ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 02-07-2020

ನಿತ್ಯಭವಿಷ್ಯ : 02-07-2020

- Advertisement -

ಮೇಷರಾಶಿ
ಜ್ವರಾದಿ ಶೀತಬಾಧೆಗಳು ಪ್ರಾಯದವರನ್ನು ಕಂಗೆಡಿಸಲಿದೆ. ಮಾನಸಿಕ ಕಿರಿಕಿರಿ, ಬೇಸರ, ಸೋಮಾರಿತನ, ಆಕಸ್ಮಿಕ ಉದ್ಯೋಗ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಅಧಿಕಾರಿ ವರ್ಗದವರಿಗೆ ಉದ್ಯೋಗ ದಲ್ಲಿ ಭಡ್ತಿ ತಡೆ ಹಿಡಿದೀತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ನವವಿವಾಹಿತರಿಗೆ ಸಂತಾನ ಯೋಗವಿದೆ.

ವೃಷಭರಾಶಿ
ಉನ್ನತ ವ್ಯಾಸಂಗಕ್ಕಾಗಿ ಧನವಿನಿಯೋಗವಾಗುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಕಿರಿಕಿರಿ, ಸಂಗಾತಿಯೊಂದಿಗೆ ಜಗಳ, ಕೆಲಸಗಾರರಿಗೆ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿವೆ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚುವೆಚ್ಚವು ಹೆಚ್ಚಲಿದೆ.

ಮಿಥುನರಾಶಿ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ತಂದೀತು. ಶುಭ ಕಾರ್ಯಗಳಿಗೆ ಅಡೆತಡೆಗಳು ಬಂದಾವು. ಚಿಂತೆಯನ್ನು ದೂರ ಮಾಡಲು ವ್ಯಸನದ ದಾಸರಾಗದಿರಿ, ಶರೀರದಲ್ಲಿ ವಿಪರೀತ ನೋವು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳಿಂದ ಮಾನಹಾನಿ, ಸಾಲಗಾರರಿಂದ ಕುಟುಂಬಕ್ಕೆ ಸಂಕಷ್ಟ. ಜೋಕೆ. ಮಹತ್ಕಾರ್ಯ ಸಾಧನೆಗೆ ಧನಹಾನಿಯಾದೀತು.

ಕಟಕರಾಶಿ
ಪರದೇಶದ ವೃತ್ತಿಗಾಗಿ ನಿರುದ್ಯೋಗಿಗಳಿಗೆ ಕರೆ ಬರಲಿದೆ. ಆರೋಗ್ಯವು ಹದಗೆಟ್ಟು ಸಮಸ್ಯೆ ತಂದೀತು. ಮಕ್ಕಳಿಂದ ನೋವು, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಉತ್ತಮ ಹೆಸರು, ಗೌರವ ಸನ್ಮಾನ ಪ್ರಾಪ್ತಿ, ಕೆಟ್ಟ ಕೆಲಸ ಮಾಡುವ ಆಲೋಚನೆ. ದುಡುಕು ವರ್ತನೆಯಿಂದ ಕಾರ್ಯ ಹಾನಿಯಾದೀತು. ನ್ಯಾಯಾ ಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಲಿವೆ.

ಸಿಂಹರಾಶಿ
ವ್ಯಾಪಾರ, ವ್ಯವಹಾರಗಳು ಲಾಭಕರವಾಗಲಿದೆ. ಸ್ಥಿರಾಸ್ತಿ-ವಾಹನದಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಕೆಲಸಗಾರರಿಂದ ತೊಂದರೆ, ಅಧಿಕಾರಿಗಳಿಂದ ಕಿರಿಕಿರಿ, ನಿದ್ರೆ ಹೆಚ್ಚು ಮಾಡುವಿರಿ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಅಗತ್ಯವಿದೆ. ಜೀರ್ಣ ಕ್ರಿಯೆಯಲ್ಲಿ ಉಷ್ಣವಾಯು ದೋಷವು ಬಾಧೆ ಕೊಡಲಿದೆ. ಆವಶ್ಯಕ ಕಾರ್ಯವೊಂದು ಅಡೆತಡೆಯಿಂದ ನಡೆಯಲಿದೆ.

ಕನ್ಯಾರಾಶಿ
ಹಿರಿಯರಿಗೆ ಆಪತ್ತು ಕಾಣಿಸಲಿದೆ. ಹಣಕ್ಕಾಗಿ ಅಲೆದಾಟವು ನಿಷ್ಪಲವೆನಿಸಲಿದೆ. ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅನುಕೂಲ, ಹಣಕಾಸು ಅಡೆತಡೆ, ದಾಂಪತ್ಯದಲ್ಲಿ ಕಲಹ, ಶತ್ರುಗಳ ವಿರುದ್ಧ ಜಯ. ಗೌಪ್ಯ ವಿಚಾರವು ಬಹಿರಂಗವಾಗಿ ರಾದ್ಧಾಂತವಾದೀತು. ವಿವಾಹಿತರಿಗೆ ಸಂತತಿ ಕ್ಷೇಶ ಕಾಣಿಸಲಿದೆ. ಸರಕಾರಿ ಇಲಾಖೆಯಲ್ಲಿ ಅಪಜಯ.

