ನಿತ್ಯಭವಿಷ್ಯ : 01-09-2020

0

ಮೇಷರಾಶಿ
ಕೋರ್ಟ್‌ ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಆತಂಕ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಹಿರಿಯರ ಆಶೀರ್ವಾದದಿಂದ ಅನುಕೂಲ. ಸಾಂಸಾರಿಕವಾಗಿ ಬಂಧು ಬಳಗದವರಿಂದ ಸಂತಸ ಹಾಗೂ ನೆಮ್ಮದಿ ಇರುತ್ತದೆ. ಉದರವ್ಯಾಧಿ ಹಾಗೂ ತಲೆಶೂಲೆಯ ವಿಚಾರದಲ್ಲಿ ಜಾಗ್ರತೆ ಮಾಡಿರಿ.

ವೃಷಭರಾಶಿ
ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ ದುಃಖಕ್ಕೆ ಗುರಿ ಮಾಡುವುದು, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ. ಮೀನುಗಾರರಿಗೆ ಉತ್ತಮ ಲಾಭ ತಂದು ಕೊಡಲಿದೆ. ಕಲಾವಿದರಿಗೆ ಇದ್ದುದರಲ್ಲೇ ತೃಪ್ತಿ ಪಡಬೇಕಾದೀತು. ವ್ಯವಹಾರದಲ್ಲಿ , ದೂರ ಸಂಚಾರದ ಬಗ್ಗೆ ಜಾಗ್ರತೆ ವಹಿಸಿರಿ. ಹಿತಶತ್ರುಗಳಿಂದ ಕಿರುಕುಳ ಅನುಭವಿಸುವಿರಿ.

ಮಿಥುನರಾಶಿ
‌ಆರ್ಥಿಕ ಸ್ಥಿತಿಯಲ್ಲಿ ಜಾಗ್ರತೆ ಮಾಡುವುದು. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಸಮಸ್ಯೆಗಳು ಕಂಡು ಬರಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ, ಮನಶಾಂತಿ, ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ವೃತ್ತಿರಂಗದಲ್ಲಿ ಕಠಿಣ ಪರಿಶ್ರಮವು ಅತೀ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ತೋರಿಬಂದೀತು.

ಕಟಕರಾಶಿ
ಸ್ನೇಹಿತರಿಂದ ಸಹಾಯ, ಪತಿ ಪತ್ನಿಯರಲ್ಲಿ ವೈಮನಸ್ಸು, ಆರ್ಥಿಕ ಬಿಕ್ಕಟ್ಟು. ನಿಮ್ಮ ಚಿಂತನೆಯ ಹಾಗೆ ನೀವೆಣಿಸಿದಂತಹ ಕೆಲಸ ಕಾರ್ಯಗಳೆಲ್ಲಾ ನಡೆಯಲಿವೆ. ಸಾಮಾಜಿಕ ರಂಗದಲ್ಲಿ ನಿಮ್ಮನ್ನು ನೀವು ತೊಡಿಗಿಸಿಕೊಳ್ಳುವಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಇರುತ್ತದೆ.

ಸಿಂಹರಾಶಿ
ಸಾಂಸಾರಿಕ ತುಸು ನೆಮ್ಮದಿಯು ತೋರಿ ಬಂದೀತು. ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ವೃತ್ತಿರಂಗದಲ್ಲಿ ಯಶಸ್ಸು, ಪರಿಶ್ರಮಕ್ಕೆ ತಕ್ಕ ವರಮಾನ ದೊರೆಯುವುದು. ಆರ್ಥಿಕವಾಗಿ ಶುಭಮಂಗಲ ಕಾರ್ಯಗಳಿಗೆ ಅನುಕೂಲವಾದೀತು. ಗೃಹ ನಿರ್ಮಾಣದಂತಹ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಮನೆ ರಿಪೇರಿ ಇರುವುದು.

ಕನ್ಯಾರಾಶಿ
ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿವೆ. ಆಪ್ತರಿಂದ ಸಹಾಯ, ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ, ಗೆಳೆಯರಿಂದ ಅನರ್ಥ, ಆಹಾರ ಸೇವನೆಯಲ್ಲಿ ಎಚ್ಚರ. ಕೃಷಿಕರಿಗೆ ಕೃಷಿ ಆದಾಯ ಸ್ವಲ್ಪಮಟ್ಟಿನ ನೆಮ್ಮದಿ ನೀಡಲಿದೆ. ಬಾಕಿ ವಸೂಲಿಯಾಗಲಿದೆ. ಸಾಮಾಜಿಕ ಕಾರ್ಯರಂಗದಲ್ಲಿ ಬಿಡುವಿಲ್ಲದಷ್ಟು ಕೆಲಸವಿದ್ದೀತು.

