ನಿತ್ಯಭವಿಷ್ಯ : 15-12-2020

ಮೇಷರಾಶಿ
ಹೂಡಿಕೆಗಳಿಂದ ಸಮಸ್ಯೆ, ನಾನಾ ರೀತಿಯಲ್ಲಿ ಧನಲಾಭ, ಖರ್ಚಿನ ಮೇಲೆ ಹಿಡಿತವಿರಲಿ, ವ್ಯವಹಾರದಲ್ಲಿ ಲಾಭ, ವಸ್ತ್ರಾಭರಣ ಖರೀದಿ, ಅಧಿಕಾರ ಪ್ರಾಪ್ತಿ, ಶತ್ರು ಬಾಧೆ, ವಿದ್ಯಾರ್ಥಿಗಳಿಗೆ ತೊಂದರೆ.

ವೃಷಭರಾಶಿ
ಉತ್ಸಾಹದಿಂದ ಕೆಲಸ ಮಾಡಿದರೆ ಯಶಸ್ಸು, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ತಿರುಗಾಟದಿಂದ ಬೇಸರ, ಮನಸಿಗೆ ಅಶಾಂತಿ, ಕೆಲಸ ಕಾರ್ಯಗಳು ವಿಳಂಭವಾಗಲಿದೆ, ಸಾಲಭಾದೆಯಿಂದ ಕಿರಿಕಿರಿ.

ಮಿಥುನರಾಶಿ
ವ್ಯಾಪಾರಿಗಳಿಗೆ ಲಾಭದಾಯಕ, ದೇಹಾಯಾಸದಿಂದ ಔಷದೋಪಚಾರ, ಆರ್ಥಿಕ ಸಂಕಷ್ಟ, ಇಲ್ಲ ಸಲ್ಲದ ಅಪವಾದ, ಅಧಿಕ ತಿರುಗಾಟ, ಅನಾರೋಗ್ಯ ಸಮಸ್ಯೆ, ಮಿತ್ರರಲ್ಲಿ ದ್ವೇಷದ ಭಾವನೆ, ಅವಮಾನವನ್ನು ಎದುರಿಸುವಿರಿ.

ಕಟಕರಾಶಿ
ನೆರೆಹೊರೆಯವರಿಂದ ಕಿರಿಕಿರಿ, ಚಾಡಿ ಮಾತುಗಳಿಂದ ಕಿರಿಕಿರಿ, ಮಡದಿ, ,ಮಕ್ಕಳಿಂದ ನೆಮ್ಮದಿಯ ವಾತಾವರಣ, ಧನವ್ಯಯ, ಕೋರ್ಟ್ ಕಚೇರಿಗಳಲ್ಲಿ ವಿಘ್ನ, ಉದ್ಯೋಗದಲ್ಲಿ ಪ್ರಗತಿ, ವಾಹನ ರಿಪೇರಿ.

ಸಿಂಹರಾಶಿ
ಆತ್ಮವಿಮರ್ಶೆಯಿಂದ ತಪ್ಪುಗಳು ಅರಿವಿಗೆ ಬರಲಿದೆ, ಕಾರ್ಯಕ್ಷೇತ್ರಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ನಿರೀಕ್ಷಿತ ಕೆಲಸಗಳು ಕೈಗೂಡಲಿವೆ, ವ್ಯಾಪಾರ, ಉದ್ಯೋಗದಲ್ಲಿ ಪ್ರ ಗತಿ, ಅನಿರೀಕ್ಷಿತ ಧನಲಾಭ, ಆರೋಗ್ಯದಲ್ಲಿ ಪ್ರಗತಿ.

ಕನ್ಯಾರಾಶಿ
ನಾನಾ ರೀತಿಯಲ್ಲಿ ಹಣ ವ್ಯಯವಾಗಲಿದೆ, ಮಾಸಿಕ ಗೊಂದಲದ ಬಗ್ಗೆ ಕಾಳಜಿವಹಿಸಿ, ಗುರುವಿನ ಪ್ರತಿಕೂಲತೆಯಿಂದ ನಾನಾ ರೀತಿಯಲ್ಲಿ ಪರಿಣಾಮ, ಸಾಮಾಜಿಕವಾಗಿ ಮನ್ನಣೆ ಲಭಿಸಲಿದೆ, ಬುದ್ದಿ ಶಕ್ತಿಯಿಂದ ಲಾಭವನ್ನು ಗಳಿಸುವಿರಿ, ತಾಯಿಯಿಂದ ನೆಮ್ಮದಿ, ಸಾಲಬಾಧೆ.

