Horoscope : ದಿನಭವಿಷ್ಯ : ತುಲಾರಾಶಿಯವರಿಗೆ ಇಷ್ಟ ಸಿದ್ದಿಯ ಕಾಲ

ಮೇಷರಾಶಿ
ಜೀವನ ಹೊಸ ಆಯಾಮದ ಕಡೆಗೆ ಸಾಗುವ ಸೂಚನೆ, ಸ್ಥಿರಾಸ್ತಿ ನಷ್ಟ, ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗದ ಸಮಸ್ಯೆ ಪರಿಹಾರ ವಾಗಲಿದೆ, ಬಂಧುಗಳ ಭೇಟಿಯಿಂದ ಮನೆಯಲ್ಲಿ ಸಂತಸ, ಉದ್ಯೋಗ ನಿಮಿತ್ತ ದೂರ ಪ್ರಯಾಣ.

ವೃಷಭರಾಶಿ
ಆಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ, ಶತ್ರುಗಳ ಭಯ ನಿವಾರಣೆ, ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ದಿ, ಮಿತ್ರರಿಂದ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಬಂಧುಗಳಿಂದ ಅನುಕೂಲ.

ಮಿಥುನರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ ಉಂಟಾಗಲಿದೆ, ಸರಕಾರಿ ಕೆಲಸಗಳು ಸುಸೂತ್ರವಾಗಿ ನಡೆಯಲಿದೆ, ಅನಾರೋಗ್ಯ ಸಮಸ್ಯೆ, ಮಳೆಯರಿಗೆ ಇಷ್ಟಾರ್ಥಿ ಸಿದ್ದಿಸದು, ಕೂಡಿಟ್ಟ ಹಣದ ಉಪಯೋಗ, ವ್ಯವಹಾರದಲ್ಲಿ ತೊಡಕು, ಆತುರದಿಂದ ಅಪಘಾತಗಳು, ವಾಹನ ಚಾಲನೆಯಲ್ಲಿ ಎಚ್ಚರಿಕೆ

ಕರ್ಕಾಟಕರಾಶಿ
ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ, ನಿಮ್ಮ ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ, ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರಗಳಿಗೆ ಅನುಕೂಲ, ಉದ್ಯೋಗ ಗೃಹ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ಮೇಲಾಧಿಕಾರಿಗಳ ಒತ್ತಡ ಬೇಸರ ತರಲಿದೆ, ಪೂರ್ವ ತಯಾರಿ ಇಲ್ಲದ ಕೆಲಸವನ್ನು ಸಕಾಲದಲ್ಲಿ ಮುಗಿಸುವಿರಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಮಕ್ಕಳಿಂದ ಖರ್ಚು, ಪ್ರತಿಷ್ಠೆ ಗೌರವಕ್ಕೆ ಕುಂದು ಬರುವುದು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ.

ಇದನ್ನೂ ಓದಿ : ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ : ಪುನೀತ್ ಸಾವಿನ ಬೆನ್ನಲ್ಲೇ ಹೃದಯ ತಪಾಸಣೆಗೆ ಮುಗಿಬಿದ್ದ ಬೆಂಗಳೂರು ಜನ

ಕನ್ಯಾರಾಶಿ
ಧನಹಾನಿ ಸಂಭವ, ವ್ಯವಹಾರವನ್ನು ಪೂರ್ಣವಾಗಿ ಅವಲೋಕಿಸಿ ಮಾಡುವುದು ಉತ್ತಮ, ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ ಅಧಿಕ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆ

ತುಲಾರಾಶಿ
ಇಷ್ಟ ಸಿದ್ದಿಯ ಕಾಲ, ಸಾಂಸಾರಿಕ ಸಮಸ್ಯೆಗಳು ಪರಿಹಾರವಾಗಲಿದೆ, ಶತ್ರುಗಳ ಉಪಟಳವನ್ನು ಧೈರ್ಯದಿಂದ ಎದುರಿಸಿ, ಆಸ್ತಿ ವಿಚಾರದಲ್ಲಿ ಲಾಭ ದೊರೆಯಲಿದೆ, ಉದ್ಯೋಗ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು

