿಗೆ ಸಲಹೆಗಳನ್ನು ಕೇಳಿರಿ.

ವೃಷಭರಾಶಿ
ಕಠಿನ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಮುನ್ನಡೆವ ಅಗತ್ಯವಿದೆ. ವೃತ್ತಿರಂಗದಲ್ಲಿ ಸ್ಥಾನಮಾನ, ಗೌರವ ಸಿಗಲಿದೆ, ಸ್ವಂತ ಉದ್ಯಮಿಗಳಿಗೆ ಲಾಭ, ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಚ್ಚರ. ಹಿತ ಶತ್ರುಗಳ ನಡೆನುಡಿ ಗಮನಿಸುತ್ತಾ ಇರಬೇಕು. ಹಳೇ ಮಿತ್ರರ ಭೇಟಿ ಸಂತೋಷಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ಮಿಥುನರಾಶಿ
ಉತ್ತಮ ಗುರುಬಲದ ನಿಮಗೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಬುನಾದಿ ಹಾಕಬಹುದು. ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲ ಸಲ್ಲದ ಅಪವಾದ, ಹಣಕಾಸಿನ ಸ್ಥಿತಿ ಉತ್ತಮ. ಕಾರ್ಮಿಕ ವರ್ಗದವರಿಗೆ ಭಡ್ತಿಯ ಸೂಚನೆ ತಂದೀತು. ಸಮಾಧಾನದಿಂದ ಕಳೆಯುವ ದಿನಗಳಾಗಲಿವೆ. ಶುಭವಿದೆ.

ಕಟಕರಾಶಿ
ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು. ಕಾರ್ಯನಿಮಿತ್ತ ಸಂಚಾರವು ಕೂಡಿ ಬಂದೀತು. ಲಾಭ ಸ್ಥಾನದ ಕೇತುವಿನಿಂದಾಗಿ ಅನಿರೀಕ್ಷಿತವಾಗಿ ಲಾಭ ಪಡೆಯುವಿರಿ. ಮಕ್ಕಳ ಶ್ರೇಯೋಭಿವೃದ್ಧಿಯು ತೋರಿ ಬಂದೀತು. ಮನಸ್ಸು ಸ್ವತ್ಛಂದವಾಗಿಟ್ಟುಕೊಳ್ಳಿರಿ.

ಸಿಂಹರಾಶಿ
ಹಲವು ದಿನಗಳಿಂದ ಚಿಂತೆಯ ಗೂಡಾದಿದ್ದ ನೀವು ಇಂದು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಬಾಗಿ, ಧನಸಹಾಯ, ಪತಿ-ಪತ್ನಿಯರಲ್ಲಿ ಸಂತೋಷ, ಆರೋಗ್ಯದ ಕಡೆ ಗಮನ ಹರಿಸಿ, ಅನಿರೀಕ್ಷಿತ ಖರ್ಚು. ಹಲವು ಕಾಲದಿಂದ ನನೆಗುದಿಗೆ ಬಿದ್ದಿದ ಕಾರ್ಯಕ್ಕೆ ಸ್ವಲ್ಪ ಚಾಲನೆಯು ದೊರಕಲಿದೆ.

ಕನ್ಯಾರಾಶಿ
ಮಂಗಲಕಾರ್ಯದ ಬಗ್ಗೆ ಆಲೋಚಿಸಿರುವಿರಿ. ಶಿಕ್ಷಕರಿಗೆ ಹೆಚ್ಚಿನ ಕೆಲಸ, ಶತ್ರುಬಾಧೆ, ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ. ಆಗಿಯೇ ತಿರುವುದು. ಮನೆಯಲ್ಲಿ ಸಂಭ್ರಮ ಹಾಗೂ ಸಂತಸದ ವಾತಾವರಣ. ಕೆಟ್ಟ ವ್ಯಸನದ ಮಿತ್ರರ ಚಾಳಿಯಿಂದ ನೀವು ಜೀವನವನ್ನು ಕಳೆದು ಕೊಂಡೀರಾ ಜೋಕೆ.

ತುಲಾರಾಶಿ
ಏನೂ ಏರುಪೇರು ಇಲ್ಲದೆ ಸಾಮಾನ್ಯರಂತೆ ದಿನ ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆಸ್ತಿ ವಿಚಾರದಲ್ಲಿ ವಾದ, ಅನಾರೋಗ್ಯ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಧನ ನಷ್ಟ. ಆರ್ಥಿಕ ರಂಗದಲ್ಲಿ ಸ್ವಲ್ಪ ಏಳಿಗೆ ಕಂಡು ಬಂದೀತು. ಗೃಹದಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಹಕಾರವಿದ್ದು ತುಸು ನೆಮ್ಮದಿ ದೊರಕೀತು.