ತುಲಾರಾಶಿ
ಯೋಗ್ಯ ವಯಸ್ಕರಿಗೆ ವಿವಾಹ ಯೋಗಕ್ಕೆ ಸಮಸ್ಯೆ ತರಲಿದೆ. ದ್ರವ್ಯಲಾಭ, ಸಂತಾನ ಪ್ರಾಪ್ತಿ, ಪರರಿಂದ ಮೋಸ ಹೋಗುವಿಕೆ, ಉದ್ಯೋಗದಲ್ಲಿ ಅಭಿವೃದ್ಧಿ. ಅನಾವಶ್ಯಕವಾಗಿ ಹಣವು ನೀರಿನಂತೆ ಪೋಲಾದೀತು. ನೆರೆಹೊರೆಯ ಹಿತಶತ್ರುಗಳ ಕಾಟದಿಂದ ಮನಸ್ಸು ಉದ್ವಿಗ್ನ ವಾಗಲಿದೆ. ಕೈಕೆಳಗಿನವರ ಅಸಹಾಕಾರ ತೋರಿ ಬಂದೀತು.

ವೃಶ್ಚಿಕರಾಶಿ
ಧನಾಗಮನವು ಉತ್ತಮವಿದ್ದು ಶೇರು, ಲಾಟರಿ ಮುಂತಾದವುಗಳು ಫ‌ಲಿತಕ್ಕೆ ಬರಲಿವೆ. ವ್ಯಾಪಾರದಲ್ಲಿ ಅಭಿವೃದ್ಧಿ, ಹಿತಶತ್ರುಗಳಿಂದ ತೊಂದರೆ, ಮಾನಹಾನಿ, ದಂಡ ಕಟ್ಟುವಿರಿ, ಮನಸ್ಸು ಚಂಚಲ. ಅರೆಬರೆಯಾದ ಕಾರ್ಯಗಳು ಪೂರ್ಣಗೊಂಡು ಮನಸ್ಸಿಗೆ ಹಿತವಾದೀತು. ಉದ್ಯೋಗಿಗಳಿಗೆ ಊರಿಗೆ ವರ್ಗಾವಣೆಯ ಸಂಭವ.

ಧನುರಾಶಿ
ಕುಟುಂಬದಲ್ಲಿ ಅಹಿತಕರವಾದ ವಾತಾವರಣ, ಸ್ತ್ರೀ ಸೌಖ್ಯ, ಮನಶಾಂತಿ, ಆಕಸ್ಮಿಕ ಧನಲಾಭ, ಶತ್ರು ಬಾಧೆ, ಆಗಾಗ ಹಿತಶತ್ರುಗಳ ಬಗ್ಗೆ ಜಾಗ್ರತೆ ಮಾಡಿರಿ. ಸರಕಾರಿ ಕೆಲಸಗಳು ನಿಮ್ಮಿಚ್ಛೆಯಂತೆ ಪೂರ್ಣಗೊಂಡಾವು. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಹರಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆಯಿಂದ ತುಸು ಲಾಭ ತಂದೀತು.

ಮಕರರಾಶಿ
ಕಾರ್ಯಸಾಧನೆಗಾಗಿ ತಿರುಗಾಟ, ಬಾಕಿ ವಸೂಲಿ, ಸುಖ ಭೋಜನ, ಪುಣ್ಯಕ್ಷೇತ್ರ ದರ್ಶನ. ಧರ್ಮಕಾರ್ಯದಲ್ಲಿ ಆಸಕ್ತಿ. ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಬಗ್ಗೆ ಜಾಗ್ರತೆ ವಹಿಸಿರಿ. ವಿದೇಶದ ವ್ಯಾಪಾರ, ವ್ಯವಹಾರಗಳು ಚೇತರಿಕೆಯನ್ನು ತಂದು ಕೊಡಲಿವೆ.

ಕುಂಭರಾಶಿ
ಯಾವುದೇ ಕೆಲಸ ಕಾರ್ಯಗಳಿಗೆ ಪ್ರಯತ್ನ ಬಲದ ಅಗತ್ಯವಿದೆ. ಹಿತಶತ್ರುಗಳು ನಿಮ್ಮ ದಾರಿಯನ್ನು ತಪ್ಪಿಸಲಿದ್ದಾರೆ. ಸ್ವಯಂಕೃತ ಅಪರಾಧ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯ ಅನುಕೂಲ, ದುಷ್ಟರಿಂದ ದೂರವಿರಿ, ಅಧಿಕ ಕೋಪ. ಯಾವುದಕ್ಕೂ ನಿಮ್ಮ ವಿವೇಚನೆ ಜಾಗೃತಗೊಳಿಸಿರಿ. ಕುಟುಂಬದ ಸದಸ್ಯರೊಳಗೆ ಸಮಾಧಾನ ತರಲಿದೆ.

ಮೀನರಾಶಿ
ಕುಟುಂಬ ಸ್ಥಾನದಲ್ಲಿ ಹಿಂದಿನಗಿಂತಲೂ ಹೆಚ್ಚಿನ ಉತ್ತಮ ವಾತಾವರಣ ಕಂಡು ಬರಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಶುಭ, ವಾದ-ವಿವಾದಗಳಲ್ಲಿ ಎಚ್ಚರ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮನೋವ್ಯಥೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ವ್ಯಾಪಾರ, ವ್ಯವಹಾರವು ಅಧಿಕ ಲಾಭ ತಂದುಕೊಡಲಿದೆ.

Leave A Reply

Your email address will not be published.