ವೃಶ್ಚಿಕರಾಶಿ
ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ, ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪ, ಬುದ್ದಿ ಚಂಚಲವಾಗಿ ಹಿಡಿದ ಕಾರ್ಯಕ್ಕೆ ಅರ್ಧಕ್ಕೆ ನಿಲ್ಲುವ ಸಂಭವವಿದೆ, ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸೂಕ್ತ ಕಾಲ, ಆರೋಗ್ಯ ಸಮಸ್ಯೆಯಿಂದ ಭಾದೆ

ಧನಸ್ಸುರಾಶಿ
ಸರಕಾರಿ ವಲಯದಲ್ಲಿ ಅಪೇಕ್ಷಿತ ಲಾಭ ದೊರೆಯುತ್ತದೆ, ವಿದೇಶಿ ಪ್ರಯಾಣ ಯೋಗ, ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ, ಕಷ್ಟಕಾಲದಲ್ಲಿ ಪರೋಪಕಾರದ ಬುದ್ದಿ, ಕಲಹ ಮತ್ತು ಮನಸ್ತಾಪಗಳು, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಅತಿಯಾದ ಉದ್ಯೋಗ ಒತ್ತಡ

ಮಕರರಾಶಿ
ಅಲ್ಪ ಅನಾರೋಗ್ಯ ಕಷ್ಟಕರವೆನಿಸುತ್ತದೆ, ದಿನೇ ದಿನೇ ಅಭಿವೃದ್ದಿ ತೋರಿ ವ್ಯವಹಾರ ನಿಮ್ಮಿಷ್ಟದಂತೆ ನಡೆಯುತ್ತದೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಧನಾಗಮನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಬುದ್ಧಿಹೀನರಾಗುವಿರಿ

ಕುಂಭರಾಶಿ
ವ್ಯಾಪಾರ ಉತ್ತಮವಾಗಿರುತ್ತದೆ, ಉತ್ಸಾಹ ಮೂಡುತ್ತದೆ, ದೋಷ ಪರಿಹಾರಕ್ಕೆ ಜಲದಾನ ಮಾಡಿರಿ, ಮನೆ, ಆಸ್ತಿ ಖರೀದಿ ಯೋಗ, ಸಾಲಗಾರರಿಂದ ಮುಕ್ತಿ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಕುಟುಂಬದಲ್ಲಿ ಅಂತಃಕಲಹಗಳು, ಹಿರಿಯರಿಗೆ ನೋವುಂಟು ಮಾಡುವಿರಿ

ಮೀನರಾಶಿ
ನಿರ್ಲಕ್ಷ್ಯತೆಯಿಂದ ಕೆಲಸ ಮುಂದೂಡುವ ಸ್ವಭಾವ, ಮಿತ್ರರ ಸಹಕಾರದಿಂದ ವ್ಯವಹಾರಿಕ ಅಭಿವೃದ್ದಿ, ಕುಟುಂಬದ ಜವಾಬ್ದಾರಿ ಹೆಚ್ಚುವುದು, ಆರೋಗ್ಯದ ಚಿಂತೆ ಕಾಡುವುದು, ಪ್ರೀತಿ-ಪ್ರೇಮದ ವಿಷಯಗಳಿಗೆ ಮನಸ್ಸು, ಸ್ಥಿರಾಸ್ತಿ ವಿಷಯಗಳಿಂದ ಘಾಸಿ, ಅಧಿಕಾರಿಗಳಿಂದ ಅನುಕೂಲ

ಇದನ್ನೂ ಓದಿ : ದೇಹದ ಬೊಜ್ಜುನ್ನುಬೇಗನೆ ಕರಗಿಸಬೇಕಾ : ಹಾಗಾದ್ರೆ ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯಿರಿ

Comments are closed.