ಮೇಷರಾಶಿ
ಸಾಂಸಾರಿಕವಾಗಿ ಗೃಹದಲ್ಲಿ ಶುಭಮಂಗಲ ಕಾರ್ಯಗಳು ನೆರವೇರಲಿದೆ. ಖರ್ಚುವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆ ಇರಲಾರದು. ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಶುಭಕಾರ್ಯ, ಅಧಿಕ ಖರ್ಚು. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ.
ವೃಷಭರಾಶಿ
ಸ್ಥಿರಾಸ್ತಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಸ್ನೇಹಿತರಿಂದ ಅನುಕೂಲ. ನಿಮ್ಮ ಅಧ್ಯಾತ್ಮಿಕ ಪ್ರವೃತ್ತಿ ನಿಮ್ಮ ಕ್ರಿಯಾಶೀಲತೆಗೆ ಸಾಧಕವಾಗಲಿದೆ. ಆಗಾಗ ಕೋಪತಾಪಗಳಿಂದ ಉದ್ವೇಗಕ್ಕೆ ಕಾರಣವಾದೀತು. ಸೂಕ್ತ ವ್ಯಕ್ತಿಗಳಿಂದ ಸಕಾಲದಲ್ಲಿ ಸಲಹೆ, ಸಹಕಾರ ಸಿಗಲಿದೆ. ಅಲಂಕಾರಿಕ ವಸ್ತುಗಳ ಖರೀದಿ.
ಮಿಥುನರಾಶಿ
ಮಕ್ಕಳಿಂದ ಕಿರಿಕಿರಿಯಾದರೂ ಆರ್ಥಿಕ ಸಹಾಯ. ಕ್ರಯ ವಿಕ್ರಯಗಳಲ್ಲಿ ಅಧಿಕ ಲಾಭ ದೊರಕಲಿದೆ. ಪರಸ್ತ್ರೀ ನಿಮಿತ್ತ ಕೆಟ್ಟ ಫಲಗಳನ್ನು ಅನುಭವಿಸಬೇಕಾದೀತು. ಉದ್ಯೋಗ, ಗೃಹ ಬದಲಾವಣೆಗೆ ಮನಸು ಮಾಡುವಿರಿ, ಆರೋಗ್ಯದ ಬಗ್ಗೆ ಉದರ ಸಂಬಂಧಿ ದೋಷಗಳು ಕಂಡುಬರುವುದು ಜಾಗ್ರತೆ ವಹಿಸಿರಿ. ಅತಿಥಿಗಳ ಆಗಮನ. ಕಂಕಣಬಲ ಕೂಡಿಬರಲಿದೆ.
ಕಟಕರಾಶಿ
ಆಗಾಗ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕಾಡಲಿವೆ. ಶನಿ ಗ್ರಹಗಳು ಪ್ರತಿಕೂಲವಾಗಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸುವಂತಾದೀತು. ಉದ್ಯೋಗದಲ್ಲಿ ಕೀರ್ತಿ, ಪ್ರತಿಷ್ಠೆ, ಉದ್ಯೋಗದಲ್ಲಿ ಒತ್ತಡ, ಸಾಲದ ಚಿಂತೆ, ಅನಗತ್ಯ ತಿರುಗಾಟಕ್ಕೆ ಧನವ್ಯಯ.ರಾಹು, ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ಗಮನ ಹರಿಸುವುದು.
ಸಿಂಹರಾಶಿ
ಬಂಧುಗಳಿಗಾಗಿ ಆಕಸ್ಮಿಕ ಖರ್ಚು, ಕಣ್ಣಿನ ತೊಂದರೆ, ತಲೆನೋವಿನ ಬಗ್ಗೆ ಜಾಗ್ರತೆ. ಕುಲದೇವರ ದರ್ಶನಕ್ಕೆ ಪ್ರಯಾಣ, ಸ್ವಂತ ವ್ಯಾಪಾರ, ಸರ್ಕಾರಿ ಕೆಲಸದವರಿಗೆ ಅನುಕೂಲ. ಸಂಚಾರದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಆರ್ಥಿಕ ಸ್ಥಿತಿಯಿಂದ ನೆಮ್ಮದಿ ಇದ್ದರೂ ಆಕಸ್ಮಿಕ ಖರ್ಚುವೆಚ್ಚಗಳು ತೋರಿಬರಲಿದೆ.
ಕನ್ಯಾರಾಶಿ
ಶತ್ರುಗಳಿಂದ ದೂರವಿದ್ದರೂ ಅವಮಾನ ಭೀತಿ ತಪ್ಪದು. ದುರ್ನಡತೆಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಅನುಭವಿಸುವಂತಾದೀತು. ಆರ್ಥಿಕವಾಗಿ ಖರ್ಚುವೆಚ್ಚಗಳೇ ಅಧಿಕವಾದೀತು. ಮಕ್ಕಳಿಂದ ಶುಭಫಲವಿದ್ದು ಸಂತಸ.ಮಿತ್ರರೊಂದಿಗೆ ವಾಗ್ವಾದ, ಸಂಗಾತಿ ಮತ್ತು ವಾಹನಕ್ಕಾಗಿ ಧನವ್ಯಯ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.