ವೃಶ್ಚಿಕರಾಶಿ
ಉತ್ತಮ ಗುರುಬಲವಿರುವುದರಿಂದ ಕೈಹಾಕಿದ ಕೆಲಸದಲ್ಲಿ ಜಯ ಸಾಧಿಸುವಿರಿ. ಕೆಲಸದಲ್ಲಿ ತೊಂದರೆ, ಮಾನಹಾನಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕರ. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಮಾಧಾನ ಮೂಡಿ ಬಂದೀತು. ಆದರೂ ಆರೋಗ್ಯದಲ್ಲಿ ಜಾಗ್ರತೆ ಮಾಡುವುದು.

ಧನಸುರಾಶಿ
ಧನಲಾಭ, ದೂರ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ಮನಸ್ಸಿಗೆ ನೆಮ್ಮದಿ, ಸಾಲದಿಂದ ಮುಕ್ತಿ, ಋಣವಿಮೋಚನೆ. ವೃತ್ತಿರಂಗದಲ್ಲಿ ಏರಿಳಿತ ಕಂಡು ಬಂದರೂ ಸಮಾಧಾನವಾಗಲಿದೆ. ಬೇರೊಂದೂರಿಗೆ ವರ್ಗಾವಣೆ ಇದ್ದೀತು. ಉಪೇಕ್ಷೆ ಮಾಡದಿರಿ. ಮುಂದೆ ಒಳ್ಳೆಯದಿದೆ. ಮಾವನ ಮನೆಯಿಂದ ಒಳ್ಳೆಯ ಹಿತನುಡಿಗಳ ಲಾಭ ಸಿಕ್ಕೀತು.

ಕರರಾಶಿ
ಅಲ್ಪ ಕಾರ್ಯಸಿದ್ದಿ, ಶತ್ರುನಾಶ, ಅಪಘಾತವಾಗುವ ಸಾಧ್ಯತೆ ಎಚ್ಚರ, ಮನಕ್ಲೇಷ, ಅಧಿಕ ಖರ್ಚು, ಕೃಷಿಯಲ್ಲಿ ಲಾಭ. ಮನೆಯಲ್ಲಿ ಮಕ್ಕಳ ಕಿರಿಕಿರಿಯಿಂದ, ಸಿಟ್ಟು ಬಂದೀತು. ತಾಳ್ಮೆ ಅಗತ್ಯವಿದೆ. ಕಾರ್ಯರಂಗದಲ್ಲಿ ಅನ್ಯ ರಿಂದ ಉಪಟಳ ಕಂಡು ಬಂದೀತು. ವೃತ್ತಿಯ ಬೇಟೆಯಲ್ಲಿರುವವರಿಗೆ ಮನಸ್ಸಿಗೆ ಸಮಾಧಾನ ತರುವ ಉದ್ಯೋಗ ಸಿಗಲಿದೆ.

ಕುಂಭರಾಶಿ
ಸ್ಥಿರಾಸ್ತಿ ಪ್ರಾಪ್ತಿ, ದ್ರವ್ಯಲಾಭ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ. ಕಾರ್ಯಗತಿಯಲ್ಲಿ ಏಳಿಗೆ ಕಂಡು ಬರಲಿದೆ. ಉತ್ತಮ ದೈವಾನುಗ್ರಹದಿಂದ ನಿಮ್ಮಣಿಕೆಯ ಕಾರ್ಯಗಳೆಲ್ಲಾ ಸಿದಿ§ಸಲಿವೆ. ಆರ್ಥಿಕವಾಗಿ ಏನೂ ಚಿಂತೆ ಇರದು. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು.

ಮೀನರಾಶಿ
ವಸ್ತ್ರ-ಆಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ. ನೂತನ ಜಾಗದ, ಯಾ ವಾಹನ ಖರೀದಿಯಿಂದ ಸಂತಸ. ಮಕ್ಕಳ ಅಭಿವೃದ್ಧಿ ಕಂಡು ಸಂತಸವಾದೀತು. ಮಕ್ಕಳ ನೆಂಟಸ್ಥಿಕೆಯ ವಿಚಾರದಲ್ಲಿ ಸ್ವಲ್ಪ ವಿಚಾರಿಸಿ ಮುನ್ನಡೆಯಿರಿ. ಸಂಚಾರದಿಂದ ಸಮಾಧಾನವಿದ್ದೀತು.

Leave A Reply

Your email address will not be published.