ತುಲಾರಾಶಿ
ಮಕ್ಕಳ ವಿದ್ಯಾ ಪ್ರಗತಿಯಿಂದ ಮನಸ್ಸು ಕೊಂಚ ಹಗುರವೆನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿ ಮುನಿಸಿನಿಂದಾಗಿ ವಿಳಂಬವಾದೀತು. ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರೇ ಶತ್ರುವಾಗುವರು, ಅನಗತ್ಯ ವಾದ-ವಿವಾದ, ಸ್ಥಿರಾಸ್ತಿ ಮಾರಾಟದಿಂದ ಲಾಭ. ವೈದ್ಯಕೀಯ ವೃತ್ತಿ ನಿರತರಿಗೆ ಈ ಮಾಸವು ಉತ್ತಮ ಫ‌ಲ ನೀಡಲಾರದು.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಸ್ಥಾನ ಪಲ್ಲಟ ಯೋಗವಿದೆ. ತಂದೆಯಿಂದ ನೋವು, ದೂರ ಪ್ರಯಾಣಕ್ಕೆ ಮನಸ್ಸು, ಪ್ರಯಾಣಕ್ಕೆ ಅಡೆತಡೆ, ನೆಮ್ಮದಿ ಇಲ್ಲದ ಜೀವನ, ಕೆಲಸ ಕಾರ್ಯಗಳಲ್ಲಿ ಜಯ, ಪರಿಹಾರ: ಶಿವಲಿಂಗಕ್ಕೆ ತೈಲಾಭಿಷೇಕ ಮಾಡಿಸಿ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನವೆನಿಸಲಿದೆ. ಬಂಧು ಸಮಾಗಮ, ಮಗಳ ವಿವಾಹದ ಸಮಾಲೋಚನೆ ನಡೆಯಲಿದೆ. ದಿನಾಂತ್ಯ ಶುಭವಾರ್ತೆ ಸಿಗಲಿದೆ.

ಧನುರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಅತಿಯಾದ ನಿದ್ರಾಭಾವ, ಶರೀರದಲ್ಲಿ ಸೋಮಾರಿತನ, ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ ಎದುರಾಗುವುದು. ಕಚೇರಿಯಲ್ಲಿ ಯಾರದೋ ತಪ್ಪಿಗೆ ದಂಡ ತೆರುವ ಪ್ರಸಂಗ ಭಡ್ತಿಯನ್ನು ತಡೆಹಿಡಿಯಲಿದೆ. ಭೂ ಸಂಬಂಧಿ ವ್ಯವಹಾರ ಫ‌ಲ ನೀಡಲಿದೆ.

ಮಕರರಾಶಿ
ಬಂಡವಾಳದಲ್ಲಿ ಹಣ ನಷ್ಟವಾದೀತು. ದಂಪತಿಯಲ್ಲಿ ವಿರಸ ತೋರಿ ಬರಲಿದೆ. ಪಾಲುದಾರಿಕೆಯಲ್ಲಿ ಲಾಭ, ವ್ಯಾಪಾರ-ಉದ್ಯಮದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಆರ್ಥಿಕ ಸಂಕಷ್ಟಕ್ಕೆ ಮುಕ್ತಿ, ಪ್ರೇಮ ವಿಚಾರವಾಗಿ ಕಲಹ. ನವವಿವಾಹಿತ ರಿಗೆ ಸಂತಾನ ಭಾಗ್ಯದ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ವಂಚನೆ ತೋರಿ ಬಂದೀತು. ಪ್ರವಾಸ ಯೋಗವಿದೆ.

ಕುಂಭರಾಶಿ
ಶತ್ರುಗಳ ಬಾಧೆಯಿಂದ ಕಾರ್ಯಭಗವಾದೀತು. ಶುಭಕಾರ್ಯಗಳಿಗೆ ತಡೆ ತಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಉದ್ಯೋಗ ಸ್ಥಳದಲ್ಲಿ ಬೇಸರ, ಆಲಸ್ಯ ಮನೋಭಾವ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಹೋದ್ಯೋಗಿಗಳಿಗೆ ಖರ್ಚು, ಬೆವರು ದೋಷ, ಆರೋಗ್ಯದಲ್ಲಿ ವ್ಯತ್ಯಾಸ. ಹಿರಿಯರು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗ್ರತೆ ಮಾಡಿರಿ.

ಮೀನರಾಶಿ
ಹಳೇ ಬಾಕಿ ವಸೂಲಾಗಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡವಿದೆ. ಮಕ್ಕಳಿಂದ ಸಹಕಾರ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದೂರ ಪ್ರಯಾಣ ಸಾಧ್ಯತೆ, ದೇವತಾ ಕಾರ್ಯಕ್ಕಾಗಿ ಖರ್ಚು, ಈ ದಿನ ಅದೃಷ್ಟ ಪ್ರಾಪ್ತಿ. ದೂರ ಪ್ರಯಾಣದ ಆಯಾಸದಿಂದ ಸಮಸ್ಯೆ ಕಾಣಬಹುದು. ನ್ಯಾಯಾಲಯದ ಕೆಲಸಗಳು ನಿಮ್ಮ ಪಾಲಿಗೆ ಸುಲಭವಾಗಲಿವೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular