ಜ್ಯೂನಿಯರ್ ಚಿರು ಬಗ್ಗೆ ತಾಯಿಯ ಕನಸು…! ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು ಗೊತ್ತಾ…??

ಪತಿಯ ಅಗಲಿಕೆ ನಡುವೆ ಮುದ್ದು ಕಂದನನ್ನು ಬರಮಾಡಿಕೊಂಡ ನಟಿ ಮೇಘನಾ ರಾಜ್, ಪತಿಯ ಪ್ರತಿರೂಪದಂತಿರೋ ಮಗನನ್ನು ಆರೈಕೆ ಮಾಡುತ್ತ ತಮ್ಮ ನೋವನ್ನು ಮರೆಯೋ ಪ್ರಯತ್ನದಲ್ಲಿದ್ದಾರೆ.

ಆದರೆ ಪತಿ ಅಗಲಿಕೆ ನೋವು ಮರೆಯುವ ಮುನ್ನವೇ ಕೊರೋನಾ ಸಂಪೂರ್ಣ ಕುಟುಂಬಕ್ಕೂ ಆವರಿಸಿದ್ದು ಮೇಘನಾ ತಾಯಿ-ತಂದೆ ಚಿಕಿತ್ಸೆಗಾಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ಮೇಘನಾ ಕೂಡ ಕೊರೋನಾ ಪಾಸಿಟಿವ್ ಆಗಿದ್ದು ವೈದ್ಯರ ಸಲಹೆ ಮೇರೆಗೆ ಮಗನಿಗೆ ಟೆಸ್ಟ್ ಮಾಡಿಸದೇ ಮನೆಯಲ್ಲೇ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ. ಅಲ್ಲದೇ ನಾನು ಆರೋಗ್ಯವಾಗಿದ್ದೇನೆ. ಈ ಹೋರಾಟವನ್ನು ಗೆದ್ದು ಬರುತ್ತೆನೆ ಎಂದು ಮೇಘನಾ ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದಾರೆ.

ಈ ಎಲ್ಲದರ ಮಧ್ಯೆ ಮಗನನ್ನು ತಂದೆಯ ಅಂದ್ರೇ ಚಿರುವಿನ ಕನಸಿನಂತೆ ಬೆಳೆಸುತ್ತೇನೆ ಎಂದಿದ್ದ ಮೇಘನಾ,ಇದೀಗ ಮಗನ ಕುರಿತು ತಮ್ಮ ವಿಚಾರವೊಂದನ್ನು ಹಂಚಿಕೊಂಡಿದ್ದು, ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನಾನು ನನ್ನ ಮಗನನ್ನು ಬೆಳೆಸುತ್ತೇನೆ. ಇದು ನಾನು ನಿಮಗೆ ಮಾಡುವ ಪ್ರತಿಜ್ಞೆ ಎಂದಿದ್ದಾರೆ.

ಆ ಮೂಲಕ ಸ್ತ್ರೀ ಯರನ್ನು ಗೌರವಿಸುವ, ಆಧರಿಸುವ, ಪೂಜ್ಯ ಭಾವನೆಯಿಂದ ನೋಡುವಂತಹ ನಾಗರೀಕ ಮೌಲ್ಯಗಳನ್ನು ಮಗನಿಗೆ ಕಲಿಸುವುದಾಗಿ ಹೇಳಿ ತಮ್ಮ ತಾಯ್ತನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಇನ್ನು ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಈ ಪೋಸ್ಟ್ ಸಾವಿರಾರು ಜನರು ಲೈಕ್ ಒತ್ತಿದ್ದು ಬಹುತೇಕರು ಮೇಘನಾ ಹಾಗೂ ಮಗುವಿಗೆ ಶುಭಹಾರೈಸಿದ್ದಾರೆ.

ನಟಿಯಾಗಿ, ಗಾಯಕಿಯಾಗಿ ಎಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಜವಾಬ್ದಾರಿಯುತ ಮಹಿಳೆಯಾಗಿ ನಡೆದುಕೊಂಡಿರುವ ಮೇಘನಾ ಈ ಪೋಸ್ಟ್ ಮೂಲಕ ನಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆಯ ನಾವೇ ಬೆಳೆಸುವ ಗಂಡುಮಕ್ಕಳ ಕೈಯಲ್ಲಿದೆ ಎಂಬುದನ್ನು ನೆನಪಿಸಿ ಸ್ತ್ರೀ ದೌರ್ಜನ್ಯ ಗಳಿಗೆ ಕಡಿವಾಣ ಹಾಕುವ ಅಗತ್ಯವನ್ನು ಎತ್ತಿಹಿಡಿದಿದ್ದಾರೆ.

Comments are closed.