ನಿತ್ಯಭವಿಷ್ಯ : 27-09-2020

0

ಮೇಷರಾಶಿ
ಸಂತೋಷ ಹಾಗೂ ಸಮಾಧಾನದ ದಿನವಾಗಿದೆ. ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಅನಾರೋಗ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹಿತರಿಂದ ಸಹಾಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ನಿಮ್ಮ ಎಣಿಕೆಯಂತೆ ನೆನೆಸಿದ ಕಾರ್ಯಗಳೆಲ್ಲಾ ಜರಗುವುದು. ಸಹೋದ್ಯೋಗಿಗಳೊಡನೆ ನಿಮ್ಮ ಸಮಯವನ್ನು ಕಳೆಯುವಿರಿ. ಕಿರು ಸಂಚಾರವು ಇದ್ದೀತು.

ವೃಷಭರಾಶಿ
ಧನ ನಷ್ಟ, ಅಕಾಲ ಭೋಜನ, ಅತಿಯಾದ ನಿದ್ರೆ, ಅನ್ಯ ಜನರಲ್ಲಿ ವೈಮನಸ್ಯ, ಸಾಲ ಮಾಡುವ ಸಂಭವ, ಋಣಭಾದೆ, ವಿವಾಹಕ್ಕೆ ತೊಂದರೆ, ಪರಸ್ಥಳ ವಾಸ, ಮನಸ್ಸಿಗೆ ಚಿಂತೆ. ಉಳಿತಾಯವೆಂದು ಕೂಡಿಟ್ಟ ಹಣವು ನೀರಿನಂತೆ ಖರ್ಚಾಗಲಿದೆ. ಸಮಯವು ಅದಕ್ಕೆ ಉತ್ತರವೀಯಲಿದೆ. ಮಕ್ಕಳಿಂದ ಹಿರಿಯರಿಗೆ ಸಮಾಧಾನವು ಸಿಗಲಿದೆ. ಮನಸ್ಸು ಸ್ವಲ್ಪ ನಿರಾಳವಾಗಿ ಉಸಿರಾಡಲಿದೆ.

ಮಿಥುನರಾಶಿ
ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪ ಅಭಿವೃದ್ಧಿಯ ಮೆಟ್ಟಲೇರಲಿದ್ದೀರಿ. ವಾಹನ ಪ್ರಾಪ್ತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಗೃಹಪ್ರವೇಶ ಯೋಗ, ಉದ್ಯೋಗದಲ್ಲಿ ಅಭಿವೃದ್ಧಿ, ಯತ್ನ ಕಾರ್ಯದಲ್ಲಿ ಜಯ. ಸಮಾಧಾನದಿಂದ ನಿಮ್ಮ ಮನಸ್ಸು ಹರುಷಗೊಳ್ಳಲಿದೆ. ಮನೆಯಲ್ಲಿ ಮಕ್ಕಳು ಹಾಗೂ ಪತ್ನಿಯೊಡನೆ ಪ್ರವಾಸವನ್ನು ಕೈಗೊಳ್ಳಲಿದ್ದೀರಿ.

ಕಟಕರಾಶಿ
ಕುಟುಂಬದ ಹಿರಿಯ ಸದಸ್ಯರೊಬ್ಬರ ಅಸೌಖ್ಯದ ಕಾರಣದಿಂದ ಮನೆಯ ವಾತಾವರಣ ಬೋರು ಎನಿಸಲಿದೆ. ಕುಟುಂಬದಲ್ಲಿ ಕಲಹ, ಸಲ್ಲದ ಅಪವಾದ, ಶತ್ರುತ್ವ, ಸುಳ್ಳು ಮಾತನಾಡುವುದು, ಪರಸ್ಥಳ ವಾಸ, ಆದಾಯಕ್ಕಿಂತ ಖರ್ಚು ಜಾಸ್ತಿ, ಪ್ರಯಾಣ ಮಾಡುವುದರಿಂದ ಅಶಾಂತಿ. ಮಕ್ಕಳ ವಿದ್ಯಾಪ್ರಗತಿಯ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು. ಸಹವಾಸ ದೋಷದ ಬಗ್ಗೆ ಜಾಗ್ರತೆ ಇರಲಿ.

