ನಿತ್ಯಭವಿಷ್ಯ : 01-12-2020

ಮೇಷರಾಶಿ
ಆಪ್ತರಿಂದ ಸಹಾಯ, ಆರ್ಥಿಕ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಬಲ, ವೃತ್ತಿರಂಗದಲ್ಲಿ ಅವಲೋಕಿಸಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ, ನಿರುದ್ಯೋಗಿಗಳಿಗೆ ಸಮಾಧಾನವಾಗಲಿದೆ, ಮಾನಸಿಕ ನೆಮ್ಮದಿ, ಶತ್ರು ಭಾದೆ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ.

ವೃಷಭರಾಶಿ
ಹಣ ಉಳಿಯುವುದಿಲ್ಲ, ವಾಹನ ಅಪಘಾತ, ಕಾರ್ಯರಂಗದಲ್ಲಿ ನಿರೀಕ್ಷಿತ ಅಭಿವೃದ್ದಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ, ಸ್ಪಷ್ಟ ನಿರ್ಧಾರದ ಮೂಲಕ ಮುಂದುವರಿದಲ್ಲಿ ಅಡಚಣೆಗಳು ಕಡಿಮೆಯಾಗಲಿದೆ, ಉದ್ಯೋಗದಲ್ಲಿ ಕಿರಿ-ಕಿರಿ, ಅಕಾಲ ಭೋಜನ.

ಮಿಥುನರಾಶಿ
ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ, ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಲೆಕ್ಕಾಚಾರ ಸರಿಯಾಗಿದೆ, ಸಹೋದರರಿಂದ ಕಲಹ, ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರು, ಪರಸ್ತ್ರೀಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕರಾಶಿ
ಮನಸ್ಸಿನಲ್ಲಿ ಗೊಂದಲ, ಚಂಚಲ ಮನಸ್ಸು, ಭೂ ಲಾಭ, ಶತ್ರು ಬಾಧೆ, ವೃತ್ತಿರಂಗದಲ್ಲಿ ಎಷ್ಟೋ ಬಾರಿ ಅನುಭವಕ್ಕೆ ನಿಲುಕದ ಸಂಗತಿಗಳು ಎದುರಾಗಲಿದೆ, ನಿಮ್ಮ ಸ್ವಂತ ಅಸ್ತಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಲಿದೆ, ಸಾಂಸಾರಿಕವಾಗಿ ನಿಮ್ಮವರ ಪ್ರೀತಿ ಸಿಗಲಿದೆ, ನಿಮ್ಮ ಮಾತುಗಳಿಂದ ಕಲಹ.

ಸಿಂಹರಾಶಿ
ಯಾರನ್ನು ಹೆಚ್ಚಾಗಿ ನಂಬಬೇಡಿ, ಉತ್ತಮ ಬುದ್ಧಿಶಕ್ತಿ, ನೀವು ನಿರೀಕ್ಷಿಸಿರುವಂತಹ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳಲಿದೆ, ವೃತ್ತಿರಂಗದಲ್ಲಿ ಇತರರ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾಗದು, ಕೆಲವೊಮ್ಮೆ ಸಮಸ್ಯೆಗಳನ್ನು ನೀವೇ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ, ಋಣಭಾದೆ, ಬೇಡದ ವಿಷಯಗಳಲ್ಲಿ ಆಸಕ್ತಿ.

ಕನ್ಯಾರಾಶಿ
ಸ್ಪಷ್ಟ ನಿರ್ಧಾರಗಳು ಹೆಚ್ಚಿನ ಭದ್ರತೆಯನ್ನು ತಂದುಕೊಡಲಿದೆ, ವೈಯಕ್ತಿಕ ಜೀವನದತ್ತ ಸ್ವಲ್ಪ ಗಮನಹರಿಸುವ ಅಗತ್ಯವಿದೆ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮನೋವ್ಯಥೆ, ಸ್ವಯಂಕೃತ ಅಪರಾಧ, ಆಲಸ್ಯ ಮನೋಭಾವ.

ತುಲಾರಾಶಿ
ಋಣಾತ್ಮಕ ಚಿಂತೆ ನಿಮ್ಮನ್ನು ಕಾಡಲಿದೆ, ಭವಿಷ್ಯದ ಚಿಂತೆ ನಿಮ್ಮ ಕಾಡಲಿದೆ, ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳುವುದುರಿಂದ ಅಭಿವೃದ್ದಿ, ವಿಧೇಯತೆಯಿಂದ ನಡೆದುಕೊಳ್ಳಿ, ಅನಾವಶ್ಯಕ ಮಾತು ಬೇಡ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ವೃಶ್ಚಿಕರಾಶಿ
ಮಾನಸಿಕ ಒತ್ತಡ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಸಮಸ್ಯೆ, ನಿವೃತ್ತರು ಪ್ರವೃತ್ತಿಯಲ್ಲಿ ತೊಡಗುವುದರಿಂದ ಉತ್ತಮ, ರಾಜಕೀಯ ವರ್ಗದವರಿಗೆ ಜನಸೇವೆಯಿಂದ ನೆಮ್ಮದಿ ಸಿಗಲಿದೆ, ಮಿತ್ರರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಧನಸ್ಸುರಾಶಿ
ಸ್ತ್ರೀ ಲಾಭ, ಸಾಲಭಾದೆ, ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ಕಂಡು ಬಂದರೂ ಕೂಡ ಮನಸಿನ ಸೂಪ್ತ ಬಯಕೆಗಳು ಪ್ರಕಟವಾಗಲಿದೆ, ಯಾವುದೇ ವಾದ, ವಿವಾದಗಳಿಗೆ ಸಿಲುಕದೆ ಮುಂದುವರಿದರೆ ಉತ್ತಮ, ವ್ಯವಹಾರಗಳಲ್ಲಿ ಏರುಪೇರು, ಮನಕ್ಲೇಷ, ಗುರುಗಳಿಂದ ಬೋಧನೆ, ಮಾತಿನ ಚಕಮಕಿ.

ಮಕರರಾಶಿ
ವೃತ್ತಿರಂಗದಲ್ಲಿ ಜವಾಬ್ದಾರಿಯಿಂದ ದುಡಿಯಿರಿ, ತಡವಾಗಿಯಾದರೂ ನಿಶ್ಚಿತ ಫಲ ಲಭಿಸಲಿದೆ, ಕೆಲಸ ಕಾರ್ಯಗಳು ಹಂತ ಹಂತವಾಗಿ ಭದ್ರತೆಯನ್ನು ನೀಡಲಿದೆ, ಮಾತಿಗೆ ಮರುಳಾಗದಿರಿ, ಅನಾವಶ್ಯಕ ಖರ್ಚು, ಹಿತ ಶತ್ರು ಭಾದೆ, ಅನ್ಯರಿಂದ ತೊಂದರೆ, ದಿನಾಂತ್ಯಕ್ಕೆ ಶುಭವಾರ್ತೆ,

ಕುಂಭರಾಶಿ
ವೃತ್ತಿರಂಗದಲ್ಲಿ ಬದಲಾವಣೆ ಕಂಡು ಬಂದರೂ ತುಸು ಬದಲಾವಣೆಗೆ ಸಿದ್ದರಾಗಬೇಕು, ವ್ಯಾಪಾರ, ವ್ಯವಹಾರಗಳಲ್ಲಿ ಸಾಕಷ್ಟು ಲಾಭ ತೋರಿಬರಲಿದೆ, ಹೊಸತನ ಕಾರ್ಯಸಾಧನೆಗೆ ಅನುಕೂಲಕರ, ಅಲ್ಪ ಕಾರ್ಯಸಿದ್ಧಿ, ಸಲ್ಲದ ಅಪವಾದ, ಪರರಿಗೆ ಸಹಾಯ, ಯತ್ನ ಕಾರ್ಯ ಅನುಕೂಲ, ಕೋಪ ಜಾಸ್ತಿ.

ಮೀನರಾಶಿ
ವೃತ್ತಿರಂಗದಲ್ಲಿ ಬದಲಾವಣೆಗೆ ಸಿದ್ದರಾಗಿ, ಕಾರ್ಯಸಾಧನೆಯಿಂದ ಮುನ್ನಡೆ, ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿಗೆ ಚಿಂತೆ, ಬಂಧು ಬಾಂಧವರ ಸಹಕಾರ, ಕೃಷಿಯಲ್ಲಿ ಲಾಭ, ಯಾವುದೇ ಹೂಡಿಕೆ ಮಾಡುವಾಗ ಯೋಚಿಸಿ ಮುನ್ನಡೆಯಿರಿ.

Comments are closed.