ತುಲಾರಾಶಿ
ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕವಾಗಿ ಅಸಮಾನದ ವಾತಾವರಣ, ವೃಥಾ ಅವಮಾನವನ್ನು ಅನುಭವಿಸುವಿರಿ, ಅವಿವಾಹಿತರಿಂದ ವಿವಾಹ ಯೋಗ, ಸ್ತ್ರೀಯರಿಂದ ಲಾಭದಾಯಕ, ಬಿಡುವಿಲ್ಲದ ಕಾರ್ಯಕ್ರಮಗಳಿಂದ ದೇಹಕ್ಕೆ ಆಯಾಸ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಅಹಂಭಾವ ಬಿಟ್ಟು ನೈತಿಕ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ, ಗುತ್ತಿಗೆ ಕೆಲಸದವರಿಗೆ ಶುಭದಾಯಕ, ಮಕ್ಕಳ ಆರೋಗ್ಯದಲ್ಲಿ ಏರುಏರು.

ಧನಸ್ಸುರಾಶಿ
ದೈರ್ಯದಿಂದ ಮುನ್ನಡೆದರೆ ಯಶಸ್ಸು, ಉದ್ಯೋಗದಲ್ಲಿ ಪರಿವರ್ತನೆ ಕಂಡುಬರಲಿದೆ, ರಾಜಕೀಯ ಕ್ಷೇತ್ರದವರಿಗೆ ಹರಸಾಹಸದಿಂದ ಸ್ಥಾನಮಾನ ದೊರೆಯಲಿದೆ, ಷೇರು ವ್ಯವಹಾರಗಳಿಂದ ಧನಲಾಭ, ದಾನ ಧರ್ಮಾಧಿಕಾರಿಗಳಲ್ಲಿ ಭಾಗಿಯಾಗುವಿರಿ, ಸ್ನೇಹಿತರಿಂದ ಸಹಕಾರ.

ಮಕರರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ದಿ ದಾಯಕ, ಹೂಡಿಕೆಯಿಂದ ಲಾಭ, ಯಶಸ್ಸು, ದೊರೆಯಲಿದೆ, ಮಹಿಳೆಯರಿಗೆ ಶುಭದಿನ, ಮನಃಶಾಂತಿ, ಕುಟುಂಬದಲ್ಲಿ ನೆಮ್ಮದಿ, ಸುಖಭೋಜನ, ಉದ್ಯೋಗದಲ್ಲಿ ಬಡ್ತಿ.

ಕುಂಭರಾಶಿ
ಸ್ವತಃ ದುಡಿಮೆಯಲ್ಲಿ ಹೆಚ್ಚಿನ ಎಚ್ಚರಿಕೆವಹಿಸಿ, ಸಂದಿಗ್ದ ವಾತಾವರಣ ಆತಂಕಕ್ಕೆ ಕಾರಣವಾಗಲಿದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿವಿಧ ಮೂಲಗಳಿಂದ ಧನಲಾಭ, ಮಿತ್ರರಿಂದ ಸಹಕಾರ, ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು.

ಮೀನರಾಶಿ
ಗುರುವಿನ ಅನುಗ್ರಹದಿಂದ ಸಾಮಾಜಿಕ ರಂಗದಲ್ಲಿ ಗೌರವ, ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ವೃತ್ತಿರಂಗದಲ್ಲಿ ನೆಮ್ಮದಿಯ ವಾತಾವರಣ, ಕಿರಿಕಿರಿ ಇದ್ದರೂ ನೆಮ್ಮದಿ ಸಂತಸವಿದೆ, ಅಶಾಂತಿ, ಸ್ತ್ರೀಯರು ತಾಳ್ಮೆಯಿಂದ ಇರುವುದು ಒಳ್ಳೆಯದು.

Comments are closed.