ಸಿಂಹರಾಶಿ
ಗುರುಬಲದ ಪ್ರಬಲ ಪ್ರಭಾವದಿಂದ ನಿಮಗೆ ಜೀವನವು ಕಠೊರ ಎಂದು ಕಂಡು ಬಂದರೂ ನಿಮ್ಮ ಕಷ್ಟವು ಮಂಜಿನಂತೆ ಕರಗಿ ಹೋಗಲಿದೆ. ಬಂಧುಗಳಿಂದ ಕಿರಿಕಿರಿ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ದೂರ ಪ್ರಯಾಣ, ವ್ಯವಹಾರದಲ್ಲಿ ಏರುಪೇರು, ಹಣ ಬಂದರೂ ಉಳಿಯುವುದಿಲ್ಲ. ಶ್ರೀಕುಲದೇವತಾ ಆರಾಧನೆಯನ್ನು ಮಾಡಿರಿ. ಶುಭವಿದೆ.

ಕನ್ಯಾರಾಶಿ
ಉತ್ತಮ ಸಮಯವು ಈಗ ನಿಮ್ಮ ಮುಂದಿದೆ. ವಿರೋಧಿಗಳಿಂದ ತೊಂದರೆ, ಧನಲಾಭ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ಮನಸ್ಸಿಗೆ ಶಾಂತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಅದನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸದೆ. ಒಳ್ಳೆಯ ಕಾರ್ಯವನ್ನು ಮಾಡಿರಿ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಅಡ್ಡ ದಾರಿ ಹಿಡಿದಿದ್ದರೆ ಬಿಟ್ಟು ಬಿಡುವುದು.

ತುಲಾರಾಶಿ
ಪ್ರವಾಸದ ಮನಸ್ಸು ಮಾಡುವಿರಿ. ಕೈಹಾಕಿದ ಕೆಲಸದಲ್ಲಿ ವಿಘ್ನ, ಆಕಸ್ಮಿಕ ಕರ್ಚು, ಮನಸ್ಸಿನಲ್ಲಿ ಭಯಭೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ಅನಾರೋಗ್ಯ, ನಿಂದನೆ, ಬೇಸರ. ಆದರೆ ಈ ಸಮಯಬೇಡ. ಬೇಸಾಯಗಾರರಿಗೆ ಈಗ ತಲೆನೋವಿನ ಸಮಯವಾಗಿದೆ. ಕಾರ್ಮಿಕ ವರ್ಗದವರಿಗೆ ಈಗ ಉತ್ತಮ ಅಭಿವೃದ್ಧಿಯ ಕಾಲವಾಗಿರುತ್ತದೆ.

ವೃಶ್ಚಿಕರಾಶಿ
ಧನಾದಾಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದೀತು. ಅಧಿಕಾರಿಗಳಲ್ಲಿ ಕಲಹ, ಭೂಮಿ ಕಳೆದುಕೊಳ್ಳುವಿರಿ, ಮಾನಹಾನಿ,ಮಿತ್ರರಲ್ಲಿ ದ್ವೇಷ, ಶುಭವಾರ್ತೆಯನ್ನು ಕೇಳುವಿರಿ, ದೀರ್ಘಾವಧಿ ನರಳಾಟ, ನೀಚ ಜನರ ಸಹವಾಸ. ದಿನದಿಂದ ದಿನಕ್ಕೆ ಅಭಿವೃದ್ಧಿಯು ಕಂಡು ಬಂದೀತು. ಮಾವನ ಮನೆಯ ಕಡೆಯಿಂದ ನಿಮಗೆ ಸಹಾಯ ಒದಗಿ ಬಂದೀತು. ಶುಭವಾರ್ತೆ.

