ನಿತ್ಯಭವಿಷ್ಯ : 25-11-20202

ಮೇಷರಾಶಿ
ಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಅಧಿಕಾರಿ ವರ್ಗಕ್ಕೆ ಸ್ಥಾನಪಲ್ಲಟ ಸಾಧ್ಯತೆ, ವೃತ್ತಿ ರಂಗದಲ್ಲಿ ಹಾಗೂ ಖಾಸಗಿ ಬದುಕಿನಲ್ಲಿ ಎಚ್ಚರವಾಗಿರಿ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನಲಾಭ, ಸಂತಾನ ವೃದ್ಧಿ.

ವೃಷಭರಾಶಿ
ಅಧಿಕ ಖರ್ಚು ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲಿದೆ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ, ಯತ್ನ ಕಾರ್ಯಗಳಲ್ಲಿ ವಿಳಂಬ, ನಿಷ್ಠೂರ ವಿಪರೀತ ವ್ಯಸನ, ಮನೋವ್ಯಥೆ, ತಾಳ್ಮೆಯಿಂದ ವ್ಯವಹಾರಗಳನ್ನು ನಿರ್ವಹಿಸಬೇಕು, ಉದ್ಯಮಿಗಳಿಗೆ ಪ್ರಗತಿ.

ಮಿಥುನರಾಶಿ
ವೃತ್ತಿರಂಗದಲ್ಲಿ ಕಿರುಕುಳ, ಸಂಚಾರದಲ್ಲಿ ದೇಹಾಯಾಸ, ಆತ್ಮವಿಶ್ವಾಸದ ಕೊರತೆ, ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ, ಮನಶಾಂತಿ, ರೋಗ ಬಾಧೆ, ವಿದೇಶಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.

ಕಟಕರಾಶಿ
ಮಾನಸಿಕವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಲ್ಲಿ ಯಶಸ್ಸು, ಲಾಭದ ಸ್ಥಾನದ ಶನಿಯಿಂದ ಅಭಿವೃದ್ದಿಯಾಗಲಿದೆ, ಮಿತ್ರರಿಂದ ಸಹಾಯ, ಅಲ್ಪ ಲಾಭ, ಅಧಿಕ ಖರ್ಚು, ತೀರ್ಥಯಾತ್ರಾ ದರ್ಶನ, ವಿವಾಹ ಯೋಗ, ಆರೋಗ್ಯ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಾಪಿತೃಗಳಲ್ಲಿ ಪ್ರೀತಿ, ವಿದ್ಯಾರ್ಜನೆಯಲ್ಲಿ ಪ್ರಗತಿ.

ಸಿಂಹರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಮನಸ್ಸನ್ನು ನಿರ್ಮಲವಾಗಿಟ್ಟುಕೊಂಡರೆ ನೆಮ್ಮದಿ, ಮಾಡುವ ಕೆಲಸದಲ್ಲಿ ಲಾಭ, ಧಾರ್ಮಿಕ ಸಮಾರಂಭಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ.

ಕನ್ಯಾರಾಶಿ
ಹಳೆಯ ಗೆಳೆಯರ ಭೇಟಿ, ಕೆಟ್ಟ ಆಲೋಚನೆಗಳನ್ನು ಕೈಬಿಡಿ, ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗಲಿದೆ, ನಿವೇಶನ ಖರೀದಿ ಸಾಧ್ಯತೆ, ಆದಾಯವಿದ್ದರೂ ಖರ್ಚು ಅಧಿಕವಾಗಲಿದೆ, ಸುಖ ಭೋಜನ, ಗಣ್ಯರಿಂದ ವಿಶೇಷ ಅಹ್ವಾನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ.

ತುಲಾರಾಶಿ
ವೃತ್ತಿರಂಗದಲ್ಲಿ ಯಶಸ್ಸು ಹಿಂಬಾಲಿಸಿಕೊಂಡು ಬರಲಿದೆ, ಯತ್ನ ಕಾರ್ಯಸಿದ್ದಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಧಾರ್ಮಿಕ ಕ್ಷೇತ್ರದಲ್ಲಿನ ಹಿರಿಯರಿಗೆ ಸ್ಥಾನಮಾನ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ, ಶತ್ರು ಬಾಧೆ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಚಿಂತೆ ದೂರವಾಗಲಿದೆ, ಮಾಡುವ ಕೆಲಸಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಕೌಟುಂಬಿಕವಾಗಿ ಶಾಂತಿ, ಸಮಾಧಾನ ಲಭಿಸಲಿದೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸುರಾಶಿ
ಆರ್ಥಿಕ ಆದಾಯದ ಮೂಲ ಕರಗಿ ಹೋದೀತು, ಖರ್ಚು ಹೆಚ್ಚುವುದರಿಂದ ಮಾನಸಿಕ ಒತ್ತಡ, ಯತ್ನ ಕಾರ್ಯಸಿದ್ಧಿ, ಸ್ತ್ರೀಸೌಖ್ಯ, ನಾನಾ ರೀತಿಯ ಆದಾಯ ಪ್ರಾಪ್ತಿ, ಶತ್ರು ನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನಲಾಭ, ಪುಣ್ಯಕ್ಷೇತ್ರ ದರ್ಶನ, ಮನಶಾಂತಿ.

ಮಕರರಾಶಿ
ಹಿರಿಯರ ಅನಾರೋಗ್ಯದಿಂದ ಸ್ವಲ್ಪ ಬೇಸರ, ರಾಜಕೀಯ ಕ್ಷೇತ್ರದವರಿಗೆ ಅಧಿಕಾರದ ಹಗ್ಗಜಗ್ಗಾಟದಲ್ಲಿ ಯಶಸ್ಸು, ಕ್ರೀಡಾಪಟುಗಳಿಗೆ ಇದು ಸಮೃದ್ದಿಯ ಕಾಲ, ತಂಪಾದ ಪಾನೀಯಗಳಿಂದ ಅನಾರೋಗ್ಯ, ಹಣ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸ್ತ್ರೀಸೌಖ್ಯ.

ಕುಂಭರಾಶಿ
ಬಹಳಷ್ಟು ಶ್ರಮಪಟ್ಟವರು ಕಾರ್ಯ ಫಲಿಸುವುದಿಲ್ಲ, ವೃತ್ತಿ ಕ್ಷೇತ್ರದಲ್ಲಿಯೂ ಕಿರಿಕಿರಿ, ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಯಾತ್ರಾಸ್ಥಳಗಳ ಭೇಟಿಯಿಂದ ಸಮಾಧಾನ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣಬಾಧೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು.

ಮೀನರಾಶಿ
ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶುಭಮಂಗಲ ಕಾರ್ಯದ ಪ್ರಸ್ತಾಪ ಕೂಡಿಬರಲಿದೆ, ದೂರ ಸಂಚಾರದಲ್ಲಿ ಜಾಗೃತೆವಹಿಸಿ, ಒಳ್ಳೆಯ ಹೆಸರನ್ನು ಗಳಿಸುವಿರಿ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ-ವಿವಾದಗಳಲ್ಲಿ ಗೆಲವು, ಸುಖ ಭೋಜನ, ಮನಶಾಂತಿ.

Comments are closed.