ತುಲಾರಾಶಿ
ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸಂತಸ ತರಲಿದೆ.ಸರ್ಕಾರಿ, ರಾಜಕೀಯ ವ್ಯಕ್ತಿಗಳ ಕಚೇರಿಯಲ್ಲಿ ಸೇವಾವೃತ್ತಿ ಉದ್ಯೋಗ, ಅಧಿಕಾರಿ ವರ್ಗದವರಿಗೆ ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ಕಲಹಕ್ಕೆ ಕಾರಣವಾದೀತು. ಮಕ್ಕಳಿಗೆ ಅಭಿವೃದ್ಧಿ ಇದೆ. ಹೆಚ್ಚಿನ ಹೂಡಿಕೆಗಳಿಗೆ ದುಡುಕದಿರಿ. ಗೃಹ-ಉದ್ಯೋಗ ಬದಲಾವಣೆಗೆ ಸಕಾಲ, ಸಾಲದಿಂದ ಮುಕ್ತರಾಗುವಿರಿ.
ವೃಶ್ಚಿಕರಾಶಿ
ದಾಯಾದಿಗಳು ನಿಮಗೆ ಸಹಕಾರ ನೀಡಲಿದ್ದಾರೆ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಗೆ ಮುಂಭಡ್ತಿಯೋಗವಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಫಲ ಸಿಗಲಿದೆ. ಮಾನಹಾನಿ, ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಸ್ಥಳದಲ್ಲಿ ಅವಘಡ, ಸಾಂಸಾರಿಕವಾಗಿ ಸಂತಸದ ದಿನಗಳು ಎದುರಾದೀತು.
ಧನಸ್ಸುರಾಶಿ
ಹಣಕಾಸಿನ ಬಗ್ಗೆ ಹೆಚ್ಚಿನ ಗಮನಹರಿಸಿ. ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆ. ಪಿತ್ರಾರ್ಜಿತ ಆಸ್ತಿ, ಕೆಲಸದ ಅಡೆತಡೆ, ಆಗಾಗ ಸಂಚಾರಗಳು ಒದಗಿ ಬರುತ್ತವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ತಕ್ಕುದಾದ ಫಲವು ದೊರಕಲಿದೆ. ಮಾನಸಿಕ ಕಿರಿಕಿರಿ, ವಾಹನ ಅಪಘಾತ, ದಾಂಪತ್ಯದಲ್ಲಿ ಜಗಳ.
ಮಕರರಾಶಿ
ಕಾರ್ಮಿಕ ವರ್ಗದವರಿಗೆ ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ ತಂದೀತು. ವ್ಯಾಪಾರ ವ್ಯವಹಾರದಲ್ಲಿ ತುಸು ಚೇತರಿಕೆ ಇರುತ್ತದೆ. ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ನೆರವೇರಲಿದೆ. ಸ್ನೇಹಿತರಿಂದ ಆಕಸ್ಮಿಕ ನಷ್ಟಗಳು, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಬಲಕ್ಕೆ ಒತ್ತು ನೀಡಿರಿ. ನೆರೆಹೂರೆ, ಬಂಧುಗಳೊಂದಿಗೆ ಕಲಹ, ಪತ್ರ ವ್ಯವಹಾರಗಳಿಂದ ಸಂಕಷ್ಟ.
ಕುಂಭರಾಶಿ
ವೃತ್ತಿರಂಗದಲ್ಲಿ ಕಿರಿಕಿರಿಗಳು ತೋರಿಬಂದರೂ ಸುಧಾರಿಸಿಕೊಂಡು ಹೋಗುವುದು ಉತ್ತಮ.ದಾಂಪತ್ಯದಲ್ಲಿ ಅಹಂಭಾವ ಅಧಿಕವಾಗಿರುವುದು, ಮಿಶ್ರ ಫಲದಾಯಕ ದಿನವಿದು. ಅನಗತ್ಯ ಮಾತಿನಿಂದ ಮಿತ್ರರು ದೂರವಾಗುವರು.ದೇಹಾರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ತೋರಿಬರಲಿದೆ. ಆರ್ಥಿಕವಾಗಿ ಖರ್ಚಿನ ಬಗ್ಗೆ ಜಾಗ್ರತೆ ವಹಿಸಿರಿ.ಆರ್ಥಿಕ ಸಂಕಷ್ಟಗಳು ಬಗೆಹರಿಯುವ ಸಾಧ್ಯತೆ,
ಮೀನರಾಶಿ
ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗಲಿದೆ ಉತ್ತಮ ಗುರುಬಲವು ನಿಮಗಿದ್ದರೂ ನಿಮ್ಮ ಮನಸ್ಸಿನಲ್ಲಿ ನಾನಾ ಚಿಂತೆ ನಿಮ್ಮನ್ನು ಕಾಡಲಿದೆ. ಸ್ವತಃ ವ್ಯಾಪಾರಿಗಳಿಗೆ ಲಾಭ. ಮಕ್ಕಳಿಂದ ಸಾಲ ಅಧಿಕ, ಕಳ್ಳತನವಾಗುವ ಸಾಧ್ಯತೆಯಿದೆ. ಭವಿಷ್ಯದ ಕುರಿತು ಯೋಜನೆಯನ್ನು ರೂಪಿಸಲು ಸಕಾಲ. ದಿನಾಂತ್ಯಕ್ಕೆ ಶುಭಫಲ.