ಧನಸ್ಸುರಾಶಿ
ದ್ರವ್ಯಲಾಭ, ವಸ್ತ್ರಾಭರಣ ಪ್ರಾಪ್ತಿ, ಉದ್ಯೋಗದಲ್ಲಿ ಅಭಿವೃದ್ಧಿ, ಸ್ತ್ರೀ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಶುಭಕಾರ್ಯಗಳಲ್ಲಿ ಬಾಗಿ, ತೀರ್ಥಕ್ಷೇತ್ರ ದರ್ಶನ.ವೃತ್ತಿರಂಗ ಅಥವಾ ವಿದ್ಯಾರಂಗದವರಿಗೆ ಅಲ್ಪಸ್ವಲ್ಪ ಅಭಿವೃದ್ಧಿ ತೋರಿ ಬಂದು ಸಮಾಧಾನವಾಗಲಿದೆ. ದೇವಸ್ಥಾನಗಳಿಗೆ ಹೋಗುವಿರಿ. ನಿಮ್ಮ ಮನಸ್ಸು ಈ ದಿನ ಸ್ವಲ್ಪ ನಿರಾಳವಾದೀತು. ಉದ್ವೇಗವನ್ನು ಕಡಿಮೆ ಮಾಡಿರಿ.

ಮಕರರಾಶಿ
ಗೃಹ, ವಾಹನಾದಿಗಳ ಸಾಲವು ದೊರಕಿ ಮನಸ್ಸು ಸಮಾಧಾನ ಕಂಡೀತು. ಧನಲಾಭ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ, ಕಾರ್ಯಗಳು ಮುಂದುವರಿಯುತ್ತವೆ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಪಿತ್ರಾಜಿತ ಆಸ್ತಿ ಪ್ರಾಪ್ತಿ. ಉದ್ಯೋಗರಂಗದಲ್ಲಿ ಏರುಗತಿಯನ್ನು ಕಾಣುವಿರಿ. ಸಂತಾನಪ್ರಾಪ್ತಿಗಾಗಿ ಪೂಜೆ, ಪುರಸ್ಕಾರ ನಡೆದೀತು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡೀತು.

ಕುಂಭರಾಶಿ
ಒಳ್ಳೆಯ ಸುಧಾರಣೆಯ ದಿನಗಳಿವು. ಮಕ್ಕಳೊಂದಿಗೆ ಪರ ಊರ ಪ್ರವಾಸವನ್ನು ಕೈಗೊಳ್ಳುವಿರಿ. ಅಧಿಕ ಖರ್ಚು, ದಾಯಾದಿ ಕಲಹ, ಅಪಕೀರ್ತಿ, ವಾಹನ ರಿಪೇರಿಯಿಂದ ಖರ್ಚು, ಸುಳ್ಳು ಮಾತನಾಡುವುದು, ವ್ಯವಹಾರದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ವಿಘ್ನ. ಅಲ್ಪಸ್ವಲ್ಪ ಖರ್ಚು ಕಂಡು ಬಂದೀತು. ಒಳ್ಳೆಯ ಅನುಕೂಲದ ದಿನಗಳಿವು. ಆರೋಗ್ಯದಲ್ಲಿ ಸುಧಾರಣೆ ಇದೆ.

ಮೀನರಾಶಿ
ವೃತ್ತಿರಂಗದಲ್ಲಿ ಸುಧಾರಣೆ ತೋರಿ ಬರುವುದು. ಪತ್ನಿಗೆ ಅನಾರೋಗ್ಯ, ಮಿತ್ರರಿಂದ ತೊಂದರೆ, ಋಣಭಾದೆ, ಆಲಸ್ಯ ಮನೋಭಾವ, ಅಕಾಲ ಭೋಜನ, ನಂಬಿದ ಜನರಿಂದ ಮೋಸ, ಶೀತ ಸಂಬಂಧಿ ರೋಗಗಳು, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಆದರೂ ಒತ್ತಡವು ಹೆಚ್ಚಾದೀತು. ಸಹೋದ್ಯೋಗಿಗಳೊಂದಿಗೆ ಉತ್ತಮ ವ್ಯವಹಾರವನ್ನಿಟ್ಟು ಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡು ಬಂದೀತು.

Leave A Reply

Your email address will not be published.